<p><strong>ಕಾಳಗಿ</strong>: ಅತಿವೃಷ್ಟಿ ಪರಿಣಾಮ ತಾಲ್ಲೂಕಿನಲ್ಲಿ ತೊಗರಿ ಬೆಳೆ ಗೊಡ್ಡು (ನೆಟೆ) ರೋಗಕ್ಕೆ ತಿರುಗಿದ್ದು ಅನ್ನದಾತರು ಕಂಗಾಲಾಗಿದ್ದಾರೆ.</p><p>ಈ ಪ್ರದೇಶದ ರೈತರು ಮೊದಲೇ ತೊಗರಿ ಮೇಲೆ ಅವಲಂಬಿತರಾಗಿ ಪ್ರತಿವರ್ಷ ಮುಂಗಾರಿನಲ್ಲಿ ಅತಿ ಹೆಚ್ಚು ತೊಗರಿ ಬಿತ್ತನೆ ಮಾಡುತ್ತಾರೆ.</p><p>ಸಿಕ್ಕಾಪಟ್ಟೆ ಖರ್ಚು ಮಾಡಿ ಕಷ್ಟಪಟ್ಟು ಎಷ್ಟೊ ಸಲ ಉತ್ತಮ ಇಳುವರಿ ತೆಗೆದಾಗ ಸರಿಯಾದ ಬೆಂಬಲ ಬೆಲೆ ದೊರೆಯದೆ ಕೃಷಿಕರು ಹೈರಾಣಾಗಿದ್ದಾರೆ. ಆ ವೇಳೆ ಹೆಸರು, ಉದ್ದು ಆದರೂ ಚೆನ್ನಾಗಿ ಬೆಳೆದು ಒಂದಿಷ್ಟು ಖರ್ಚಿಗೆ ಅನುಕೂಲ ಮಾಡಿಕೊಳ್ಳುತ್ತಿದ್ದರು.</p><p>ಆದರೆ, ಈ ವರ್ಷ ಮಿತಿಮೀರಿ ಸುರಿದ ಮಳೆಗೆ ಮುಂಗಾರಿನ ಹೆಸರು, ಉದ್ದು ಮೊದಲೇ ಕೈ ಕೊಟ್ಟಿವೆ. ತೊಗರಿಯಾದರೂ ಕೈ ಹಿಡಿಯುತ್ತಾ ಎಂದುಕೊಂಡಿದ್ದ ರೈತರಿಗೆ ಹೂವು, ಚೆಳ್ಳಿ (ಮೊಗ್ಗು) ಮೂಡುವ ಮುಂಚೆಯೇ ತೊಗರಿ ಗೊಡ್ಡುರೋಗ ಬಾಧೆಗೆ ತುತ್ತಾಗಿದನ್ನು ನೋಡಿ ಮರಗುತ್ತಿದ್ದಾರೆ.</p><p>ರಟಕಲ್, ಕಾಳಗಿ, ಪಸ್ತಾಪುರ, ರಾಯಕೋಡ, ಮಂಗಲಗಿ, ಭರತನೂರ, ರಾಜಾಪುರ, ಹಲಚೇರಾ, ಮಲಘಾಣ ಮುಂತಾದ ಗ್ರಾಮಗಳಿಂದ ರೈತರು ಕೃಷಿ ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ತೊಗರಿ ಗೊಡ್ಡು ರೋಗಕ್ಕೆ ಹೋಗಿದ್ದರ ಬಗ್ಗೆ ಗಮನಕ್ಕೆ ತರುತ್ತಿದ್ದಾರೆ.</p><p>ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬೆಳವಣಿಗೆ ಕುಂಠಿತಗೊಂಡಿವೆ. ಕೆಲಕಡೆ ರೈತರು ನೆಟೆ ರೋಗದ ತೊಗರಿ ಪೂರ್ತಿಯಾಗಿ ಕಿತ್ತುಹಾಕಿ ಸಂಕಷ್ಟ ತೋಡಿ ಕೊಳ್ಳುತ್ತಿದ್ದಾರೆ.</p><p>ಕೇವಲ ತೊಗರಿಯೊಂದೇ ಬಿತ್ತನೆ ಮಾಡಿದ್ದ ರೈತರು ಈಗ ನೆಟೆರೋಗ ಕಂಡು ಕುಸುಬೆ, ಕಡ್ಲಿಯೂ ಬಿತ್ತನೆ ಮಾಡದ ಸ್ಥಿತಿಯಲ್ಲಿ ದಿಕ್ಕುತೋಚದೆ ಕುಳಿತಿದ್ದಾರೆ. ಕೃಷಿ ಮನೆತನದ ವರ್ಷದ ಖರ್ಚಿನ ಚಿಂತೆ ಮಾಡುತ್ತಿದ್ದಾರೆ. </p>.<div><blockquote>ತೊಗರಿ ಗೊಡ್ಡುರೋಗಕ್ಕೆ ಹೋಗಿದ್ದರ ಬಗ್ಗೆ ಅನೇಕ ಕಡೆ ರೈತರಿಂದ ಫೋನ್ ಕರೆ ಬರುತ್ತಿವೆ. ರೋಗದ ಲಕ್ಷಣಗಳು ನೋಡಿ ನಿರ್ವಹಣೆ ಮಾಡಲು ಸಲಹೆ ನೀಡಲಾಗುತ್ತಿದೆ</blockquote><span class="attribution">ಸರೋಜಾ ಕಲಬುರಗಿ, ಕೃಷಿ ಅಧಿಕಾರಿ ಕಾಳಗಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ</strong>: ಅತಿವೃಷ್ಟಿ ಪರಿಣಾಮ ತಾಲ್ಲೂಕಿನಲ್ಲಿ ತೊಗರಿ ಬೆಳೆ ಗೊಡ್ಡು (ನೆಟೆ) ರೋಗಕ್ಕೆ ತಿರುಗಿದ್ದು ಅನ್ನದಾತರು ಕಂಗಾಲಾಗಿದ್ದಾರೆ.