<p><strong>ಜೇವರ್ಗಿ: </strong>‘ಹನ್ನೆರಡನೇ ಶತಮಾನದ ಬಸವಾದಿ ಶರಣರ ಚಿಂತನೆಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಸೊನ್ನ ವಿರಕ್ತ ಮಠದ ಪೀಠಾಧಿಪತಿ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮದಲ್ಲಿ ಮಂಗಳವಾರ ಮಹಾಲಕ್ಷ್ಮಿ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಿಮಿತ್ತ ಅವರು ‘ವಚನ ದರ್ಶನ’ ಪ್ರವಚನ ನೀಡಿದರು.</p>.<p>‘ಮಾನಸಿಕ ಖಿನ್ನತೆ ದೂರವಾಗಲು ಸತ್ಸಂಗದ ಔಷಧಿ ಪಡೆದುಕೊಳ್ಳಬೇಕು. ಬಸವಾದಿ ಶರಣರು ಬದುಕಿನುದ್ದಕ್ಕೂ ಸತ್ಯಶುದ್ಧ ಕಾಯಕ ಮತ್ತು ದಾಸೋಹ ಸೂತ್ರಗಳನ್ನು ಅಳವಡಿಕೊಂಡಿದ್ದರು. ಕಲ್ಲಹಂಗರಗಾ ಗ್ರಾಮಸ್ಥರು ಗ್ರಾಮ ದೇವತೆ ಮಹಾಲಕ್ಷ್ಮಿ ದೇವಸ್ಥಾನ ಉದ್ಘಾಟನೆ ನಿಮಿತ್ತ ವಚನ ದರ್ಶನ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದರು.</p>.<p>ಧಾರ್ಮಿಕ ಸಭೆಯನ್ನು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಉದ್ಘಾಟಿಸಿ, ‘ಕಲ್ಲಹಂಗರಗಾ ಸಾಮರಸ್ಯದ ಬದುಕಿಗೆ ಹೆಸರುವಾಸಿಯಾಗಿದೆ. ಬದುಕಿನಲ್ಲಿ ಧರ್ಮಾಚರಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಿಸಲು ಪ್ರತಿಯೊಬ್ಬರು ಕಂಕಣಬದ್ಧರಾಗಬೇಕು’ ಎಂದು ಹೇಳಿದರು.</p>.<p>ವೇದಿಕೆಯಲ್ಲಿ ಮುಖಂಡರಾದ ಎಸ್.ಎಸ್.ಸಲಗರ್, ಈರಣ್ಣ ಧನ್ನೂರ ಸೊನ್ನ, ನಿಂಗಣ್ಣಗೌಡ ಹಿರೇಗೌಡ ಸೊನ್ನ, ಭಗವಂತರಾಯಗೌಡ ಪಾಟೀಲ, ಶರಣು ಹೊಸಮನಿ, ಶರಣಗೌಡ ಪಾಟೀಲ ಮುತ್ತಕೋಡ, ದೇವಿಂದ್ರ ಹಂಗರಗಿ ಮುತ್ತಕೋಡ, ಶ್ರೀಶೈಲ ಕುಂಬಾರ, ರಾಜಶೇಖರ ಮುತ್ತಕೋಡ ಇದ್ದರು.</p>.<p>ಗಿರೆಪ್ಪಗೌಡ ಪಾಟೀಲ, ವಿಜಯಕುಮಾರ ಪಾಟೀಲ, ನಾಗಪ್ಪಗೌಡ ಪೊಲೀಸ್ ಪಾಟೀಲ, ಗುಂಡು ಸಾಹು ಸರ್ದಾರ, ನಿಂಗಣ್ಣ ಕುಂಬಾರ, ಅಶೋಕ ಮಾಲಿಪಾಟೀಲ, ತಮ್ಮಣ್ಣ ಬಾಗೇವಾಡಿ, ಸೋಮು ಕಲಬುರ್ಗಿ, ಗುಂಡು ಶಿರಸಗಿ, ಅಯ್ಯಣ್ಣ ಸಿಂದಗಿ, ಮಲ್ಲಿನಾಥ ಸರ್ದಾರ, ಯಲ್ಲಾಲಿಂಗ ಸಾಲಿ, ಬಾಪುಗೌಡ ಪಾಟೀಲ, ದೇವಪ್ಪ ಸಂತಿ ಹಾಗೂ ಕಲ್ಲಹಂಗರಗಾ, ಸೊನ್ನ, ಕೂಟನೂರ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.</p>.<p>ತಮ್ಮಣ್ಣ ಬಾಗೇವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಲ್ಲಾಲಿಂಗ ಸಾಲಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೇವರ್ಗಿ: </strong>‘ಹನ್ನೆರಡನೇ ಶತಮಾನದ ಬಸವಾದಿ ಶರಣರ ಚಿಂತನೆಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಸೊನ್ನ ವಿರಕ್ತ ಮಠದ ಪೀಠಾಧಿಪತಿ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮದಲ್ಲಿ ಮಂಗಳವಾರ ಮಹಾಲಕ್ಷ್ಮಿ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಿಮಿತ್ತ ಅವರು ‘ವಚನ ದರ್ಶನ’ ಪ್ರವಚನ ನೀಡಿದರು.</p>.<p>‘ಮಾನಸಿಕ ಖಿನ್ನತೆ ದೂರವಾಗಲು ಸತ್ಸಂಗದ ಔಷಧಿ ಪಡೆದುಕೊಳ್ಳಬೇಕು. ಬಸವಾದಿ ಶರಣರು ಬದುಕಿನುದ್ದಕ್ಕೂ ಸತ್ಯಶುದ್ಧ ಕಾಯಕ ಮತ್ತು ದಾಸೋಹ ಸೂತ್ರಗಳನ್ನು ಅಳವಡಿಕೊಂಡಿದ್ದರು. ಕಲ್ಲಹಂಗರಗಾ ಗ್ರಾಮಸ್ಥರು ಗ್ರಾಮ ದೇವತೆ ಮಹಾಲಕ್ಷ್ಮಿ ದೇವಸ್ಥಾನ ಉದ್ಘಾಟನೆ ನಿಮಿತ್ತ ವಚನ ದರ್ಶನ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದರು.</p>.<p>ಧಾರ್ಮಿಕ ಸಭೆಯನ್ನು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಉದ್ಘಾಟಿಸಿ, ‘ಕಲ್ಲಹಂಗರಗಾ ಸಾಮರಸ್ಯದ ಬದುಕಿಗೆ ಹೆಸರುವಾಸಿಯಾಗಿದೆ. ಬದುಕಿನಲ್ಲಿ ಧರ್ಮಾಚರಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಿಸಲು ಪ್ರತಿಯೊಬ್ಬರು ಕಂಕಣಬದ್ಧರಾಗಬೇಕು’ ಎಂದು ಹೇಳಿದರು.</p>.<p>ವೇದಿಕೆಯಲ್ಲಿ ಮುಖಂಡರಾದ ಎಸ್.ಎಸ್.ಸಲಗರ್, ಈರಣ್ಣ ಧನ್ನೂರ ಸೊನ್ನ, ನಿಂಗಣ್ಣಗೌಡ ಹಿರೇಗೌಡ ಸೊನ್ನ, ಭಗವಂತರಾಯಗೌಡ ಪಾಟೀಲ, ಶರಣು ಹೊಸಮನಿ, ಶರಣಗೌಡ ಪಾಟೀಲ ಮುತ್ತಕೋಡ, ದೇವಿಂದ್ರ ಹಂಗರಗಿ ಮುತ್ತಕೋಡ, ಶ್ರೀಶೈಲ ಕುಂಬಾರ, ರಾಜಶೇಖರ ಮುತ್ತಕೋಡ ಇದ್ದರು.</p>.<p>ಗಿರೆಪ್ಪಗೌಡ ಪಾಟೀಲ, ವಿಜಯಕುಮಾರ ಪಾಟೀಲ, ನಾಗಪ್ಪಗೌಡ ಪೊಲೀಸ್ ಪಾಟೀಲ, ಗುಂಡು ಸಾಹು ಸರ್ದಾರ, ನಿಂಗಣ್ಣ ಕುಂಬಾರ, ಅಶೋಕ ಮಾಲಿಪಾಟೀಲ, ತಮ್ಮಣ್ಣ ಬಾಗೇವಾಡಿ, ಸೋಮು ಕಲಬುರ್ಗಿ, ಗುಂಡು ಶಿರಸಗಿ, ಅಯ್ಯಣ್ಣ ಸಿಂದಗಿ, ಮಲ್ಲಿನಾಥ ಸರ್ದಾರ, ಯಲ್ಲಾಲಿಂಗ ಸಾಲಿ, ಬಾಪುಗೌಡ ಪಾಟೀಲ, ದೇವಪ್ಪ ಸಂತಿ ಹಾಗೂ ಕಲ್ಲಹಂಗರಗಾ, ಸೊನ್ನ, ಕೂಟನೂರ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.</p>.<p>ತಮ್ಮಣ್ಣ ಬಾಗೇವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಲ್ಲಾಲಿಂಗ ಸಾಲಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>