ಮಾ.26ರಂದು ಜಾತ್ರಾ ಮಹೋತ್ಸವವನ್ನು ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದೇವರು ಉದ್ಘಾಟಿಸಲಿದ್ದಾರೆ. ರಾಜೇಶ್ವರ ಶಿವಾಚಾರ್ಯರು, ಗುರುಬಸವ ಪಟ್ಟದೇವರು ಸನ್ನಿಧಾನ ಹಾಗೂ ಬಸವಲಿಂಗ ಅವಧೂತರು ಪಾವನ ಸನ್ನಿಧಾನ ವಹಿಸುವರು. ಸಿಂಧನಕೇರಾದ ಹೊನ್ನಲಿಂಗ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯರು, ವೀರಯ್ಯಸ್ವಾಮಿ ಧನಾಶ್ರಿ ಶಾಸಕ ಡಾ. ಅವಿನಾಶ ಜಾಧವ, ಸಂಸದ ಉಮೇಶ ಜಾಧವ, ಡಿವೈಎಸ್ಪಿ ಬಸವೇಶ್ವರ ಹೀರಾ, ಗ್ರಾ.ಪಂ. ಅಧ್ಯಕ್ಷೆ ಶೋಭಾ ಸಂಗಪ್ಪ ಮುದ್ದಾ, ವಕೀಲ ಲಕ್ಷ್ಮಣ ಆವುಂಟಿ, ಶ್ರೀಮಂತ ಕಟ್ಟಿಮನಿ ಪಾಲ್ಗೊಳ್ಳುವರು.