<p><strong>ಅಫಜಲಪುರ: </strong>‘ಕಾರ್ಮಿಕರ ಸಮಸ್ಯೆಯಿಂದ ಪ್ರತಿವರ್ಷ ಪರದಾಡುತ್ತಿರುವ ಕಬ್ಬು ಬೆಳೆಗಾರರಿಗೆ ‘ಕಬ್ಬು ಕಟಾವು ಯಂತ್ರ’ದಿಂದ ಸಮಯ, ಹಣ ಉಳಿತಾಯ ಆಗಲಿದೆ’ ಎಂದು ಶಾಸಕ ಎಂ.ವೈ.ಪಾಟೀಲ ತಿಳಿಸಿದರು.</p>.<p>ತಾಲ್ಲೂಕಿನ ನಂದರಗಾ ಗ್ರಾಮದಲ್ಲಿ ಮಾತೋಶ್ರಿ ಲಕ್ಷ್ಮೀಬಾಯಿ ಮೇತ್ರೆ ಸಕ್ಕರೆ ಕಾರ್ಖಾನೆ (ದುಧನಿ)ಯವರು ರೈತ ಶಿವಶರಣಪ್ಪ ನಾಗಪ್ಪ ನಾಟೀಕಾರ ಅವರಿಗೆ ನೀಡಿರುವ ಕಬ್ಬು ಕಟಾವು ಯಂತ್ರಕ್ಕೆ ಶುಕ್ರವಾರ ಪೂಜೆ ಸಲ್ಲಿಸಿ ಮಾತನಾಡಿದರು.</p>.<p>‘ಸುಮಾರು ₹ 1.3 ಕೋಟಿ ವೆಚ್ಚದ ಕಬ್ಬು ಕಟಾವು ಯಂತ್ರ ಶಿವಶರಣಪ್ಪ ನಾಟೀಕಾರ ರೈತರು ಧೈರ್ಯ ಮಾಡಿ ಇಷ್ಟೊಂದು ಬಂಡವಾಳ ಹಾಕಿ ಕಬ್ಬು ಕಟಾವು ಯಂತ್ರ ತಂದಿದ್ದಾರೆ. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಪ್ರತಿವರ್ಷ ಕಬ್ಬು ಕಟಾವು ಮಾಡಲು ಕಾರ್ಮಿಕರು ಸಿಗದೇ ಕಬ್ಬು ಬೆಳೆಗಾರರು ಕಷ್ಟ ಪಡುತ್ತಿದ್ದರು. ಅವರಿಗಾಗಿ ವಿನಾಕಾರಣ ಹಣ ಖರ್ಚು ಮಾಡುತ್ತಿದ್ದರು. ಈ ಯಂತ್ರದಿಂದ ಕಡಿಮೆ ಖರ್ಚಿನಲ್ಲಿ ಕಬ್ಬು ಕಾರ್ಖಾನೆಗೆ ಪೂರೈಕೆಯಾಗಲಿದೆ. ಇಂತಹ ರೈತರು ಮುಂದೆ ಬರಬೇಕು’ ಎಂದು ತಿಳಿಸಿದರು.</p>.<p>ನಂದರಗಾ ಗ್ರಾಮದ ರೈತ ಮುಖಂಡರಾದ ಭೀಮರಾವ್ ಗೌಡ ಪಾಟೀಲ ಮಾತನಾಡಿ, ‘ಕರ್ನಾಟಕದಲ್ಲಿ ಕಬ್ಬು ಕಟಾವು ಯಂತ್ರ ಖರೀದಿ ಮಾಡಿದರೆ ಸರ್ಕಾರ ಸುಮಾರು ₹ 36 ಲಕ್ಷ ಸಹಾಯ ಧನ ನೀಡುತ್ತದೆ. ಅಂತಹ ರೈತರು ಮುಂದೆ ಬರುತ್ತಾರೆ’ ಎಂದು ತಿಳಿಸಿದರು.</p>.<p>ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ಹೊಸುರೆಸಾಬ್ ಮಾತನಾಡಿ, ‘ನಮ್ಮ ಸಕ್ಕರೆ ಕಾರ್ಖಾನೆಯಿಂದ ನಂಬಿಕಸ್ಥ ಕಬ್ಬು ಬೆಳೆಗಾರರಿಗೆ ಕಬ್ಬು ಕಟಾವು ಯಂತ್ರಗಳನ್ನು ಖರೀದಿ ಮಾಡಲು ಆರ್ಥಿಕ ಸಹಾಯ ನೀಡಲಾಗುತ್ತದೆ. ಕಾರ್ಖಾನೆ ವ್ಯಾಪ್ತಿಯಲ್ಲಿ ಒಟ್ಟು 6 ಕಬ್ಬು ಕಟಾವು ಯಂತ್ರಗಳಿವೆ. ನಾವು ಪ್ರತಿ ಟನ್ ಕಬ್ಬಿಗೆ ₹ 400 ಕಡಿತ ಮಾಡುತ್ತೇವೆ ಮತ್ತು ₹ 1 ಲಕ್ಷಕ್ಕೆ 5 ಸಾವಿರ ಕಡಿತ ಮಾಡುತ್ತೇವೆ’ ಎಂದು ತಿಳಿಸಿದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ ಜಮಾದಾರ, ರೈತ ಮುಖಂಡರಾದ ಶ್ರೀಶೈಲ ಗೌರ, ದಿವಾಣಜಿ, ಸಂತೋಷ ವಗದರಿಗಿ, ವಿಶ್ವನಾಥ ಕಾಮನಳ್ಳಿ, ಶಿವಶರಣಪ್ಪ ರೇವೂರ, ಮಹಾಂತೇಶ ಮಾಲಿ ಪಾಟೀಲ, ಗುಂಡು ರೇವೂರ, ನಾಗು ಬಾಲದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಫಜಲಪುರ: </strong>‘ಕಾರ್ಮಿಕರ ಸಮಸ್ಯೆಯಿಂದ ಪ್ರತಿವರ್ಷ ಪರದಾಡುತ್ತಿರುವ ಕಬ್ಬು ಬೆಳೆಗಾರರಿಗೆ ‘ಕಬ್ಬು ಕಟಾವು ಯಂತ್ರ’ದಿಂದ ಸಮಯ, ಹಣ ಉಳಿತಾಯ ಆಗಲಿದೆ’ ಎಂದು ಶಾಸಕ ಎಂ.ವೈ.ಪಾಟೀಲ ತಿಳಿಸಿದರು.</p>.<p>ತಾಲ್ಲೂಕಿನ ನಂದರಗಾ ಗ್ರಾಮದಲ್ಲಿ ಮಾತೋಶ್ರಿ ಲಕ್ಷ್ಮೀಬಾಯಿ ಮೇತ್ರೆ ಸಕ್ಕರೆ ಕಾರ್ಖಾನೆ (ದುಧನಿ)ಯವರು ರೈತ ಶಿವಶರಣಪ್ಪ ನಾಗಪ್ಪ ನಾಟೀಕಾರ ಅವರಿಗೆ ನೀಡಿರುವ ಕಬ್ಬು ಕಟಾವು ಯಂತ್ರಕ್ಕೆ ಶುಕ್ರವಾರ ಪೂಜೆ ಸಲ್ಲಿಸಿ ಮಾತನಾಡಿದರು.</p>.<p>‘ಸುಮಾರು ₹ 1.3 ಕೋಟಿ ವೆಚ್ಚದ ಕಬ್ಬು ಕಟಾವು ಯಂತ್ರ ಶಿವಶರಣಪ್ಪ ನಾಟೀಕಾರ ರೈತರು ಧೈರ್ಯ ಮಾಡಿ ಇಷ್ಟೊಂದು ಬಂಡವಾಳ ಹಾಕಿ ಕಬ್ಬು ಕಟಾವು ಯಂತ್ರ ತಂದಿದ್ದಾರೆ. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಪ್ರತಿವರ್ಷ ಕಬ್ಬು ಕಟಾವು ಮಾಡಲು ಕಾರ್ಮಿಕರು ಸಿಗದೇ ಕಬ್ಬು ಬೆಳೆಗಾರರು ಕಷ್ಟ ಪಡುತ್ತಿದ್ದರು. ಅವರಿಗಾಗಿ ವಿನಾಕಾರಣ ಹಣ ಖರ್ಚು ಮಾಡುತ್ತಿದ್ದರು. ಈ ಯಂತ್ರದಿಂದ ಕಡಿಮೆ ಖರ್ಚಿನಲ್ಲಿ ಕಬ್ಬು ಕಾರ್ಖಾನೆಗೆ ಪೂರೈಕೆಯಾಗಲಿದೆ. ಇಂತಹ ರೈತರು ಮುಂದೆ ಬರಬೇಕು’ ಎಂದು ತಿಳಿಸಿದರು.</p>.<p>ನಂದರಗಾ ಗ್ರಾಮದ ರೈತ ಮುಖಂಡರಾದ ಭೀಮರಾವ್ ಗೌಡ ಪಾಟೀಲ ಮಾತನಾಡಿ, ‘ಕರ್ನಾಟಕದಲ್ಲಿ ಕಬ್ಬು ಕಟಾವು ಯಂತ್ರ ಖರೀದಿ ಮಾಡಿದರೆ ಸರ್ಕಾರ ಸುಮಾರು ₹ 36 ಲಕ್ಷ ಸಹಾಯ ಧನ ನೀಡುತ್ತದೆ. ಅಂತಹ ರೈತರು ಮುಂದೆ ಬರುತ್ತಾರೆ’ ಎಂದು ತಿಳಿಸಿದರು.</p>.<p>ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ಹೊಸುರೆಸಾಬ್ ಮಾತನಾಡಿ, ‘ನಮ್ಮ ಸಕ್ಕರೆ ಕಾರ್ಖಾನೆಯಿಂದ ನಂಬಿಕಸ್ಥ ಕಬ್ಬು ಬೆಳೆಗಾರರಿಗೆ ಕಬ್ಬು ಕಟಾವು ಯಂತ್ರಗಳನ್ನು ಖರೀದಿ ಮಾಡಲು ಆರ್ಥಿಕ ಸಹಾಯ ನೀಡಲಾಗುತ್ತದೆ. ಕಾರ್ಖಾನೆ ವ್ಯಾಪ್ತಿಯಲ್ಲಿ ಒಟ್ಟು 6 ಕಬ್ಬು ಕಟಾವು ಯಂತ್ರಗಳಿವೆ. ನಾವು ಪ್ರತಿ ಟನ್ ಕಬ್ಬಿಗೆ ₹ 400 ಕಡಿತ ಮಾಡುತ್ತೇವೆ ಮತ್ತು ₹ 1 ಲಕ್ಷಕ್ಕೆ 5 ಸಾವಿರ ಕಡಿತ ಮಾಡುತ್ತೇವೆ’ ಎಂದು ತಿಳಿಸಿದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ ಜಮಾದಾರ, ರೈತ ಮುಖಂಡರಾದ ಶ್ರೀಶೈಲ ಗೌರ, ದಿವಾಣಜಿ, ಸಂತೋಷ ವಗದರಿಗಿ, ವಿಶ್ವನಾಥ ಕಾಮನಳ್ಳಿ, ಶಿವಶರಣಪ್ಪ ರೇವೂರ, ಮಹಾಂತೇಶ ಮಾಲಿ ಪಾಟೀಲ, ಗುಂಡು ರೇವೂರ, ನಾಗು ಬಾಲದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>