‘10-12 ದಿನಗಳ ಹಿಂದೆ 18 ಟನ್ ಕಲ್ಲಂಗಡಿ ಹಣ್ಣುಗಳನ್ನು ಶಾಂತಲಿಂಗ ಮಾಶಾಳ ಎಂಬುವವರಿಗೆ ಪ್ರತಿ ಕೆ.ಜಿಗೆ ₹6 ದರದಲ್ಲಿ ಮಾರಾಟ ಮಾಡಿದ್ದಾರೆ. ಇನ್ನೂ 10ರಿಂದ12 ಟನ್ ಕಲ್ಲಂಗಡಿ ಕೊಯ್ಲಿಗೆ ಬಂದಿದ್ದು, ಹಣ್ಣುಗಳನ್ನು ಕೊಯ್ಲು ಮಾಡಿ ನೆರಳಿನಲ್ಲಿಡಿ ನಾನು ಲಾರಿ ತೆಗೆದುಕೊಂಡು ಬಂದು ಹಣ್ಣು ಒಯ್ಯುತ್ತೇನೆ ಎಂದು ಹೇಳಿದವನು ಮರಳಿ ಬಂದಿಲ್ಲ. ಹಣ್ಣುಗಳನ್ನು ಮಾರಾಟ ಮಾಡಲಾಗದೆ ಮನೆಯ ಜಾನುವಾರುಗಳಿಗೆ ತಿನ್ನಿಸುತ್ತಿದ್ದೇವೆ’ ಎಂದರು.