<p><strong>ಸೇಡಂ (ಕಲಬುರಗಿ ಜಿಲ್ಲೆ):</strong> ಸೇಡಂನಲ್ಲಿ ಆರ್ಎಸ್ಎಸ್ ಶತಾಬ್ದಿ ನಿಮಿತ್ತ ಭಾನುವಾರ ಆಯೋಜಿಸಲಾಗಿದ್ದ ಗಣವೇಷಧಾರಿಗಳ ಪಥಸಂಚಲನ ಪೊಲೀಸರ ತಡೆಯ ಮಧ್ಯೆಯೂ ಆಕರ್ಷಕವಾಗಿ ಜರುಗಿತು.</p><p>ಪಟ್ಟಣದ ನರ್ಮದಾ ಕಾಲೇಜು ಆವರಣದಿಂದ ಆರಂಭವಾದ ಪಥಸಂಚಲನ ಡಿಬಿಆರ್ ಕಾಪೌಂಡ್ ಮೂಲಕ ಮುಖ್ಯ ರಸ್ತೆ ಪ್ರವೇಶಿಸುತ್ತಿದ್ದಂತೆಯೇ ಪೊಲೀಸರು ಗಣವೇಷಧಾರಿಗಳನ್ನು ವಶಕ್ಕೆ ಪಡೆದು ವಾಹನಗಳಿಗೆ ಹತ್ತಿಸಿದರು. ಇದನ್ನು ಸಾರ್ವಜನಿಕರು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಸಾರ್ವಜನಿಕರು ಮತ್ತು ಪೊಲೀಸರ ಮಧ್ಯೆ ವಾಗ್ವಾದ-ನೂಕು ನುಗ್ಗುಲು ಉಂಟಾಯಿತು.</p><p>ಕೆಲಕಾಲದ ಬಳಿಕ ವಶಕ್ಕೆ ಪಡೆದಿದ್ದ ಗಣವೇಷಧಾರಿಗಳನ್ನು ಪೊಲೀಸರು ಬಸ್ ನಿಲ್ದಾಣ, ತಾಲ್ಲೂಕು ಪಂಚಾಯಿತಿ ಸೇರಿದಂತೆ ವಿವಿಧೆಡೆ ಬಿಡುಗಡೆ ಮಾಡಿದರು. ನಂತರ ಪುನಃ ಗಣವೇಷಧಾರಿಗಳು ಅಲ್ಲಿಂದಲೇ ತಮ್ಮ ಪಥಸಂಚಲನ ಪ್ರಾರಂಭಿಸಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಹೆಜ್ಜೆಹಾಕಿದರು.</p><p>ಪಥ ಸಂಚಲನದ ಬರುವಿಕೆಗಾಗಿ ಕಾದಿದ್ದ ಬಡಾವಣೆಯ ಜನರು ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿಗೈದರು. ಪಟ್ಟಣದ ಕೆಲವು ಬಡಾವಣೆಗಳಲ್ಲಿ ಹಲವು ತಂಡಗಳಾಗಿ ವಿಭಜನೆಗೊಂಡರೂ ಗಣವೇಷಧಾರಿಗಳು ಬಹುತೇಕ ನಿಗದಿತ ಮಾರ್ಗದಲ್ಲೇ ಸಾಗಿದರು. ಕೆಲವೆಡೆ ಪುಟಾಣಿಗಳು ವಿವಿಧ ನಾಯಕರ ವೇಷಭೂಷಣಗಳಲ್ಲಿ ಕಂಗೊಳಿಸಿದರು.