<p>ಚಿಂಚೋಳಿ: ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಈರುಳ್ಳಿ ಬೀಜಕ್ಕೆ ಮತ್ತೆ ಬೇಡಿಕೆ ಹೆಚ್ಚಾಗಿದೆ. ಪ್ರಸ್ತುತ ರೈತರಿಂದ 70 ಕೆ.ಜಿಯ ಒಂದು ಚೀಲ ಈರುಳ್ಳಿ ಬೀಜಕ್ಕೆ ₹45 ಸಾವಿರ ದರವಿದೆ.</p>.<p>ಮೊದಲು ಬಿತ್ತನೆ ನಡೆಸಿದವರ ಹೊಲದಲ್ಲಿ ಸೊಲ್ಲಾಪುರದ ಗಡ್ಡೆ ಹಚ್ಚಿದವರಿಗೆ ಎಕರೆಗೆ ಸರಾಸರಿ 5 ಚೀಲ ಇಳುವರಿ ಬಂದರೆ, ಮನ್ನಾಎಖ್ಖೆಳ್ಳಿಯ ಗಡ್ಡೆ ತಂದು ಹಚ್ಚಿದವರ ಹೊಲದಲ್ಲಿ ಎಕರೆಗೆ 3ರಿಂದ 4 ಚೀಲ ಇಳುವರಿ ಬರುತ್ತಿದೆ.</p>.<p>ಒಟ್ಟು 120 ದಿನಗಳ ಅವಧಿಯ ಈರುಳ್ಳಿ ಬೀಜ ಬೇಸಾಯಕ್ಕೆ ಎಕರೆಗೆ 1 ಲಕ್ಷದಿಂದ 1.25 ಲಕ್ಷ ಖರ್ಚು ತಗಲುತ್ತಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ದರ ಹೆಚ್ಚಾಗಿದ್ದರಿಂದ ಮತ್ತು ಅತಿವೃಷ್ಟಿಯಿಂದ ಬೀಜಕ್ಕೆ ಭಾರಿ ಬೇಡಿಕೆ ಇತ್ತು. ಆಗ ಒಂದು ಚೀಲಕ್ಕೆ ₹ 1 ಲಕ್ಷ ದರದಲ್ಲಿ ಈರುಳ್ಳಿ ಬೀಜ ಮಾರಾಟವಾಗಿತ್ತು. ಪ್ರಮಾಣಿತ ಕಂಪನಿಯ ಬೀಜಗಳು ಕೆಜಿಗೆ ₹2500 ದರದಲ್ಲಿ ರೈತರು ಖರೀದಿಸಿದ್ದರು.</p>.<p>ತಾಲ್ಲೂಕಿನ ಐನೋಳ್ಳಿ, ದೇಗಲಮಡಿ, ಚಂದ್ರಂಪಳ್ಳಿ, ಯಂಪಳ್ಳಿ, ಪಟಪಳ್ಳಿ, ಫತೆಪುರ, ಕೊಳ್ಳೂರು, ಯಂಪಳ್ಳಿ, ಶಿಕಾರ ಮೋತಕಪಳ್ಳಿ, ಹಸರಗುಂಡಗಿ, ತುಮಕುಂಟಾ, ನಾಗಾಈದಲಾಯಿ, ಸಾಲೇಬೀರನಹಳ್ಳಿ, ಮರಪಳ್ಳಿ, ಯಂಪಳ್ಳಿ, ದಸ್ತಾಪುರ, ಚಿಮ್ಮನಚೋಡ, ನಾಗರಾಳ್, ಅಣವಾರ ಮೊದಲಾದ ಕಡೆ ರೈತರು ಈರುಳ್ಳಿ ಬೀಜ ಬೇಸಾಯ ಮಾಡುತ್ತಾರೆ.</p>.