<p><strong>ಚಿತ್ತಾಪುರ</strong>: ‘ಶಾಲಾ ಕಾಲೇಜಿನಲ್ಲಿ ಆಯೋಜನೆ ಮಾಡುವ ಕ್ರೀಡಾ ಚಟುವಟಿಕೆಗಳು ಮತ್ತು ಕ್ರೀಡಾಕೂಟಗಳಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಕ್ರೀಡಾ ಪ್ರತಿಭೆ ಹೊರಹೊಮ್ಮಲು ಸಹಾಯಕವಾಗುತ್ತದೆ. ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢಗೊಳ್ಳುತ್ತದೆ’ ಎಂದು ವಿಶ್ವಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ್ ಕರದಾಳ ಹೇಳಿದರು.</p>.<p>ಪಟ್ಟಣದಲ್ಲಿ ವಿಶ್ವಗುರು ಶಿಕ್ಷಣ ಸಂಸ್ಥೆಯ ಮಹಾದೇವಮ್ಮ ಪಾಟೀಲ್ ಸಿಬಿಎಸ್ಇ ಶಾಲೆಯ ಅವರಣದಲ್ಲಿ ಗುರುವಾರ ಆಯೋಜಿಸಿದ್ದ ಸಿಬಿಎಸ್ಇ ಶಾಲೆಗಳ ಜಿಲ್ಲಾ ಮಟ್ಟದ ವಾಲಿಬಾಲ್ ಕ್ರೀಡಾಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕ್ರೀಡಾಜ್ಯೋತಿ ಸ್ವೀಕರಿಸಿ ಅವರು ಮಾತನಾಡಿದರು.</p>.<p>ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದಾರ ಕ್ರೀಡಾಕೂಟದ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲರಾದ ಶ್ರೀದೇವಿ ಗಂಜಿ, ಬನ್ನೆಮ್ಮ, ಜೆ.ರೆಡ್ಡಿ, ಸಂಸ್ಥೆಯ ಪಿಯುಸಿ ಕಾಲೇಜಿನ ಪ್ರಾಂಶುಪಾಲರಾದ ತ್ರೀವೇಣಿ ವಿ. ಪಾಟೀಲ್ ಉಪಸ್ಥಿತರಿದ್ದರು.</p>.<p>14 ವರ್ಷದ ಬಾಲಕರ ವಿಭಾಗ: ಸೇಡಂ ತಾಲ್ಲೂಕಿನ ವಾಸವದತ್ತಾ ವಿದ್ಯಾವಿಹಾರ ಶಾಲೆಯ ತಂಡ (ಪ್ರಥಮ), ವಾಡಿಯ ಡಿ.ಎ.ವಿ ಶಾಲೆಯ ತಂಡ (ದ್ವಿತೀಯ),</p>.<p>14 ವರ್ಷದ ಬಾಲಕಿಯರ ವಿಭಾಗ: ಛತ್ರಶಾಲಾ ವಿಕಟ್ ಸಾಗರ್ ವಿದ್ಯಾಮಂದಿರ ತಂಡ (ಪ್ರಥಮ), ಮಹಾದೇವಮ್ಮ ಪಾಟೀಲ್ ಶಾಲೆಯ ತಂಡ (ದ್ವಿತೀಯ) ವಿಜೇತರಾಗಿ ಬಹುಮಾನ ಪಡೆದುಕೊಂಡವು.</p>.<p>17 ವರ್ಷದ ಬಾಲಕರ ವಿಭಾಗ: ಮಹಾದೇವಮ್ಮ ಪಾಟೀಲ್ ಶಾಲೆಯ ತಂಡ (ಪ್ರಥಮ), ಡಿ.ಎ.ವಿ ಶಾಲೆಯ ತಂಡ (ದ್ವಿತೀಯ),</p>.<p>17 ವರ್ಷದ ಬಾಲಕಿಯರ ವಿಭಾಗ: ಮಹಾದೇವಮ್ಮ ಪಾಟೀಲ್ ಶಾಲೆಯ ತಂಡ (ಪ್ರಥಮ), ಮಳಖೇಡದ ಆದಿತ್ಯ ಬಿರ್ಲಾ ಶಾಲೆ ತಂಡ (ದ್ವಿತೀಯ) ವಿಜೇತರಾಗಿ ಬಹುಮಾನ ಪಡೆದುಕೊಂಡವು. ವಿಜೇತ ತಂಡಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಯಿತು. ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.</p>.<p>ಕಲಬುರಗಿ, ಛತ್ರಶಾಲಾ, ವಾಡಿ, ದಿಗ್ಗಾಂವ, ಸೇಡಂ, ಮಳಖೇಡ, ಚಿತ್ತಾಪುರ ಸೇರಿದಂತೆ ಒಟ್ಟು ಒಂಭತ್ತು ಸಿ.ಬಿ.ಎಸ್.ಇ ಶಾಲೆಗಳ ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.</p>.<p>ಒಂಭತ್ತನೇ ತರಗತಿಯ ವಿದ್ಯಾರ್ಥಿನಿ ಭವಾನಿ ಪ್ರಮೋದರೆಡ್ಡಿ ಸ್ವಾಗತಿಸಿದರು. ಒಂಭತ್ತನೇ ತರಗತಿ ವಿದ್ಯಾರ್ಥಿನಿ ಶಿವಲೀಲಾ ಭೋಜಪ್ಪ ಬೋಧಿಸಿದರು. ಹತ್ತನೇ ತರಗತಿ ವಿದ್ಯಾರ್ಥಿನಿ ಶೋಭಿತಾ ಬಸವರಾಜ ನಿರೂಪಿಸಿದರು. ಸ್ಫೂರ್ತಿ ಶರಣಗೌಡ ವಂದಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ತಾಪುರ</strong>: ‘ಶಾಲಾ ಕಾಲೇಜಿನಲ್ಲಿ ಆಯೋಜನೆ ಮಾಡುವ ಕ್ರೀಡಾ ಚಟುವಟಿಕೆಗಳು ಮತ್ತು ಕ್ರೀಡಾಕೂಟಗಳಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಕ್ರೀಡಾ ಪ್ರತಿಭೆ ಹೊರಹೊಮ್ಮಲು ಸಹಾಯಕವಾಗುತ್ತದೆ. ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢಗೊಳ್ಳುತ್ತದೆ’ ಎಂದು ವಿಶ್ವಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ್ ಕರದಾಳ ಹೇಳಿದರು.</p>.<p>ಪಟ್ಟಣದಲ್ಲಿ ವಿಶ್ವಗುರು ಶಿಕ್ಷಣ ಸಂಸ್ಥೆಯ ಮಹಾದೇವಮ್ಮ ಪಾಟೀಲ್ ಸಿಬಿಎಸ್ಇ ಶಾಲೆಯ ಅವರಣದಲ್ಲಿ ಗುರುವಾರ ಆಯೋಜಿಸಿದ್ದ ಸಿಬಿಎಸ್ಇ ಶಾಲೆಗಳ ಜಿಲ್ಲಾ ಮಟ್ಟದ ವಾಲಿಬಾಲ್ ಕ್ರೀಡಾಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕ್ರೀಡಾಜ್ಯೋತಿ ಸ್ವೀಕರಿಸಿ ಅವರು ಮಾತನಾಡಿದರು.</p>.<p>ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದಾರ ಕ್ರೀಡಾಕೂಟದ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲರಾದ ಶ್ರೀದೇವಿ ಗಂಜಿ, ಬನ್ನೆಮ್ಮ, ಜೆ.ರೆಡ್ಡಿ, ಸಂಸ್ಥೆಯ ಪಿಯುಸಿ ಕಾಲೇಜಿನ ಪ್ರಾಂಶುಪಾಲರಾದ ತ್ರೀವೇಣಿ ವಿ. ಪಾಟೀಲ್ ಉಪಸ್ಥಿತರಿದ್ದರು.</p>.<p>14 ವರ್ಷದ ಬಾಲಕರ ವಿಭಾಗ: ಸೇಡಂ ತಾಲ್ಲೂಕಿನ ವಾಸವದತ್ತಾ ವಿದ್ಯಾವಿಹಾರ ಶಾಲೆಯ ತಂಡ (ಪ್ರಥಮ), ವಾಡಿಯ ಡಿ.ಎ.ವಿ ಶಾಲೆಯ ತಂಡ (ದ್ವಿತೀಯ),</p>.<p>14 ವರ್ಷದ ಬಾಲಕಿಯರ ವಿಭಾಗ: ಛತ್ರಶಾಲಾ ವಿಕಟ್ ಸಾಗರ್ ವಿದ್ಯಾಮಂದಿರ ತಂಡ (ಪ್ರಥಮ), ಮಹಾದೇವಮ್ಮ ಪಾಟೀಲ್ ಶಾಲೆಯ ತಂಡ (ದ್ವಿತೀಯ) ವಿಜೇತರಾಗಿ ಬಹುಮಾನ ಪಡೆದುಕೊಂಡವು.</p>.<p>17 ವರ್ಷದ ಬಾಲಕರ ವಿಭಾಗ: ಮಹಾದೇವಮ್ಮ ಪಾಟೀಲ್ ಶಾಲೆಯ ತಂಡ (ಪ್ರಥಮ), ಡಿ.ಎ.ವಿ ಶಾಲೆಯ ತಂಡ (ದ್ವಿತೀಯ),</p>.<p>17 ವರ್ಷದ ಬಾಲಕಿಯರ ವಿಭಾಗ: ಮಹಾದೇವಮ್ಮ ಪಾಟೀಲ್ ಶಾಲೆಯ ತಂಡ (ಪ್ರಥಮ), ಮಳಖೇಡದ ಆದಿತ್ಯ ಬಿರ್ಲಾ ಶಾಲೆ ತಂಡ (ದ್ವಿತೀಯ) ವಿಜೇತರಾಗಿ ಬಹುಮಾನ ಪಡೆದುಕೊಂಡವು. ವಿಜೇತ ತಂಡಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಯಿತು. ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.</p>.<p>ಕಲಬುರಗಿ, ಛತ್ರಶಾಲಾ, ವಾಡಿ, ದಿಗ್ಗಾಂವ, ಸೇಡಂ, ಮಳಖೇಡ, ಚಿತ್ತಾಪುರ ಸೇರಿದಂತೆ ಒಟ್ಟು ಒಂಭತ್ತು ಸಿ.ಬಿ.ಎಸ್.ಇ ಶಾಲೆಗಳ ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.</p>.<p>ಒಂಭತ್ತನೇ ತರಗತಿಯ ವಿದ್ಯಾರ್ಥಿನಿ ಭವಾನಿ ಪ್ರಮೋದರೆಡ್ಡಿ ಸ್ವಾಗತಿಸಿದರು. ಒಂಭತ್ತನೇ ತರಗತಿ ವಿದ್ಯಾರ್ಥಿನಿ ಶಿವಲೀಲಾ ಭೋಜಪ್ಪ ಬೋಧಿಸಿದರು. ಹತ್ತನೇ ತರಗತಿ ವಿದ್ಯಾರ್ಥಿನಿ ಶೋಭಿತಾ ಬಸವರಾಜ ನಿರೂಪಿಸಿದರು. ಸ್ಫೂರ್ತಿ ಶರಣಗೌಡ ವಂದಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>