</p><p>ನರ್ಮದಾ ಕಾಲೇಜಿನಿಂದ ಆರಂಭಗೊಂಡ ಪಥಸಂಚಲನ ಹಲವು ಮಾರ್ಗಗಳಿಂದ ಸಂಚಲನ ನಡೆಸಿ ಪುನಃ ನರ್ಮದಾ ಕಾಲೇಜು ತಲುಪಿ ಸಂಪನ್ನಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೇಡಂ (ಕಲಬುರಗಿ ಜಿಲ್ಲೆ):</strong> ಸೇಡಂನಲ್ಲಿ ಆರ್ಎಸ್ಎಸ್ ಶತಾಬ್ದಿ ನಿಮಿತ್ತ ಭಾನುವಾರ ಆಯೋಜಿಸಲಾಗಿದ್ದ ಗಣವೇಷಧಾರಿಗಳ ಪಥಸಂಚಲನ ಪೊಲೀಸರ ತಡೆಯ ಮಧ್ಯೆಯೂ ಆಕರ್ಷಕವಾಗಿ ಜರುಗಿತು.</p><p>ಪಟ್ಟಣದ ನರ್ಮದಾ ಕಾಲೇಜು ಆವರಣದಿಂದ ಆರಂಭವಾದ ಪಥಸಂಚಲನ ಡಿಬಿಆರ್ ಕಾಪೌಂಡ್ ಮೂಲಕ ಮುಖ್ಯ ರಸ್ತೆ ಪ್ರವೇಶಿಸುತ್ತಿದ್ದಂತೆಯೇ ಪೊಲೀಸರು ಗಣವೇಷಧಾರಿಗಳನ್ನು ವಶಕ್ಕೆ ಪಡೆದು ವಾಹನಗಳಿಗೆ ಹತ್ತಿಸಿದರು. ಇದನ್ನು ಸಾರ್ವಜನಿಕರು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಸಾರ್ವಜನಿಕರು ಮತ್ತು ಪೊಲೀಸರ ಮಧ್ಯೆ ವಾಗ್ವಾದ-ನೂಕು ನುಗ್ಗುಲು ಉಂಟಾಯಿತು.</p><p>ಕೆಲಕಾಲದ ಬಳಿಕ ವಶಕ್ಕೆ ಪಡೆದಿದ್ದ ಗಣವೇಷಧಾರಿಗಳನ್ನು ಪೊಲೀಸರು ಬಸ್ ನಿಲ್ದಾಣ, ತಾಲ್ಲೂಕು ಪಂಚಾಯಿತಿ ಸೇರಿದಂತೆ ವಿವಿಧೆಡೆ ಬಿಡುಗಡೆ ಮಾಡಿದರು. ನಂತರ ಪುನಃ ಗಣವೇಷಧಾರಿಗಳು ಅಲ್ಲಿಂದಲೇ ತಮ್ಮ ಪಥಸಂಚಲನ ಪ್ರಾರಂಭಿಸಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಹೆಜ್ಜೆಹಾಕಿದರು.</p><p>ಪಥ ಸಂಚಲನದ ಬರುವಿಕೆಗಾಗಿ ಕಾದಿದ್ದ ಬಡಾವಣೆಯ ಜನರು ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿಗೈದರು. ಪಟ್ಟಣದ ಕೆಲವು ಬಡಾವಣೆಗಳಲ್ಲಿ ಹಲವು ತಂಡಗಳಾಗಿ ವಿಭಜನೆಗೊಂಡರೂ ಗಣವೇಷಧಾರಿಗಳು ಬಹುತೇಕ ನಿಗದಿತ ಮಾರ್ಗದಲ್ಲೇ ಸಾಗಿದರು. ಕೆಲವೆಡೆ ಪುಟಾಣಿಗಳು ವಿವಿಧ ನಾಯಕರ ವೇಷಭೂಷಣಗಳಲ್ಲಿ ಕಂಗೊಳಿಸಿದರು.</p><p>ನರ್ಮದಾ ಕಾಲೇಜಿನಿಂದ ಆರಂಭಗೊಂಡ ಪಥಸಂಚಲನ ಹಲವು ಮಾರ್ಗಗಳಿಂದ ಸಂಚಲನ ನಡೆಸಿ ಪುನಃ ನರ್ಮದಾ ಕಾಲೇಜು ತಲುಪಿ ಸಂಪನ್ನಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>