<p>ನೀರಾವರಿ ಸೌಲಭ್ಯ ಹೊಂದಿದವರು, ಚಂದ್ರಂಪಳ್ಳಿ ನೀರಾವರಿ ಯೋಜನೆ, ಸಾಲೇಬೀರನಹಳ್ಳಿ, ಹಸರಗುಂಡಗಿ ಸಣ್ಣ ನೀರಾವರಿ ಕೆರೆ, ತುಮಕುಂಟಾ ಕೆರೆ ಹಾಗೂ ಮುಲ್ಲಾಮಾರಿ ನದಿ ಪಾತ್ರದ ರೈತರು ಬೀಜ ಬೇಸಾಯ ನಡೆಸುವರು.</p>.<p>ಪ್ರಸಕ್ತ ವರ್ಷ ಆರಂಭದಲ್ಲಿಯೇ ಬಿತ್ತನೆ ನಡೆಸಿದವರ ಬೆಳೆ ರೋಗ ಮುಕ್ತವಾಗಿದ್ದು ಉತ್ತಮ ಇಳುವರಿ ಬಂದಿದೆ. ಬಿತ್ತನೆ ವಿಳಂಬ ಮಾಡಿದವರ ಹೊಲದಲ್ಲಿ ಬೆಳೆಗೆ ಮಂಜು ಬಡಿದಿದ್ದರಿಂದ ಇಳುವರಿ ಕುಸಿದಿದೆ ಎನ್ನುತ್ತಾರೆ ರೈತ ಫಕ್ರೊದ್ದಿನ್.</p>.<p>ಚೀಲಕ್ಕೆ ₹42 ಸಾವಿರಕ್ಕೆ ಮಾರಾಟ ಮಾಡಿದ್ದೇನೆ. ಒಂದು ವಾರದ ನಂತರ ಬಂದವರು ₹48 ಸಾವಿರಕ್ಕೆ ಚೀಲ ಬೀಜದ ದರದಲ್ಲಿ ಖರೀದಿಸಿದ್ದಾರೆ ಪ್ರಸಕ್ತ ವರ್ಷ ಇನ್ನೂ ಹೆಚ್ಚಿನ ದರ ಬರುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಂಚೋಳಿ: ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಈರುಳ್ಳಿ ಬೀಜಕ್ಕೆ ಮತ್ತೆ ಬೇಡಿಕೆ ಹೆಚ್ಚಾಗಿದೆ. ಪ್ರಸ್ತುತ ರೈತರಿಂದ 70 ಕೆ.ಜಿಯ ಒಂದು ಚೀಲ ಈರುಳ್ಳಿ ಬೀಜಕ್ಕೆ ₹45 ಸಾವಿರ ದರವಿದೆ.</p>.<p>ಮೊದಲು ಬಿತ್ತನೆ ನಡೆಸಿದವರ ಹೊಲದಲ್ಲಿ ಸೊಲ್ಲಾಪುರದ ಗಡ್ಡೆ ಹಚ್ಚಿದವರಿಗೆ ಎಕರೆಗೆ ಸರಾಸರಿ 5 ಚೀಲ ಇಳುವರಿ ಬಂದರೆ, ಮನ್ನಾಎಖ್ಖೆಳ್ಳಿಯ ಗಡ್ಡೆ ತಂದು ಹಚ್ಚಿದವರ ಹೊಲದಲ್ಲಿ ಎಕರೆಗೆ 3ರಿಂದ 4 ಚೀಲ ಇಳುವರಿ ಬರುತ್ತಿದೆ.</p>.