ಜಿಲ್ಲೆಯ ಕಿಣ್ಣಿ ಸಡಕ್, ಜೀವಣಗಿ, ಮರಗುತ್ತಿ, ಡೊಂಗರಗಾಂವ, ಕೋಡ್ಲಿ, ಆಲೂರ, ಕಾಚಾಪೂರ, ಬಿಳವಾರ, ಕುಸನೂರ, ನಂದೂರ, ಬೆಳಮಗಿ ಗ್ರಾಮಗಳಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದರೂ ಪಿಡಿಒಗಳು ಕೆಲಸ ನೀಡಿಲ್ಲ. ಪ್ರತ್ಯೇಕ ಎನ್ಎಂಆರ್ ನೀಡಬೇಕು. ಕಳೆದ ಜುಲೈ ತಿಂಗಳಲ್ಲಿ ಪ್ರತಿಭಟನೆ ನಡೆಸಿದಾಗ 15 ದಿನಗಳಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಿಡಿಒಗಳ ಸಭೆ ಕರೆದು ಬಗೆ ಹರಿಸುವುದಾಗಿ ತಿಳಿಸಿದ್ದರೂ ಇನ್ನೂ ಬಗೆಹರಿದಿಲ್ಲ ಎಂದು ಆರೋಪಿಸಿದರು.