ಮಳಖೇಡನಿಂದ ಸಂಗಾವಿ (ಎಂ) ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ, ತಾಲ್ಲೂಕಿನ ಸಟಪಟನಹಳ್ಳಿ ಸೇತುವೆ ಮುಳುಗಡೆಯಾಗಿದೆ. ಜೊತೆಗೆ ಬಿಬ್ಬಳ್ಳಿ ಸೇತುವೆ, ಹೆಡ್ಡಳ್ಳಿ ಸೇರಿದಂತೆ ಕಾಗಿಣಾ ನದಿ ಮೇಲಿರುವ ಸೇತುವೆಗಳು ಬಹುತೇಕ ಮುಳುಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಅತಿವೃಷ್ಟಿಯಿಂದಾಗಿ ಜನ ಜೀವನ ಹಾಗೂ ರೈತರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸುರಕ್ಷತೆಯತ್ತ ತೆರಳುತ್ತಿದ್ದಾರೆ. ಭೀಕರ ಮಳೆಯಿಂದಾಗಿ ತಾಲ್ಲೂಕಿನಲ್ಲಿರುವ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಗ್ರಾಮಗಳ ಮನೆಗಳಿಗೆ ನೀರು ನುಗ್ಗುತ್ತಿದೆ.