ಈಗಾಗಲೇ ಕರ್ಣಂಗೇರಿ ಮತ್ತು ಮದೆನಾಡು ಬಳಿಯ ಗೋಳಿಕಟ್ಟೆಯಲ್ಲಿ ನಿರ್ಮಿಸಿರುವ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಉಳಿದಂತೆ ಗಾಳಿಬೀಡು, ಕೆ.ನಿಡುಗಣೆ, ಜಂಬೂರು ಮತ್ತು ಬಿಳಿಗೇರಿಯಲ್ಲಿ ಮನೆಗಳ ಹಂಚಿಕೆ ಮಾಡಬೇಕಿದೆ. ಯಾವ ಸ್ಥಳದಲ್ಲಿ ಮನೆ ಬೇಕು ಎಂಬ ಅಭಿಪ್ರಾಯವನ್ನು ಸಂತ್ರಸ್ತರಿಂದಲೇ ಪಡೆಯಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಟಿ.ಜವರೇಗೌಡ ತಿಳಿಸಿದರು.