ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣದಲ್ಲಿ ಭಾನುವಾರ ಸಿಐಡಿಗೆ ಶರಣಾಗಿರುವ ಅಮರ್ಜಾ ನೀರಾವರಿ ಯೋಜನೆಯ ಸಹಾಯಕ ಎಂಜಿನಿಯರ್ ಮಂಜುನಾಥ ಮೇಳಕುಂದಿ ಜಯನಗರದಲ್ಲಿ ಸುಮಾರು ₹ 3 ಕೋಟಿ ವೆಚ್ಚದಲ್ಲಿ ಮನೆ ನಿರ್ಮಿಸುತ್ತಿರುವುದು ಪತ್ತೆಯಾಗಿದೆ.
ಅಕ್ರಮ ನೇಮಕ ಪ್ರಕರಣ ಬೆಳಕಿಗೆ ಬರದಿದ್ದರೆ ವಿದೇಶಕ್ಕೆ ತೆರಳಿ ಇಂಟಿರಿಯರ್ ಡಿಸೈನ್ಗೆ ಅಗತ್ಯವಾದ ಪರಿಕರ ಹಾಗೂ ಪೀಠೋಪಕರಣಗಳನ್ನು ತರಲು ತಯಾರಿ ನಡೆಸಿದ್ದರು ಎನ್ನಲಾಗಿದೆ.
ಕಳೆದ 21 ದಿನಗಳ ಕಾಲ ಮಂಜುನಾಥ ಬೆಂಗಳೂರು, ಮಂಗಳೂರು, ಕಾರವಾರ, ಆಂಧ್ರಪ್ರದೇಶ ಸೇರಿದಂತೆ ಅನೇಕ ಕಡೆ ಸುತ್ತಾಡಿದ್ದು, ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಒಂದು ಕಡೆ ನೆಲೆ ನಿಂತಿರಲಿಲ್ಲ ಎನ್ನಲಾಗಿದೆ.