ಕಮಲಾಪುರ: ಕಮಲಾಪುರದ ಬಳಿ ಭಾನುವಾರ ಟಂಟಂಗೆ ಕ್ರೂಸರ್ ಡಿಕ್ಕಿ ಹೊಡೆದ ಮಹಿಳೆಯೊಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು, ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ತಾಲ್ಲೂಕಿನ ಹೊಳಕುಂದಾ ಗ್ರಾಮದ ನಾಗಮ್ಮ ಸಾಯಬಣ್ಣ ಪ್ರಸನ್ (50) ಮೃತರು. ಪತಿ ಸಾಯಬಣ್ಣ ಬಂಡಪ್ಪ ಪ್ರಸನ್ ಅವರ ಕಾಲಿನ ಮೂಳೆ ಮುರಿದಿದೆ.
ಟಂಟಂ ಚಾಲಕ ಸಾಯಬಣ್ಣ ಪತ್ನಿಯನ್ನು ಕರೆದುಕೊಂಡು ಕಮಲಾಪುರ ಸಂತೆಗೆ ತೆರಳುತ್ತಿದ್ದರು. ಹುಮನಾಬಾದ್ನಿಂದ ಬರುತ್ತಿದ್ದ ಕ್ರೂಸರ್ ಟಂಟಂಗೆ ಡಿಕ್ಕಿಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಂಟಂ ಹೆದ್ದಾರಿ ಬದಿಯ ಹೊಲದಲ್ಲಿ ಬಿತ್ತು. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.