<p><strong>ಮಡಿಕೇರಿ:</strong> ಕೊಡಗು ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 6,500 ಹೆರಿಗೆಗಳಾದರೆ, ಅದರಲ್ಲಿ ಪ್ರತಿ ವರ್ಷ ಸರಾಸರಿ 50–55 ನವಜಾತ ಶಿಶುಗಳು ಮೃತಪಟ್ಟಿವೆ.</p>.<p>ಶಿಶು ಬದುಕುಲು, ರೋಗಗಳಿಂದ ಪಾರಾಗಲು, ದೈಹಿಕವಾಗಿ, ಮಾನಸಿಕವಾಗಿ ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಲು ಹುಟ್ಟಿನಿಂದ 2 ವರ್ಷದವರೆಗೂ ನಿರಂತರವಾಗಿ ಸ್ತನ್ಯಪಾನ ಮಾಡಿಸಲೇಬೇಕು ಎಂದು ವೈದ್ಯರು ಹೇಳುತ್ತಾರೆ.</p>.<p>ಅದರಲ್ಲೂ ಮುಖ್ಯವಾಗಿ, ನವಜಾತ ಶಿಶುಗಳಿಗೆ ವಿವಿಧ ಬಗೆಯ ಸೊಪ್ಪಿನ ರಸ ಕುಡಿಸುವ ಪರಿಪಾಠ ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಇದೊಂದು ಸಾಮಾಜಿಕ ಪಿಡುಗು ಎಂದೇ ಮಕ್ಕಳ ಆರೋಗ್ಯ ಅಧಿಕಾರಿ ಡಾ.ಮಧುಸೂದನ್ ಹೇಳುತ್ತಾರೆ.</p>.<p>ಮಗು ಹೆಚ್ಚು ಅಳುತ್ತಿದ್ದರೆ, ಹಾಲು ಕುಡಿಯದೇ ಹೋದರೆ, ಅನಾರೋಗ್ಯ ಉಂಟಾದರೆ ಎದೆಹಾಲಿನ ಬದಲಿಗೆ ವಿವಿಧ ಬಗೆಯ ಸೊಪ್ಪಿನ ರಸಗಳನ್ನು ಕುಡಿಸುವುದು ಜಿಲ್ಲೆಯಲ್ಲಿ ಅಧಿಕ. ಇದರಿಂದ ಮಗುವಿಗೆ ಸೋಂಕು ಉಂಟಾಗಿ, ಕಾಯಿಲೆಗಳಿಗೆ ತುತ್ತಾಗುತ್ತದೆ. ಹಾಗಾಗಿ, ಈ ಪರಿಪಾಠವನ್ನು ಬಿಡಬೇಕು ಎಂದು ಅವರು ಹೇಳುತ್ತಾರೆ.</p>.<p>ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ 6 ತಿಂಗಳವರೆಗೆ ಎದೆಹಾಲು ಕುಡಿಸುವವರ ಪ್ರಮಾಣ ಶೇ 61ರಷ್ಟು ಮಾತ್ರ. ಬಹಳಷ್ಟು ತಾಯಂದಿರು ಎದೆಹಾಲಿನ ಬದಲಿಗೆ ಬೇರೆ, ಬೇರೆ ಬಗೆಯ ಹಾಲು ಕುಡಿಸುತ್ತಾರೆ. ಇದರಿಂದ ಮಗು ಕಾಯಿಲೆಗಳಿಗೆ ತುತ್ತಾಗಿ ಸಾವು ಸಂಭವಿಸಬಹುದು.</p>.<p>ಜನಿಸಿದ ಒಂದು ಗಂಟೆಯ ಒಳಗೆ ಎದೆಹಾಲು ಕುಡಿಸುವುದರಿಂದ ನ್ಯೂಮೊನಿಯಾ, ಅತಿಸಾರ ಹಾಗೂ ಅಪೌಷ್ಟಿಕತೆಯಿಂದ ಮಗುವನ್ನು ರಕ್ಷಿಸಬಹುದು. 6 ತಿಂಗಳವರೆಗೂ ಪ್ರತಿ 2 ಗಂಟೆಗಳಿಗೆ ಒಮ್ಮೆಯಾದರೂ ಎದೆ ಹಾಲು ಕುಡಿಸಬೇಕು. ನಂತರ 2 ವರ್ಷದವರೆಗೆ ಹಾಲು ಕುಡಿಸಲೇಬೇಕು ಎಂದು ಮಧುಸೂದನ್ ಹೇಳುತ್ತಾರೆ.</p>.<p>ಆದರೆ, ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ 2 ವರ್ಷದವರೆಗೂ ತಾಯಂದಿರು ತಮ್ಮ ಮಕ್ಕಳಿಗೆ ಹಾಲು ಕುಡಿಸುತ್ತಿಲ್ಲ. ಮೂಢನಂಬಿಕೆಯಿಂದ ಜನಿಸಿದ ಮೊದಲ ಒಂದು ಗಂಟೆಯೊಳಗೆ ಹಾಲು ಕುಡಿಸುತ್ತಿಲ್ಲ. ಸಣ್ಣಪುಟ್ಟ ಅನಾರೋಗ್ಯಕ್ಕೂ ಸೊಪ್ಪಿನ ರಸ ಕುಡಿಸುತ್ತಾರೆ. ಇವುಗಳಿಂದ ಶಿಶುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ ಎಂದು ಹೇಳುತ್ತಾರೆ.</p>.<p>ಸ್ತನ್ಯಪಾನ ಸಪ್ತಾಹ: ಪ್ರತಿ ವರ್ಷ ಆಗಸ್ಟ್ 1ರಿಂದ 7ರವರೆಗೆ ಸ್ತನ್ಯಪಾನ ಸಪ್ತಾಹವನ್ನು 120ಕ್ಕೂ ಹೆಚ್ಚು ರಾಷ್ಟ್ರಗಳಲ್ಲ ನಡೆಸಲಾಗುತ್ತದೆ. 1991ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಯೂನಿಸೆಫ್ ಈ ಸಪ್ತಾಹ ಆಚರಿಸುತ್ತಿವೆ. ತಾಯಿಯ ಎದೆಹಾಲು ಪ್ರಕೃತಿದತ್ತವಾದ ದೇವರ ಕೊಡುಗೆಯಾಗಿದ್ದು ಎದೆಹಾಲಿನಿಂದ ಮಗುವಿನ ಆರೋಗ್ಯ ಮತ್ತು ಬೆಳವಣಿಗೆ ಜೊತೆಗೆ ಭವಿಷ್ಯದ ವ್ಯಕ್ತಿಯಾಗಿ ರೂಪಿಸುವ ಚೈತನ್ಯ ಶಕ್ತಿ ಅಡಗಿದ್ದು ಮಗು ಜನಿಸಿದ ಆರು ತಿಂಗಳ ಕಾಲ ವಿಶೇಷ ಎದೆ ಹಾಲುಣಿಸುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಸಪ್ತಾಹ ಆಚರಿಸಲಾಗುತ್ತಿದೆ.</p>.<p>‘ತಾಯಿಯ ಹಾಲು ನೀಡುವುದರಲ್ಲಿ ಹೂಡಿಕೆ ಮಾಡಿದರೆ ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಂತೆ’ ಎಂಬುದು ಈ ವರ್ಷದ ಘೋಷವಾಕ್ಯ. ಈ ಸಪ್ತಾಹದಲ್ಲಿ ಕೊಡಗು ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸ್ತನ್ಯಪಾನದ ಮಹತ್ವವನ್ನು ಜನರಿಗೆ ಮನವರಿಕೆ ಮಾಡಲು ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಕೊಡಗು ಜಿಲ್ಲೆಯಲ್ಲಿ ಪ್ರತಿ ವರ್ಷ ಸರಾಸರಿ 6,500 ಹೆರಿಗೆಗಳಾದರೆ, ಅದರಲ್ಲಿ ಪ್ರತಿ ವರ್ಷ ಸರಾಸರಿ 50–55 ನವಜಾತ ಶಿಶುಗಳು ಮೃತಪಟ್ಟಿವೆ.