ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕೇಳಿದರೂ ಸಿಗುತ್ತಿಲ್ಲ ಉದ್ಯೋಗದ ‘ಖಾತ್ರಿ‘: ಉದ್ಯೋಗ ನೀಡಲು ಪಿಡಿಒಗಳ ಹಿಂದೇಟು

Published : 16 ಸೆಪ್ಟೆಂಬರ್ 2023, 7:07 IST
Last Updated : 16 ಸೆಪ್ಟೆಂಬರ್ 2023, 7:07 IST
ಫಾಲೋ ಮಾಡಿ
Comments
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಎಲ್ಲೆಲ್ಲಿ ಖಾತ್ರಿ ಯೋಜನೆ ಸಮಸ್ಯೆ
ಆಳಂದ ತಾಲ್ಲೂಕಿನ ಲಿಂಗನವಾಡಿ ಚಿಂಚನಸೂರು ಕೆರೆಯಂಬಲಗಾ ನರೋಣಾ ಸಂಗೊಳಗಿ‌ ಡಣ್ಣೂರ ಕರಹರಿ ಸಾವಳಗಿ ಬೆಳಮಗಿ ವಾಗ್ದರಿ ಖಜೂರಿ ನಿಂಬರ್ಗಾ ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಹಲಕರ್ಟಿ ಇಂಗಳಗಿ ಕಮರವಾಡಿ ಶಹಬಾದ್ ತಾಲ್ಲೂಕಿನ ಹೊನಗುಂಟಾ ಕಲಬುರಗಿ ತಾಲ್ಲೂಕಿನ ಕುಸನೂರು ತಾಂಡಾಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡಲು ಹಿಂದೇಟು ಹಾಕಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಪರಿಶೀಲಿಸುವೆ: ಪ್ರಿಯಾಂಕ್ ಖರ್ಗೆ
‘ಆಳಂದ ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸರಿಯಾಗಿ ಉದ್ಯೋಗ ನೀಡಲಾಗುತ್ತಿಲ್ಲ ಎಂಬ ಬಗ್ಗೆ ದೂರುಗಳು ಬಂದಿವೆ. ಆದರೆ ಬೇರೆ ತಾಲ್ಲೂಕುಗಳಲ್ಲಿಯೂ ಈ ಸಮಸ್ಯೆ ಇರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ‍ಪರಿಶೀಲಿಸುತ್ತೇವೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ರಾಜ್ಯದಲ್ಲಿ ಒಟ್ಟು 13 ಕೋಟಿ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದ್ದು ಅಷ್ಟಕ್ಕೆ ಅನುದಾನ ಲಭ್ಯವಿದೆ. ಈಗಾಗಲೇ 8.5 ಕೋಟಿ ಮಾನವ ದಿನಗಳ ಗುರಿ ತಲುಪಿದ್ದೇವೆ. ಇದೇ 20ರಂದು ದೆಹಲಿಗೆ ತೆರಳುತ್ತಿದ್ದು ರಾಜ್ಯದಲ್ಲಿ ಬರಗಾಲ ಎದುರಾಗಿರುವುದರಿಂದ 16 ಕೋಟಿ ಮಾನವ ದಿನಗಳಿಗೆ ಅನುಮತಿ ನೀಡುವಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT