ಈಗಾಗಲೇ ಹೊರೂರು, ಭೂತನಕಾಡು ಸೇರಿದಂತೆ ಕಾಲುಬಾಯಿ ಜ್ವರ ಕಾಣಿಸಿಕೊಂಡ ಜಾನುವಾರುಗಳಿಗೆ ಪಶು ಚಿಕಿತ್ಸಾಲಯದ ವೈದ್ಯರು ತೆರಳಿ ಔಷಧಿ ಮತ್ತು ಚುಚ್ಚುಮದ್ದುಗಳನ್ನು ನೀಡುತ್ತಿದ್ದಾರೆ. ಆದರೂ ರೋಗ ಕಾಣಿಸಿಕೊಂಡ ಜಾನುವಾರುಗಳ ಕೆಚ್ಚಲು, ಪಾದ, ಬಾಯಿ, ಕಾಲುಗಳಲ್ಲಿ ನೀರಿನ ಬೊಬ್ಬೆಗಳು ಕಾಣಿಸಿಕೊಂಡಿದ್ದು, ಇದರಿಂದ ಹಾಲು ಪಡೆಯಲು ಸಹ ಕಷ್ಟವಾಗುತ್ತಿದೆ. ಅಲ್ಲದೆ, ಹೆಚ್ಚಿನ ಹಸುಗಳಲ್ಲಿ ಬಾಯಿಯಿಂದ ಬಿಳಿ ಜೊಲ್ಲು ಸೋರುತ್ತಿದೆ. ಕೆಲವು ದನಕರುಗಳು ನಿತ್ರಾಣಗೊಂಡು ಮೇಲೆಳುವುದಕ್ಕೂ ಸಾಧ್ಯವಾಗದ ಸ್ಥಿತಿ
ಉಂಟಾಗಿದೆ.