<p>ಒಟ್ಟು 120 ದಿನಗಳ ಅವಧಿಯ ಈರುಳ್ಳಿ ಬೀಜ ಬೇಸಾಯಕ್ಕೆ ಎಕರೆಗೆ 1 ಲಕ್ಷದಿಂದ 1.25 ಲಕ್ಷ ಖರ್ಚು ತಗಲುತ್ತಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ದರ ಹೆಚ್ಚಾಗಿದ್ದರಿಂದ ಮತ್ತು ಅತಿವೃಷ್ಟಿಯಿಂದ ಬೀಜಕ್ಕೆ ಭಾರಿ ಬೇಡಿಕೆ ಇತ್ತು. ಆಗ ಒಂದು ಚೀಲಕ್ಕೆ ₹ 1 ಲಕ್ಷ ದರದಲ್ಲಿ ಈರುಳ್ಳಿ ಬೀಜ ಮಾರಾಟವಾಗಿತ್ತು. ಪ್ರಮಾಣಿತ ಕಂಪನಿಯ ಬೀಜಗಳು ಕೆಜಿಗೆ ₹2500 ದರದಲ್ಲಿ ರೈತರು ಖರೀದಿಸಿದ್ದರು.</p>.<p>ತಾಲ್ಲೂಕಿನ ಐನೋಳ್ಳಿ, ದೇಗಲಮಡಿ, ಚಂದ್ರಂಪಳ್ಳಿ, ಯಂಪಳ್ಳಿ, ಪಟಪಳ್ಳಿ, ಫತೆಪುರ, ಕೊಳ್ಳೂರು, ಯಂಪಳ್ಳಿ, ಶಿಕಾರ ಮೋತಕಪಳ್ಳಿ, ಹಸರಗುಂಡಗಿ, ತುಮಕುಂಟಾ, ನಾಗಾಈದಲಾಯಿ, ಸಾಲೇಬೀರನಹಳ್ಳಿ, ಮರಪಳ್ಳಿ, ಯಂಪಳ್ಳಿ, ದಸ್ತಾಪುರ, ಚಿಮ್ಮನಚೋಡ, ನಾಗರಾಳ್, ಅಣವಾರ ಮೊದಲಾದ ಕಡೆ ರೈತರು ಈರುಳ್ಳಿ ಬೀಜ ಬೇಸಾಯ ಮಾಡುತ್ತಾರೆ.</p>.<p>ನೀರಾವರಿ ಸೌಲಭ್ಯ ಹೊಂದಿದವರು, ಚಂದ್ರಂಪಳ್ಳಿ ನೀರಾವರಿ ಯೋಜನೆ, ಸಾಲೇಬೀರನಹಳ್ಳಿ, ಹಸರಗುಂಡಗಿ ಸಣ್ಣ ನೀರಾವರಿ ಕೆರೆ, ತುಮಕುಂಟಾ ಕೆರೆ ಹಾಗೂ ಮುಲ್ಲಾಮಾರಿ ನದಿ ಪಾತ್ರದ ರೈತರು ಬೀಜ ಬೇಸಾಯ ನಡೆಸುವರು.</p>.<p>ಪ್ರಸಕ್ತ ವರ್ಷ ಆರಂಭದಲ್ಲಿಯೇ ಬಿತ್ತನೆ ನಡೆಸಿದವರ ಬೆಳೆ ರೋಗ ಮುಕ್ತವಾಗಿದ್ದು ಉತ್ತಮ ಇಳುವರಿ ಬಂದಿದೆ. ಬಿತ್ತನೆ ವಿಳಂಬ ಮಾಡಿದವರ ಹೊಲದಲ್ಲಿ ಬೆಳೆಗೆ ಮಂಜು ಬಡಿದಿದ್ದರಿಂದ ಇಳುವರಿ ಕುಸಿದಿದೆ ಎನ್ನುತ್ತಾರೆ ರೈತ ಫಕ್ರೊದ್ದಿನ್.</p>.<p>ಚೀಲಕ್ಕೆ ₹42 ಸಾವಿರಕ್ಕೆ ಮಾರಾಟ ಮಾಡಿದ್ದೇನೆ. ಒಂದು ವಾರದ ನಂತರ ಬಂದವರು ₹48 ಸಾವಿರಕ್ಕೆ ಚೀಲ ಬೀಜದ ದರದಲ್ಲಿ ಖರೀದಿಸಿದ್ದಾರೆ ಪ್ರಸಕ್ತ ವರ್ಷ ಇನ್ನೂ ಹೆಚ್ಚಿನ ದರ ಬರುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>