<p><strong>ಆಳಂದ</strong>: ಗ್ರಾಮ ಪಂಚಾಯಿತಿ ವಿವಿಧ ಅನುದಾನ ದುರುಪಯೋಗದ ದೂರಿನ ಹಿನ್ನಲೆಯಲ್ಲಿ ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಐದು ಜನ ಸದಸ್ಯರ ಸದಸ್ಯತ್ವವು ರದ್ದುಗೊಂಡ ಘಟನೆ ನಡೆದಿದೆ.</p>.<p>ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ರಂದೀಪ ಡಿ ಅವರು ಆದೇಶ ಹೋರಡಿಸಿದ್ದು, ನಿಂಬರ್ಗಾ ಗ್ರಾಮದ ಸರ್ವ ಸಮಾಜ ಕಲ್ಯಾಣ ಸಮಿತಿಯ ವಿಠಲ ಕೋಣೇಕರ್ ಅವರು ನೀಡಿದ ದೂರಿನ ಹಿನ್ನಲೆಯಲ್ಲಿ ಈ ವಿಚಾರಣೆ ನಡೆಸಿದ ಅವರು ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಸದಸ್ಯರು ಗ್ರಾಮ ಪಂಚಾಯಿತಿಯ ವಿವಿಧ ಅನುದಾನವು ಸ್ವಂತ ತಮ್ಮ ಹೆಸರಿನಲ್ಲಿ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ದುರುಪಯೋಗ ಪಡೆಸಿಕೊಂಡಿರುವದು ಸಾಬೀತಾಗಿದೆ.</p>.<p>ಅಧ್ಯಕ್ಷೆ ರೇಖಾಬಾಯಿ ಚವ್ಹಾಣ, ಉಪಾಧ್ಯಕ್ಷ ಅಪ್ಪಾಸಾಬ ಬೊಮ್ಮನಹಳ್ಳಿ, ಸದಸ್ಯರಾದ ಕಾರ್ತಿಕ ಕುಂಬಾರ, ಸುರೇಖಾ ಸೂರ್ಯಕಾಂತ, ಸುರೇಖಾ ಸೋಮಣ್ಣಾ, ಲಲಿತಾಬಾಯಿ ಹಣಮಂತ, ಯಂಕಪ್ಪ ಬನಪಟ್ಟಿ ಅವರ ಸದಸ್ಯತ್ವ ರದ್ದುಗೊಳಿಸಲಾಗಿದೆ.</p>.<p>ಅಧ್ಯಕ್ಷೆ ಸೇರಿ ಈ ಎಲ್ಲ ಸದಸ್ಯರೂ ₹49,740 ಅನುದಾನವು ನಿಯಮಬಾಹಿರವಾಗಿ ದುರುಪಯೋಗ ಪಡೆಸಿಕೊಂಡಿರುತ್ತಾರೆ. ಇವರ ಸದಸ್ಯತ್ವದ ಅವಧಿಯು ಇನ್ನು ಒಂದು ತಿಂಗಳ ಮಾತ್ರ ಬಾಕಿ ಉಳಿದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳಂದ</strong>: ಗ್ರಾಮ ಪಂಚಾಯಿತಿ ವಿವಿಧ ಅನುದಾನ ದುರುಪಯೋಗದ ದೂರಿನ ಹಿನ್ನಲೆಯಲ್ಲಿ ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಐದು ಜನ ಸದಸ್ಯರ ಸದಸ್ಯತ್ವವು ರದ್ದುಗೊಂಡ ಘಟನೆ ನಡೆದಿದೆ.</p>.<p>ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ರಂದೀಪ ಡಿ ಅವರು ಆದೇಶ ಹೋರಡಿಸಿದ್ದು, ನಿಂಬರ್ಗಾ ಗ್ರಾಮದ ಸರ್ವ ಸಮಾಜ ಕಲ್ಯಾಣ ಸಮಿತಿಯ ವಿಠಲ ಕೋಣೇಕರ್ ಅವರು ನೀಡಿದ ದೂರಿನ ಹಿನ್ನಲೆಯಲ್ಲಿ ಈ ವಿಚಾರಣೆ ನಡೆಸಿದ ಅವರು ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಸದಸ್ಯರು ಗ್ರಾಮ ಪಂಚಾಯಿತಿಯ ವಿವಿಧ ಅನುದಾನವು ಸ್ವಂತ ತಮ್ಮ ಹೆಸರಿನಲ್ಲಿ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ದುರುಪಯೋಗ ಪಡೆಸಿಕೊಂಡಿರುವದು ಸಾಬೀತಾಗಿದೆ.</p>.<p>ಅಧ್ಯಕ್ಷೆ ರೇಖಾಬಾಯಿ ಚವ್ಹಾಣ, ಉಪಾಧ್ಯಕ್ಷ ಅಪ್ಪಾಸಾಬ ಬೊಮ್ಮನಹಳ್ಳಿ, ಸದಸ್ಯರಾದ ಕಾರ್ತಿಕ ಕುಂಬಾರ, ಸುರೇಖಾ ಸೂರ್ಯಕಾಂತ, ಸುರೇಖಾ ಸೋಮಣ್ಣಾ, ಲಲಿತಾಬಾಯಿ ಹಣಮಂತ, ಯಂಕಪ್ಪ ಬನಪಟ್ಟಿ ಅವರ ಸದಸ್ಯತ್ವ ರದ್ದುಗೊಳಿಸಲಾಗಿದೆ.</p>.<p>ಅಧ್ಯಕ್ಷೆ ಸೇರಿ ಈ ಎಲ್ಲ ಸದಸ್ಯರೂ ₹49,740 ಅನುದಾನವು ನಿಯಮಬಾಹಿರವಾಗಿ ದುರುಪಯೋಗ ಪಡೆಸಿಕೊಂಡಿರುತ್ತಾರೆ. ಇವರ ಸದಸ್ಯತ್ವದ ಅವಧಿಯು ಇನ್ನು ಒಂದು ತಿಂಗಳ ಮಾತ್ರ ಬಾಕಿ ಉಳಿದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>