ರೈತ ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಚ್.ವಿ. ದಿವಾಕರ್ ಮಾತನಾಡಿ, ‘ಸಂಘಟನೆಯು ದೇಶದ 21 ರಾಜ್ಯಗಳಲ್ಲಿ, ಕರ್ನಾಟಕದ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದು, ರೈತರ ಹಲವು ಸಮಸ್ಯೆಗಳ ವಿರುದ್ಧ ರೈತಾಪಿ ಜನರನ್ನು ಸಂಘಟಿಸುತ್ತಿದೆ’ ಎಂದರು. ಆರ್ಕೆಎಸ್ ಮುಖಂಡ ಎಂ. ಶಶಿಧರ್ ಕಾರ್ಯಕ್ರಮ ನಿರ್ವಹಿಸಿದರು.