ಕಳೆದ 2– 3 ವರ್ಷಗಳಿಂದ ಸರಿಯಾಗಿ ಮಳೆಯಾಗದ ಕಾರಣ ಕೃಷಿ ಹೊಂಡಗಳು, ಕೆರೆಗಳು ತುಂಬಿರಲಿಲ್ಲ. ಅವುಗಳಲ್ಲಿ ರಾಮನಗರದ ‘ಗೋಕಾಟ’ ಎಂದು ಕರೆಯುವ ಕೆರೆ ಈಗ ಭರ್ತಿಯಾಗಿದೆ. ಇನ್ನೂ ಹೀಗೆ 2 – 3 ಮಳೆ ಬಂದರೆ ಕೆರೆಗಳೆಲ್ಲ ಭರ್ತಿಯಾಗಿ ಕೊಳವೆ ಬಾವಿಗಳಿಗೆ, ಪುರಾತನ ಬಾವಿಗಳಿಗೆ ನೀರು ಬರುತ್ತದೆ. ನೂರಕ್ಕೂ ಹೆಚ್ಚು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿ ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಗ್ರಾಮ ಪಂಚಾಯಿತಿಯವರು ಕೆರೆಗಳ ರಕ್ಷಣೆಗೆ ಮುಂದಾಗಬೇಕು ಎಂದು ಕೆರೆಗಳನ್ನು ಬುಧವಾರ ವೀಕ್ಷಿಸಿದ ಗ್ರಾಮದ ಮುಖಂಡರಾದ ಸಿದ್ದು ಜಿಡಗಿ, ಪಂಡಿತ ನಾವಿ, ಸುರೇಶ ರಾಖಾ, ರೇವಣಸಿದ್ಧ ನ್ಯಾಮಗೊಂಡ, ಮಕ್ಬುಲ್ ನಿಗೇವಾನ್ ಒತ್ತಾಯಿಸಿದರು.