ಮೇಯಲು ಬಂದ ಹಸು ಒಂದು ಆಕಸ್ಮಿಕವಾಗಿ ಕೆಸರಿನಲ್ಲಿ ಸಿಲುಕಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿತ್ತು. ಸಮೀಪದಲ್ಲಿ ಆಟವಾಡಿಕೊಂಡಿದ್ದ 12 ವರ್ಷದ ಬಾಲಕ ಅರ್ಜುನ್ ಸಾಗರ್, ಅದನ್ನು ನೋಡಿ ತನ್ನ ಸ್ನೇಹಿತರೊಂದಿಗೆ ಸೇರಿ ರಕ್ಷಣೆ ಮಾಡಿದ್ದ. ಕೆಸರಿನಿಂದ ಮೇಲೆ ಬರಲು ಹೆಣಗಾಡುತ್ತಿದ್ದ ಹಸುವನ್ನು ನೋಡಿ ಮರುಗಿದ ಅರ್ಜುನ್ ಹೇಗಾದರೂ ಮಾಡಿ ಹಸುವಿನ ಪ್ರಾಣ ರಕ್ಷಿಸಬೇಕೆಂಬ ಛಲದಿಂದ ಸ್ನೇಹಿತರೊಂದಿಗೆ ಸುಮಾರು 5 ಗಂಟೆಗಳ ಕಾಲ ಪ್ರಯತ್ನಿಸಿ ಹಸುವನ್ನು ಸಾವಿನಿಂದ ಪಾರು ಮಾಡಿದ್ದ.