‘ಶ್ರದ್ಧೆಯಿಂದ ದೇವರು ಅಥವಾ ಗುರುವಿನಲ್ಲಿ ನಂಬಿಕೆ ಇಟ್ಟುಕೊಂಡು ಮಾಡುವ ಕಾಯಕಗಳನ್ನು ತಿಳಿಸುವ ಹಲವು ಪಂಥಗಳು ನಮ್ಮಲ್ಲಿವೆ. ಅದರಲ್ಲಿ ಸೂಫಿಗಳು, ವಚನಕಾರರು, ತತ್ವಪದಕಾರರು, ದಾಸರು ಇದ್ದಾರೆ. ಎಲ್ಲವುಗಳ ಮೂಲ ಉದ್ದೇಶ ಮನುಷ್ಯತ್ವದ ಅನಾವರಣ. ಅದರಾಚೆ ಅಧ್ಯಾತ್ಮದ ಅರಿವು ಪಡೆದು ಜೀವನ ರೂಪಿಸಿಕೊಳ್ಳುವುದಾಗಿತ್ತು. ಜಾತಿ, ಧರ್ಮ, ಬಣ್ಣ ಮತ್ತು ಭಾಷೆ ತುಸು ಹಿನ್ನೆಲೆಯಲ್ಲಿದ್ದವು. ಗುರುಪಂಥ ಮತ್ತು ಶಿಷ್ಯಪರಂಪರೆಯ ಮತ್ತೊಂದು ರೂಪವೇ ಅಮೂರ್ತ ಪರಂಪರೆ’ ಎಂದು ಅಭಿಪ್ರಾಯಪಟ್ಟರು.