ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ: ಪತ್ನಿ ಸಾವು, ಪತಿಗೆ ಗಾಯ

Last Updated 18 ಅಕ್ಟೋಬರ್ 2020, 16:58 IST
ಅಕ್ಷರ ಗಾತ್ರ

ಕಮಲಾಪುರ: ಕಮಲಾಪುರದ ಬಳಿ ಭಾನುವಾರ ಟಂಟಂಗೆ ಕ್ರೂಸರ್ ಡಿಕ್ಕಿ ಹೊಡೆದ ಮಹಿಳೆಯೊಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು, ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಾಲ್ಲೂಕಿನ ಹೊಳಕುಂದಾ ಗ್ರಾಮದ ನಾಗಮ್ಮ ಸಾಯಬಣ್ಣ ಪ್ರಸನ್ (50) ಮೃತರು. ಪತಿ ಸಾಯಬಣ್ಣ ಬಂಡಪ್ಪ ಪ್ರಸನ್ ಅವರ ಕಾಲಿನ ಮೂಳೆ ಮುರಿದಿದೆ.

ಟಂಟಂ ಚಾಲಕ ಸಾಯಬಣ್ಣ ಪತ್ನಿಯನ್ನು ಕರೆದುಕೊಂಡು ಕಮಲಾಪುರ ಸಂತೆಗೆ ತೆರಳುತ್ತಿದ್ದರು. ಹುಮನಾಬಾದ್‌ನಿಂದ ಬರುತ್ತಿದ್ದ ಕ್ರೂಸರ್ ಟಂಟಂಗೆ ಡಿಕ್ಕಿಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಂಟಂ ಹೆದ್ದಾರಿ ಬದಿಯ ಹೊಲದಲ್ಲಿ ಬಿತ್ತು. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT