ಅರಣ್ಯ ರಕ್ಷಕ ಅಣ್ಣಪ್ಪ ರೈ ಎಂಬುವವರು 2022ರ ಮೇ 11ರಂದು ಗಾಳಿಬೀಡು ಕಾಲೂರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪರಾಧಿ ಗಾಳಿಬೀಡು ಗ್ರಾಮದ ತಿಮ್ಮಯ್ಯ ತನ್ನ ಮನೆಯ ಪಕ್ಕದ ಜಾಗವನ್ನು ಕಸ ವಿಲೇವಾರಿಗೆ ಗುರುತಿಸಿದ ಸಂಬಂಧ ಜಗಳ ತೆಗೆದು ಕತ್ತಿಯಿಂದ ಕುತ್ತಿಗೆ ಕಡಿಯಲು ಯತ್ನಿಸಿದಾಗ ಅಣ್ಣಪ್ಪ ರೈ ತನ್ನ ಎಡಗೈ ಒಡ್ಡಿದರು. ಆಗ ಅವರ ಎಡಗೈ ಹಸ್ತ ಸಮೇತ ಹೆಬ್ಬೆರಳು ಬಿಟ್ಟು ಉಳಿದ ಬೆರಳುಗಳು ಕತ್ತರಿಸಿ ನೆಲಕ್ಕೆ ಬಿದ್ದವು. ನಂತರ, ಮತ್ತೆ ಕುತ್ತಿಗೆ ಕಡಿಯಲು ಯತ್ನಿಸಿದಾಗ ಬಲಗೈಗೂ ತೀವ್ರ ಸ್ವರೂಪದ ಗಾಯಗಳನ್ನು ಉಂಟು ಮಾಡಿದ್ದ. ಪ್ರಕರಣ ದಾಖಲಿಸಿಕೊಂಡು ಪೊಲೀಸ್ ಸಬ್ಇನ್ಸ್ಪೆಕ್ಟರ್ ವಾಣಿಶ್ರೀ ಅವರು ಅಪರಾಧಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.