<p><strong>ಕಲಬುರ್ಗಿ: </strong>‘ಮೀಸಲಾತಿ ಕುರಿತು ದೇಶದ ನ್ಯಾಯಾಲಯಗಳು ಕೂಡ ಸ್ಪಷ್ಟವಾದ ನಿಲುವು ತಾಳುತ್ತಿಲ್ಲ. ಸರ್ಕಾರಕ್ಕೆ ಬೇಕಾಗಿದ್ದರೆ ಕೊಡಬಹುದು, ಬೇಡವಾದರೆ ಬಿಡಬಹುದು ಎಂಬ ನಿಲುವಿನಲ್ಲಿವೆ. ಇದರಿಂದಾಗಿ ಮೀಸಲಾತಿಯ ವಿರುದ್ಧದ ಧ್ವನಿಗಳು ಗಟ್ಟಿಯಾಗುತ್ತಿವೆ’ ಎಂದು ಹೈಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅವರು ಕಳವಳ ವ್ಯಕ್ತಪಡಿಸಿದರು.</p>.<p>ಗುಲಬರ್ಗಾ ವಿಶ್ವವಿದ್ಯಾಲಯದ ಪರಿಶಿಷ್ಟ ಹಾತಿ ಹಾಗೂ ಪರಿಶಿಷ್ಟ ಪಂಗಡಗಳ ನೌಕರರ ಕಲ್ಯಾಣ ಸಂಘದಿಂದ ‘ಮೀಸಲಾತಿ– ನೂರು ವರ್ಷ’ ಕುರಿತು ಸೋಮವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.</p>.<p>‘ಪರಿಶಿಷ್ಟರು ಮಾತ್ರ ಮೀಸಲಾತಿ ಪಡೆಯುತ್ತಿದ್ದಾರೆ ಎಂಬ ತಪ್ಪು ಕಲ್ಪನೆ ಬಿತ್ತಲಾಗಿದೆ. ಆದರೆ, ಎಲ್ಲ ಶೋಷಿತ ವರ್ಗಗಳು, ಬಡವರೂ ಇದರ ಲಾಭ ಪಡೆಯುತ್ತಿದ್ದಾರೆ. 103ನೇ ವಿಧಿಗೆ ತಿದ್ದುಪಡಿ ತರುವ ಮೂಲಕ ಸಾಮಾನ್ಯ ವರ್ಗದಲ್ಲಿರುವ ಬಡವರಿಗೂ ಮೀಸಲಾತಿ ಕೊಡಲಾಗುತ್ತಿದೆ’ ಎಂದು ವಿಶ್ಲೇಷಿಸಿದರು.</p>.<p>‘ಕೇಂದ್ರ ಸರ್ಕಾರದ 1/3ರಷ್ಟು ಉದ್ಯೋಗಗಳು ಗುತ್ತಿಗೆ ಆಧಾರಿತವಾಗಿವೆ. ಉಳಿದ ನೌಕರರನ್ನು ಔಟ್ಸೋರ್ಸ್ನಿಂದ ನೇಮಕ ಮಾಡಿಕೊಳ್ಳಲಾಗುತ್ತಿದೆ. ಲಾಭದಲ್ಲಿ ಇರುವ ಸರ್ಕಾರಿ ವಲಯಗಳನ್ನೂ ಖಾಸಗೀಕರಣ ಮಾಡಲಾಗುತ್ತಿದೆ. ಈ ಕ್ರಮಗಳಿಂದ ಮೀಸಲಾತಿ ತನ್ನಿಂದ ತಾನಾಗಿಯೇ ನಿಂತುಹೋಗುತ್ತದೆ ಎಂಬ ಲೆಕ್ಕಾಚಾರ ಸರ್ಕಾರದ್ದು. ಇದಕ್ಕಿಂತ ಅಪಾಯಕಾರಿ ಏನೆಂದರೆ, ಶೇಕಡ 97.3ರಷ್ಟು ನೌಕರರು ಖಾಸಗಿ ವಲಯದವರೇ ಆಗಿದ್ದಾರೆ. ಅಲ್ಲಿ ಎಲ್ಲೂ ಮೀಸಲಾತಿ ಪದವೇ ಪರಿಚಯವಾಗುವುದಿಲ್ಲ’ ಎಂದು ವಿವರಿಸಿದರು.</p>.<p>‘ಕೇಂದ್ರದ ನೀತಿಗಳಿಂದಾಗಿ ಕೃಷಿವಲಯ ಬಿಕ್ಕಟ್ಟಿಗೆ ಸಿಲುಕಿದೆ. ರೈತರು ಆರ್ಥಿಕವಾಗಿ, ನೈತಿಕವಾಗಿ ದಿವಾಳಿಯಾಗುತ್ತಿದ್ದಾರೆ. ಸಹಜವಾಗಿಯೇ ಅವರೂ ಮೀಸಲಾತಿ ಕೇಳುತ್ತಿದ್ದಾರೆ. ನೋಟ್ ರದ್ದುಪಡಿಸಿದ ಒಂದೇ ಕಾರಣಕ್ಕೆ ಇದೂವರೆಗೆ 50 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ’ ಎಂದು ನ್ಯಾಯಮೂರ್ತಿಗಳು ವಿವರಿಸಿದರು.</p>.<p>‘ಸರ್ಕಾರದ 149 ಕಾರ್ಯದರ್ಶಿ ಹುದ್ದೆಯಲ್ಲಿ ಪರಿಶಿಷ್ಟರು ಒಬ್ಬರೂ ಇಲ್ಲ. 477 ಜಂಟಿ ಕಾರ್ಯದರ್ಶಿ ಹುದ್ದೆಗಳ ಪೈಕಿ 37 ಪರಿಶಿಷ್ಟ ಜಾತಿ, 118 ಪರಿಶಿಷ್ಟ ಪಂಗಡದವರಿದ್ದಾರೆ. 590 ನಿರ್ದೇಶಕ ಹುದ್ದೆಗಳ ಪೈಕಿ 17 ಪರಿಶಿಷ್ಟ ಜಾತಿ ಹಾಗೂ 7 ಮಂದಿ ಪರಿಶಿಷ್ಟ ಪಂಗಡದವರಿದ್ದಾರೆ. ಹಿಂದುಳಿದವರು ಅತಿ ಹೆಚ್ಚು ಸಂಖ್ಯೆಯಲ್ಲಿ ಸಿಗುವುದು ಡಿ ದರ್ಜೆಯ ಹುದ್ದೆಗಳಲ್ಲಿ ಮಾತ್ರ. ಮೀಸಲಾತಿ ಮತ್ತು ಬಡ್ತಿ ಮೀಸಲಾತಿ ಏಕೆ ಬೇಕು ಎಂದು ಕೇಳುವವರಿಗೆ ಈ ಉತ್ತರ ತಲುಪಿಸಿ’ ಎಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>‘ಮೀಸಲಾತಿ ಕುರಿತು ದೇಶದ ನ್ಯಾಯಾಲಯಗಳು ಕೂಡ ಸ್ಪಷ್ಟವಾದ ನಿಲುವು ತಾಳುತ್ತಿಲ್ಲ. ಸರ್ಕಾರಕ್ಕೆ ಬೇಕಾಗಿದ್ದರೆ ಕೊಡಬಹುದು, ಬೇಡವಾದರೆ ಬಿಡಬಹುದು ಎಂಬ ನಿಲುವಿನಲ್ಲಿವೆ. ಇದರಿಂದಾಗಿ ಮೀಸಲಾತಿಯ ವಿರುದ್ಧದ ಧ್ವನಿಗಳು ಗಟ್ಟಿಯಾಗುತ್ತಿವೆ’ ಎಂದು ಹೈಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅವರು ಕಳವಳ ವ್ಯಕ್ತಪಡಿಸಿದರು.</p>.<p>ಗುಲಬರ್ಗಾ ವಿಶ್ವವಿದ್ಯಾಲಯದ ಪರಿಶಿಷ್ಟ ಹಾತಿ ಹಾಗೂ ಪರಿಶಿಷ್ಟ ಪಂಗಡಗಳ ನೌಕರರ ಕಲ್ಯಾಣ ಸಂಘದಿಂದ ‘ಮೀಸಲಾತಿ– ನೂರು ವರ್ಷ’ ಕುರಿತು ಸೋಮವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.</p>.<p>‘ಪರಿಶಿಷ್ಟರು ಮಾತ್ರ ಮೀಸಲಾತಿ ಪಡೆಯುತ್ತಿದ್ದಾರೆ ಎಂಬ ತಪ್ಪು ಕಲ್ಪನೆ ಬಿತ್ತಲಾಗಿದೆ. ಆದರೆ, ಎಲ್ಲ ಶೋಷಿತ ವರ್ಗಗಳು, ಬಡವರೂ ಇದರ ಲಾಭ ಪಡೆಯುತ್ತಿದ್ದಾರೆ. 103ನೇ ವಿಧಿಗೆ ತಿದ್ದುಪಡಿ ತರುವ ಮೂಲಕ ಸಾಮಾನ್ಯ ವರ್ಗದಲ್ಲಿರುವ ಬಡವರಿಗೂ ಮೀಸಲಾತಿ ಕೊಡಲಾಗುತ್ತಿದೆ’ ಎಂದು ವಿಶ್ಲೇಷಿಸಿದರು.</p>.<p>‘ಕೇಂದ್ರ ಸರ್ಕಾರದ 1/3ರಷ್ಟು ಉದ್ಯೋಗಗಳು ಗುತ್ತಿಗೆ ಆಧಾರಿತವಾಗಿವೆ. ಉಳಿದ ನೌಕರರನ್ನು ಔಟ್ಸೋರ್ಸ್ನಿಂದ ನೇಮಕ ಮಾಡಿಕೊಳ್ಳಲಾಗುತ್ತಿದೆ. ಲಾಭದಲ್ಲಿ ಇರುವ ಸರ್ಕಾರಿ ವಲಯಗಳನ್ನೂ ಖಾಸಗೀಕರಣ ಮಾಡಲಾಗುತ್ತಿದೆ. ಈ ಕ್ರಮಗಳಿಂದ ಮೀಸಲಾತಿ ತನ್ನಿಂದ ತಾನಾಗಿಯೇ ನಿಂತುಹೋಗುತ್ತದೆ ಎಂಬ ಲೆಕ್ಕಾಚಾರ ಸರ್ಕಾರದ್ದು. ಇದಕ್ಕಿಂತ ಅಪಾಯಕಾರಿ ಏನೆಂದರೆ, ಶೇಕಡ 97.3ರಷ್ಟು ನೌಕರರು ಖಾಸಗಿ ವಲಯದವರೇ ಆಗಿದ್ದಾರೆ. ಅಲ್ಲಿ ಎಲ್ಲೂ ಮೀಸಲಾತಿ ಪದವೇ ಪರಿಚಯವಾಗುವುದಿಲ್ಲ’ ಎಂದು ವಿವರಿಸಿದರು.</p>.<p>‘ಕೇಂದ್ರದ ನೀತಿಗಳಿಂದಾಗಿ ಕೃಷಿವಲಯ ಬಿಕ್ಕಟ್ಟಿಗೆ ಸಿಲುಕಿದೆ. ರೈತರು ಆರ್ಥಿಕವಾಗಿ, ನೈತಿಕವಾಗಿ ದಿವಾಳಿಯಾಗುತ್ತಿದ್ದಾರೆ. ಸಹಜವಾಗಿಯೇ ಅವರೂ ಮೀಸಲಾತಿ ಕೇಳುತ್ತಿದ್ದಾರೆ. ನೋಟ್ ರದ್ದುಪಡಿಸಿದ ಒಂದೇ ಕಾರಣಕ್ಕೆ ಇದೂವರೆಗೆ 50 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ’ ಎಂದು ನ್ಯಾಯಮೂರ್ತಿಗಳು ವಿವರಿಸಿದರು.</p>.<p>‘ಸರ್ಕಾರದ 149 ಕಾರ್ಯದರ್ಶಿ ಹುದ್ದೆಯಲ್ಲಿ ಪರಿಶಿಷ್ಟರು ಒಬ್ಬರೂ ಇಲ್ಲ. 477 ಜಂಟಿ ಕಾರ್ಯದರ್ಶಿ ಹುದ್ದೆಗಳ ಪೈಕಿ 37 ಪರಿಶಿಷ್ಟ ಜಾತಿ, 118 ಪರಿಶಿಷ್ಟ ಪಂಗಡದವರಿದ್ದಾರೆ. 590 ನಿರ್ದೇಶಕ ಹುದ್ದೆಗಳ ಪೈಕಿ 17 ಪರಿಶಿಷ್ಟ ಜಾತಿ ಹಾಗೂ 7 ಮಂದಿ ಪರಿಶಿಷ್ಟ ಪಂಗಡದವರಿದ್ದಾರೆ. ಹಿಂದುಳಿದವರು ಅತಿ ಹೆಚ್ಚು ಸಂಖ್ಯೆಯಲ್ಲಿ ಸಿಗುವುದು ಡಿ ದರ್ಜೆಯ ಹುದ್ದೆಗಳಲ್ಲಿ ಮಾತ್ರ. ಮೀಸಲಾತಿ ಮತ್ತು ಬಡ್ತಿ ಮೀಸಲಾತಿ ಏಕೆ ಬೇಕು ಎಂದು ಕೇಳುವವರಿಗೆ ಈ ಉತ್ತರ ತಲುಪಿಸಿ’ ಎಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>