ಭಾನುವಾರ ಬೆಳಗ್ಗೆ ತಾ.ಪಂ ಕಚೇರಿ ಎದುರಿನ ಹೋಟೆಲ್ನಲ್ಲಿ ಚಹಾ ಕುಡಿದಿದ್ದಾರೆ. ತಕ್ಷಣವೇ ಸಹಪಾಠಿ ರಮೇಶ ಪಾಟೀಲ ಅವರೊಂದಿಗೆ ಮಾತನಾಡುತ್ತಾ, ‘ನನಗೆ ಎದೆಯಲ್ಲಿ ನೋವಾಗುತ್ತಿದೆ’ ಎಂದು ತಿಳಿಸಿದ್ದಾರೆ. ಪಕ್ಕದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಲಾಯಿತು. ಅಲ್ಲಿ ವೈದ್ಯರು ಅವರಿಗೆ ಹೃದಯ ಬಡಿತ ಹೆಚ್ಚಾಗುತ್ತಿದೆ. ತಕ್ಷಣವೇ ಜಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಎಂದು ತಿಳಿಸಿದರು. ಅಂಬುಲೆನ್ಸ್ನಲ್ಲಿ ಜಿಮ್ಸ್ಗೆ ತೆರಳುತ್ತಿರುವಾಗ ಮಾರ್ಗ ಮಧ್ಯ ಆತನೂರ ಸಮೀಪ ಮೃತಪಟ್ಟರು ಎಂದು ಸಹಪಾಠಿ ರಮೇಶ ಪಾಟೀಲ ತಿಳಿಸಿದರು.