ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಕೊಡಗು: ತೀವ್ರಗೊಂಡ ಪ್ರತ್ಯೇಕ ಕ್ಷೇತ್ರದ ಕೂಗು

ಮೊದಲು ಮಂಗಳೂರು, ಈಗ ಮೈಸೂರು ಕ್ಷೇತ್ರದಲ್ಲಿರುವ ಕಾಫಿನಾಡು
Published : 15 ಫೆಬ್ರುವರಿ 2024, 5:48 IST
Last Updated : 15 ಫೆಬ್ರುವರಿ 2024, 5:48 IST
ಫಾಲೋ ಮಾಡಿ
Comments
ಪ್ರತಾಪಸಿಂಹ
ಪ್ರತಾಪಸಿಂಹ
1952ರಲ್ಲಿ ಪ್ರತ್ಯೇಕ ಲೋಕಸಭಾ ಕ್ಷೇತ್ರ ಹೊಂದಿದ್ದ ಜಿಲ್ಲೆ 1957ರಲ್ಲಿ ಲೋಕಸಭಾ ಸ್ಥಾನ ರದ್ದು 1969ರ ನಂತರ ಲೋಕಸಭೆಗೆ ಕೊಡವರ ಪ್ರವೇಶ ಇಲ್ಲ
ಅದ್ಯಶ್ಯ ಅಮೂರ್ತ ಕ್ಷೇತ್ರಕ್ಕಾಗಿ ಒತ್ತಾಯ!
‘ಸಿಕ್ಕಿಂನ ವಿಧಾನಸಭೆಯಲ್ಲಿ ‘ಸಂಘ’ ಎಂಬ ಅಗೋಚರ ಮತ ಕ್ಷೇತ್ರವಿದೆ. ಬೌದ್ಧ ಭಿಕ್ಷುಗಳಷ್ಟೇ ಸ್ಪರ್ಧಿಸಿ ಅವರಷ್ಟೇ ಮತದಾನ ಮಾಡುವಂತಹ ಈ ಕ್ಷೇತ್ರಕ್ಕೆ ಯಾವುದೇ ಭೌಗೋಳಿಕ ಗೆರೆಗಳಿಲ್ಲ. ಇಡೀ ಸಿಕ್ಕಿಂನಲ್ಲಿ ನೆಲೆಸಿರುವ ಬೌದ್ಧ ಭಿಕ್ಷುಗಳು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತಾರೆ. ಇಂತಹ ಕ್ಷೇತ್ರವನ್ನು ಕೊಡವರಿಗೆ ನೀಡಬೇಕು’ ಎಂಬ ಹೋರಾಟವನ್ನು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ)ನಡೆಸುತ್ತಿದೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ‘ಪ್ರತ್ಯೇಕ ಲೋಕಸಭಾ ಸ್ಥಾನಕ್ಕಿಂತ ಕೊಡವರಿಗೆಂದೇ ಮೀಸಲಾದ ಅಗೋಚರ ಕ್ಷೇತ್ರವನ್ನು ಸಿಕ್ಕಿಂನ ‘ಸಂಘ’ ಕ್ಷೇತ್ರದ ಮಾದರಿಯಲ್ಲಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಸೃಜಿಸಬೇಕು. ಅದಕ್ಕಾಗಿ ವರ್ಷದಲ್ಲಿ ಕನಿಷ್ಠ 25 ದಿನ ಸತ್ಯಾಗ್ರಹ ಮಾಡಿ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ ಚುನಾವಣಾ ಆಯೋಗಗಳಿಗೆ ಸಲ್ಲಿಸುತ್ತಿದ್ದೇವೆ’ ಎಂದು ಹೇಳಿದರು.
ರದ್ದಾದ ಪ್ರತ್ಯೇಕ ಕ್ಷೇತ್ರ
ಪ್ರತ್ಯೇಕ ರಾಜ್ಯವಾಗಿದ್ದ ಕೊಡಗು ಮೊದಲ ಲೋಕಸಭಾ ಚುನಾವಣೆಯ ವೇಳೆ ತನ್ನದೇ ಲೋಕಸಭಾ ಕ್ಷೇತ್ರವನ್ನು ಹೊಂದಿತ್ತು. 1952ರ ಚುನಾವಣೆಯಲ್ಲಿ 94593 ಮತದಾರರಿದ್ದರು. ಕಾಂಗ್ರೆಸ್‌ನ ಎನ್.ಸೋಮಣ್ಣ ಆಯ್ಕೆಯಾಗಿದ್ದರು. ಕೊಡಗನ್ನು ಮೈಸೂರು ರಾಜ್ಯದೊಂದಿಗೆ ವಿಲೀನಗೊಳಿಸಿದಾಗ 1957ರಲ್ಲಿ ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನು ರದ್ದುಪಡಿಸಿ ಮಂಗಳೂರು ಕ್ಷೇತ್ರದೊಂದಿಗೆ ವಿಲೀನಗೊಳಿಸಲಾಯಿತು. ನಂತರ ಮಂಗಳೂರು ಕ್ಷೇತ್ರದಿಂದ ಬೇರ್ಪಡಿಸಿ ಕೊಡಗು ಜಿಲ್ಲೆಯನ್ನು ಮೈಸೂರಿನೊಂದಿಗೆ ಸೇರಿಸಲಾಯಿತು. ಮಂಗಳೂರು ಕ್ಷೇತ್ರದೊಂದಿಗೆ ಸೇರಿದ್ದಾಗ 1969ರ ಚುನಾವಣೆಯಲ್ಲಿ ಕೊಡಗಿನ ಸಿ.ಎಂ.ಪೂಣಚ್ಚ ಗೆದ್ದು ಕೇಂದ್ರದಲ್ಲಿ ಸಚಿವರಾಗಿದ್ದರು. 1971ರಲ್ಲಿ ಸೋತರು. ನಂತರ ಕೊಡಗಿನ ಯಾರೊಬ್ಬರಿಗೂ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳು ಟಿಕೆಟ್ ನೀಡಿಲ್ಲ. ಇದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT