‘1956ರಲ್ಲಿ ಪ್ರತ್ಯೇಕ ರಾಜ್ಯದ ಸ್ಥಾನಮಾನ ಕಳೆದುಕೊಳ್ಳಲು ಕಾರಣರಾದವರ ಮೇಲೂ ಕೊಡವರು ಮೊಟ್ಟೆ ಎಸೆದಿಲ್ಲ. ಗೋಪ್ಯ ಕಾರ್ಯಸೂಚಿ, ಸಂಚು, ಕಿಡಿಗೇಡಿತನ ಕೊಡವರಲ್ಲಿ ಇಲ್ಲ. 1956ರಲ್ಲಿ ಕಳೆದುಕೊಂಡ ಪ್ರತ್ಯೇಕ ರಾಜ್ಯದ ಸ್ಥಾನಮಾನಕ್ಕೆ ಬದಲಿಯಾಗಿ ಭೂ–ರಾಜಕೀಯ ಸ್ವಾಯತ್ತತೆ ಬೇಕಿದೆ. ಅರಮನೆ ಹತ್ಯಾಕಾಂಡ ಮತ್ತು ದೇವಟ್ ಪರಂಬು ದುರಂತದಲ್ಲಿ ಹತ್ಯೆಯಾದ ಅಸಂಖ್ಯಾತ ಕೊಡವರಿಗೆ ಅಂತರರಾಷ್ಟ್ರೀಯ ಸ್ಮಾರಕ ಬೇಕಿದೆ. ಜತೆಗೆ, ಎಸ್.ಟಿ.ಟ್ಯಾಗ್ ಬೇಕಾಗಿದೆ. ಇದರಿಂದ ದಿಕ್ಕು ತಪ್ಪಿಸಲು ಇಂತಹ ಕ್ಷುಲ್ಲಕ ಕಾರ್ಯ ಮಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.