ಸಮೀಪದ ಐಮಂಗಲ ಗ್ರಾಮದ ಕೊಮ್ಮೆತೋಡುವಿನಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಹ್ಯಾರಿಸ್ ಎಂಬಾತನೆ ಬಂಧಿತ ಆರೋಪಿ. ಮೇ 20 ರಂದು ಆರೋಪಿಯು ಹೆಂಗಸಿನಂತೆ ವೇಷ ಧರಿಸಿಕೊಂಡು ವಿರಾಜಪೇಟೆ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ವಾಸವಾಗಿರುವ 97 ವರ್ಷದ ಸೋದರತ್ತೆ ಖತೀಜ ಎಂಬುವವರ ಕುತ್ತಿಗೆಯಿಂದ ಸುಮಾರು 16 ಗ್ರಾಂ ತೂಕದ ಚಿನ್ನದ ಆಭರಣವನ್ನು ಕಸಿದುಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.