</p>.<p>ಶಿಶು ಬದುಕುಲು, ರೋಗಗಳಿಂದ ಪಾರಾಗಲು, ದೈಹಿಕವಾಗಿ, ಮಾನಸಿಕವಾಗಿ ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಲು ಹುಟ್ಟಿನಿಂದ 2 ವರ್ಷದವರೆಗೂ ನಿರಂತರವಾಗಿ ಸ್ತನ್ಯಪಾನ ಮಾಡಿಸಲೇಬೇಕು ಎಂದು ವೈದ್ಯರು ಹೇಳುತ್ತಾರೆ.</p>.<p>ಅದರಲ್ಲೂ ಮುಖ್ಯವಾಗಿ, ನವಜಾತ ಶಿಶುಗಳಿಗೆ ವಿವಿಧ ಬಗೆಯ ಸೊಪ್ಪಿನ ರಸ ಕುಡಿಸುವ ಪರಿಪಾಠ ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಇದೊಂದು ಸಾಮಾಜಿಕ ಪಿಡುಗು ಎಂದೇ ಮಕ್ಕಳ ಆರೋಗ್ಯ ಅಧಿಕಾರಿ ಡಾ.ಮಧುಸೂದನ್ ಹೇಳುತ್ತಾರೆ.</p>.<p>ಮಗು ಹೆಚ್ಚು ಅಳುತ್ತಿದ್ದರೆ, ಹಾಲು ಕುಡಿಯದೇ ಹೋದರೆ, ಅನಾರೋಗ್ಯ ಉಂಟಾದರೆ ಎದೆಹಾಲಿನ ಬದಲಿಗೆ ವಿವಿಧ ಬಗೆಯ ಸೊಪ್ಪಿನ ರಸಗಳನ್ನು ಕುಡಿಸುವುದು ಜಿಲ್ಲೆಯಲ್ಲಿ ಅಧಿಕ. ಇದರಿಂದ ಮಗುವಿಗೆ ಸೋಂಕು ಉಂಟಾಗಿ, ಕಾಯಿಲೆಗಳಿಗೆ ತುತ್ತಾಗುತ್ತದೆ. ಹಾಗಾಗಿ, ಈ ಪರಿಪಾಠವನ್ನು ಬಿಡಬೇಕು ಎಂದು ಅವರು ಹೇಳುತ್ತಾರೆ.</p>.<p>ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ 6 ತಿಂಗಳವರೆಗೆ ಎದೆಹಾಲು ಕುಡಿಸುವವರ ಪ್ರಮಾಣ ಶೇ 61ರಷ್ಟು ಮಾತ್ರ. ಬಹಳಷ್ಟು ತಾಯಂದಿರು ಎದೆಹಾಲಿನ ಬದಲಿಗೆ ಬೇರೆ, ಬೇರೆ ಬಗೆಯ ಹಾಲು ಕುಡಿಸುತ್ತಾರೆ. ಇದರಿಂದ ಮಗು ಕಾಯಿಲೆಗಳಿಗೆ ತುತ್ತಾಗಿ ಸಾವು ಸಂಭವಿಸಬಹುದು.</p>.<p>ಜನಿಸಿದ ಒಂದು ಗಂಟೆಯ ಒಳಗೆ ಎದೆಹಾಲು ಕುಡಿಸುವುದರಿಂದ ನ್ಯೂಮೊನಿಯಾ, ಅತಿಸಾರ ಹಾಗೂ ಅಪೌಷ್ಟಿಕತೆಯಿಂದ ಮಗುವನ್ನು ರಕ್ಷಿಸಬಹುದು. 