ಚಿತ್ತಾಪುರ: ಪಟ್ಟಣದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪಥ ಸಂಚಲನ ನಡೆಸಲು ಅನುಮತಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ತಹಶೀಲ್ದಾರ್ ನಾಗಯ್ಯ ಹಿರೇಮಠ ತಿರಸ್ಕರಿಸಿದ್ದಾರೆ. ಹೀಗಾಗಿ ಪಥಸಂಚಲನ ನಡೆಯಲಿಲ್ಲ.
ಮೈಸೂರು, ಬೆಳಗಾವಿಯಲ್ಲಿ ಅನುಮತಿ:
ಮೈಸೂರು: ಹಾಸನ ಜಿಲ್ಲೆಯ ಆಲೂರು, ಮಂಡ್ಯ ಜಿಲ್ಲೆಯ ಮಳವಳ್ಳಿ, ಹೊಳಲು ಮತ್ತು ಪಾಂಡವಪುರದಲ್ಲಿ ಆರ್ಎಸ್ಎಸ್ ಪಥಸಂಚಲನ ನಡೆದಿದ್ದು, ಅನುಮತಿ ಪಡೆಯಲಾಗಿತ್ತು. ಮುಂಜಾಗ್ರತೆಯಾಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.