ಸೇಡಂ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಯಾನಾಗುಂದಿ ಗ್ರಾಮದ ದೇವಸ್ಥಾನದ ಸಿಬ್ಬಂದಿ ದೇವರ ದರ್ಶನಕ್ಕೆ ಮುಂದಾದ ಸಾಧು ಒಬ್ಬರನ್ನು ಎಳೆದಾಡಿದ್ದಾರೆ ಎನ್ನಲಾದ ವಿಡಿಯೊ ಭಾನುವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಗ್ರಾಮದ ಬೆಟ್ಟದ ಮೇಲಿನ ಮಾತೆ ಮಾಣಿಕೇಶ್ವರಿಯ ಸನ್ನಿಧಿಯತ್ತ ತೆರಳಲು ಸಾಧು ಮುಂದಾದರು. ಆಗ ದೇವಸ್ಥಾನದ ಸಿಬ್ಬಂದಿ ಬಂದು, ‘ಕೀಲಿ ಏಕೆ ಒಡೆಯುತ್ತಿದ್ದಿಯಾ’ ಎಂದು ಪ್ರಶ್ನಿಸಿ ದರದರನೆ ಎಳೆದೊಯ್ದು ನಿಂದಿಸಿದ್ದಾರೆ ಎನ್ನಲಾಗುತ್ತಿದೆ.