<p><strong>ಕಮಲಾಪುರ:</strong> ಕಮಲಾಪುರದ ಬಳಿ ಭಾನುವಾರ ಟಂಟಂಗೆ ಕ್ರೂಸರ್ ಡಿಕ್ಕಿ ಹೊಡೆದ ಮಹಿಳೆಯೊಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು, ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.</p>.<p>ತಾಲ್ಲೂಕಿನ ಹೊಳಕುಂದಾ ಗ್ರಾಮದ ನಾಗಮ್ಮ ಸಾಯಬಣ್ಣ ಪ್ರಸನ್ (50) ಮೃತರು. ಪತಿ ಸಾಯಬಣ್ಣ ಬಂಡಪ್ಪ ಪ್ರಸನ್ ಅವರ ಕಾಲಿನ ಮೂಳೆ ಮುರಿದಿದೆ.</p>.<p>ಟಂಟಂ ಚಾಲಕ ಸಾಯಬಣ್ಣ ಪತ್ನಿಯನ್ನು ಕರೆದುಕೊಂಡು ಕಮಲಾಪುರ ಸಂತೆಗೆ ತೆರಳುತ್ತಿದ್ದರು. ಹುಮನಾಬಾದ್ನಿಂದ ಬರುತ್ತಿದ್ದ ಕ್ರೂಸರ್ ಟಂಟಂಗೆ ಡಿಕ್ಕಿಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಂಟಂ ಹೆದ್ದಾರಿ ಬದಿಯ ಹೊಲದಲ್ಲಿ ಬಿತ್ತು. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲಾಪುರ:</strong> ಕಮಲಾಪುರದ ಬಳಿ ಭಾನುವಾರ ಟಂಟಂಗೆ ಕ್ರೂಸರ್ ಡಿಕ್ಕಿ ಹೊಡೆದ ಮಹಿಳೆಯೊಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು, ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.</p>.<p>ತಾಲ್ಲೂಕಿನ ಹೊಳಕುಂದಾ ಗ್ರಾಮದ ನಾಗಮ್ಮ ಸಾಯಬಣ್ಣ ಪ್ರಸನ್ (50) ಮೃತರು. ಪತಿ ಸಾಯಬಣ್ಣ ಬಂಡಪ್ಪ ಪ್ರಸನ್ ಅವರ ಕಾಲಿನ ಮೂಳೆ ಮುರಿದಿದೆ.</p>.<p>ಟಂಟಂ ಚಾಲಕ ಸಾಯಬಣ್ಣ ಪತ್ನಿಯನ್ನು ಕರೆದುಕೊಂಡು ಕಮಲಾಪುರ ಸಂತೆಗೆ ತೆರಳುತ್ತಿದ್ದರು. ಹುಮನಾಬಾದ್ನಿಂದ ಬರುತ್ತಿದ್ದ ಕ್ರೂಸರ್ ಟಂಟಂಗೆ ಡಿಕ್ಕಿಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಂಟಂ ಹೆದ್ದಾರಿ ಬದಿಯ ಹೊಲದಲ್ಲಿ ಬಿತ್ತು. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>