</p><p>ಈ ಪ್ರದೇಶದ ರೈತರು ಮೊದಲೇ ತೊಗರಿ ಮೇಲೆ ಅವಲಂಬಿತರಾಗಿ ಪ್ರತಿವರ್ಷ ಮುಂಗಾರಿನಲ್ಲಿ ಅತಿ ಹೆಚ್ಚು ತೊಗರಿ ಬಿತ್ತನೆ ಮಾಡುತ್ತಾರೆ.</p><p>ಸಿಕ್ಕಾಪಟ್ಟೆ ಖರ್ಚು ಮಾಡಿ ಕಷ್ಟಪಟ್ಟು ಎಷ್ಟೊ ಸಲ ಉತ್ತಮ ಇಳುವರಿ ತೆಗೆದಾಗ ಸರಿಯಾದ ಬೆಂಬಲ ಬೆಲೆ ದೊರೆಯದೆ ಕೃಷಿಕರು ಹೈರಾಣಾಗಿದ್ದಾರೆ. ಆ ವೇಳೆ ಹೆಸರು, ಉದ್ದು ಆದರೂ ಚೆನ್ನಾಗಿ ಬೆಳೆದು ಒಂದಿಷ್ಟು ಖರ್ಚಿಗೆ ಅನುಕೂಲ ಮಾಡಿಕೊಳ್ಳುತ್ತಿದ್ದರು.</p><p>ಆದರೆ, ಈ ವರ್ಷ ಮಿತಿಮೀರಿ ಸುರಿದ ಮಳೆಗೆ ಮುಂಗಾರಿನ ಹೆಸರು, ಉದ್ದು ಮೊದಲೇ ಕೈ ಕೊಟ್ಟಿವೆ. ತೊಗರಿಯಾದರೂ ಕೈ ಹಿಡಿಯುತ್ತಾ ಎಂದುಕೊಂಡಿದ್ದ ರೈತರಿಗೆ ಹೂವು, ಚೆಳ್ಳಿ (ಮೊಗ್ಗು) ಮೂಡುವ ಮುಂಚೆಯೇ ತೊಗರಿ ಗೊಡ್ಡುರೋಗ ಬಾಧೆಗೆ ತುತ್ತಾಗಿದನ್ನು ನೋಡಿ ಮರಗುತ್ತಿದ್ದಾರೆ.</p><p>ರಟಕಲ್, ಕಾಳಗಿ, ಪಸ್ತಾಪುರ, ರಾಯಕೋಡ, ಮಂಗಲಗಿ, ಭರತನೂರ, ರಾಜಾಪುರ, ಹಲಚೇರಾ, ಮಲಘಾಣ ಮುಂತಾದ ಗ್ರಾಮಗಳಿಂದ ರೈತರು ಕೃಷಿ ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ತೊಗರಿ ಗೊಡ್ಡು ರೋಗಕ್ಕೆ ಹೋಗಿದ್ದರ ಬಗ್ಗೆ ಗಮನಕ್ಕೆ ತರುತ್ತಿದ್ದಾರೆ.</p><p>ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬೆಳವಣಿಗೆ ಕುಂಠಿತಗೊಂಡಿವೆ. ಕೆಲಕಡೆ ರೈತರು ನೆಟೆ ರೋಗದ ತೊಗರಿ ಪೂರ್ತಿಯಾಗಿ ಕಿತ್ತುಹಾಕಿ ಸಂಕಷ್ಟ ತೋಡಿ ಕೊಳ್ಳುತ್ತಿದ್ದಾರೆ.</p><p>ಕೇವಲ ತೊಗರಿಯೊಂದೇ ಬಿತ್ತನೆ ಮಾಡಿದ್ದ ರೈತರು ಈಗ ನೆಟೆರೋಗ ಕಂಡು ಕುಸುಬೆ, ಕಡ್ಲಿಯೂ ಬಿತ್ತನೆ ಮಾಡದ ಸ್ಥಿತಿಯಲ್ಲಿ ದಿಕ್ಕುತೋಚದೆ ಕುಳಿತಿದ್ದಾರೆ. ಕೃಷಿ ಮನೆತನದ ವರ್ಷದ ಖರ್ಚಿನ ಚಿಂತೆ ಮಾಡುತ್ತಿದ್ದಾರೆ. </p>.<div><blockquote>ತೊಗರಿ ಗೊಡ್ಡುರೋಗಕ್ಕೆ ಹೋಗಿದ್ದರ ಬಗ್ಗೆ ಅನೇಕ ಕಡೆ ರೈತರಿಂದ ಫೋನ್ ಕರೆ ಬರುತ್ತಿವೆ. ರೋಗದ ಲಕ್ಷಣಗಳು ನೋಡಿ ನಿರ್ವಹಣೆ ಮಾಡಲು ಸಲಹೆ ನೀಡಲಾಗುತ್ತಿದೆ</blockquote><span class="attribution">ಸರೋಜಾ ಕಲಬುರಗಿ, ಕೃಷಿ ಅಧಿಕಾರಿ ಕಾಳಗಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>