6 ತಿಂಗಳವರೆಗೂ ಪ್ರತಿ 2 ಗಂಟೆಗಳಿಗೆ ಒಮ್ಮೆಯಾದರೂ ಎದೆ ಹಾಲು ಕುಡಿಸಬೇಕು. ನಂತರ 2 ವರ್ಷದವರೆಗೆ ಹಾಲು ಕುಡಿಸಲೇಬೇಕು ಎಂದು ಮಧುಸೂದನ್ ಹೇಳುತ್ತಾರೆ.</p>.<p>ಆದರೆ, ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ 2 ವರ್ಷದವರೆಗೂ ತಾಯಂದಿರು ತಮ್ಮ ಮಕ್ಕಳಿಗೆ ಹಾಲು ಕುಡಿಸುತ್ತಿಲ್ಲ. ಮೂಢನಂಬಿಕೆಯಿಂದ ಜನಿಸಿದ ಮೊದಲ ಒಂದು ಗಂಟೆಯೊಳಗೆ ಹಾಲು ಕುಡಿಸುತ್ತಿಲ್ಲ. ಸಣ್ಣಪುಟ್ಟ ಅನಾರೋಗ್ಯಕ್ಕೂ ಸೊಪ್ಪಿನ ರಸ ಕುಡಿಸುತ್ತಾರೆ. ಇವುಗಳಿಂದ ಶಿಶುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ ಎಂದು ಹೇಳುತ್ತಾರೆ.</p>.<p>ಸ್ತನ್ಯಪಾನ ಸಪ್ತಾಹ: ಪ್ರತಿ ವರ್ಷ ಆಗಸ್ಟ್ 1ರಿಂದ 7ರವರೆಗೆ ಸ್ತನ್ಯಪಾನ ಸಪ್ತಾಹವನ್ನು 120ಕ್ಕೂ ಹೆಚ್ಚು ರಾಷ್ಟ್ರಗಳಲ್ಲ ನಡೆಸಲಾಗುತ್ತದೆ. 1991ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಯೂನಿಸೆಫ್ ಈ ಸಪ್ತಾಹ ಆಚರಿಸುತ್ತಿವೆ. ತಾಯಿಯ ಎದೆಹಾಲು ಪ್ರಕೃತಿದತ್ತವಾದ ದೇವರ ಕೊಡುಗೆಯಾಗಿದ್ದು ಎದೆಹಾಲಿನಿಂದ ಮಗುವಿನ ಆರೋಗ್ಯ ಮತ್ತು ಬೆಳವಣಿಗೆ ಜೊತೆಗೆ ಭವಿಷ್ಯದ ವ್ಯಕ್ತಿಯಾಗಿ ರೂಪಿಸುವ ಚೈತನ್ಯ ಶಕ್ತಿ ಅಡಗಿದ್ದು ಮಗು ಜನಿಸಿದ ಆರು ತಿಂಗಳ ಕಾಲ ವಿಶೇಷ ಎದೆ ಹಾಲುಣಿಸುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಸಪ್ತಾಹ ಆಚರಿಸಲಾಗುತ್ತಿದೆ.</p>.<p>‘ತಾಯಿಯ ಹಾಲು ನೀಡುವುದರಲ್ಲಿ ಹೂಡಿಕೆ ಮಾಡಿದರೆ ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಂತೆ’ ಎಂಬುದು ಈ ವರ್ಷದ ಘೋಷವಾಕ್ಯ. ಈ ಸಪ್ತಾಹದಲ್ಲಿ ಕೊಡಗು ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸ್ತನ್ಯಪಾನದ ಮಹತ್ವವನ್ನು ಜನರಿಗೆ ಮನವರಿಕೆ ಮಾಡಲು ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>