‘ನಗರದ ಹೊರವಲಯದ ಆಳಂದ ರಸ್ತೆಯ ಕೆರಿ ಭೋಸಗಾ ಕ್ರಾಸ್ ಬಳಿ ರಾತ್ರಿ ಬೊಲೆರೊ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಆಳಂದ ತಾಲ್ಲೂಕಿನ ಕುಡಕಿ ಗ್ರಾಮದ ಮಾಳಪ್ಪ ಶನೈಸಿ (37) ಮತ್ತು ಶರಣು ಗುಂಡಗುರ್ತಿ (28) ಎಂಬುವರು ಸ್ಥಳದಲ್ಲೇ ಮೃತಪಟ್ಟರು. ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಬೈಕ್ನಲ್ಲಿ ಹೊರಟಿದ್ದರು’ ಎಂದು ಸಂಚಾರ ಠಾಣೆ–1ರ ಪೊಲೀಸ್ ಇನ್ಸ್ಪೆಕ್ಟರ್ ಶಾಂತಿನಾಥ ತಿಳಿಸಿದ್ದಾರೆ.