ಮಂಗಳವಾರ ಬೆಂಗಳೂರಿನಲ್ಲಿ ಭೇಟಿ ಮಾಡಿದ ಸಂಸದರು, ನೀಲೂರು ಗ್ರಾಮದಲ್ಲಿ ಮೈಬೂಬ್ ಸುಬಾನಿ ದರ್ಗಾ ಇದ್ದು, ವರ್ಷದಲ್ಲಿ ಎರಡು ಬಾರಿ ಉರುಸ್ ನಡೆಯುತ್ತದೆ. ಈ ಉತ್ಸವಕ್ಕೆ ನೆರೆಯ ಮಹಾರಾಷ್ಟ್ರ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ಅಪಾರ ಭಕ್ತರು ಬರುತ್ತಾರೆ. ಜತೆಗೆ, ಈ ಗ್ರಾಮದ ಸುತ್ತಲಿನ ರೈತರು ಕಬ್ಬು, ಬಾಳೆ ಬೆಳೆಯುತ್ತಾರೆ. ಅವರ ಉತ್ಪನ್ನ ಸಾಗಿಸುವುದಕ್ಕೂ ಮಾರ್ಗದ ಅವಶ್ಯಕತೆ ಇದೆ ಎಂದು ಮನವರಿಕೆ ಮಾಡಿದರು.