<p><strong>ಸೋಮವಾರಪೇಟೆ:</strong> ಮರಗಳ್ಳತನದ 4 ಪ್ರಕರಣಗಳನ್ನು ಪತ್ತೆ ಹಚ್ಚಿರುವ ಸೋಮವಾರಪೇಟೆ ಅರಣ್ಯ ವಲಯದ ಅಧಿಕಾರಿಗಳು ಒಟ್ಟು 8 ಮಂದಿ ಆರೋಪಿಗಳನ್ನು, ಒಂದು ಆಟೊ, ಒಂದು ಗೂಡ್ಸ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಒಬ್ಬ ಆರೋಪಿ ಪರಾರಿಯಾಗಿದ್ದಾನೆ.</p>.<p>ಮಾದಾಪುರ ಶಾಖೆಯ ಯಡವಾರೆ ಗ್ರಾಮದ ತಿಮ್ಮಯ್ಯ ಎಂಬುವರಿಗೆ ಸೇರಿದ ಜಾಗದಲ್ಲಿದ್ದ 3 ಹಲಸಿನ ಮರಗಳನ್ನು ಕಡಿದು 17 ನಾಟಾಗಳನ್ನಾಗಿ ಪರಿವರ್ತಿಸಿದ್ದನ್ನು ವಶಪಡಿಸಿಕೊಂಡಿದ್ದಾರೆ. ಅರೋಪಿಗಳಾದ ಯಡವಾರೆ ಸಿ.ಎಂ.ತಿಮ್ಮಯ್ಯ, ಯಡವಾರೆ ಅಶೋಕ್ ಪೂಜಾರಿ ಅವರನ್ನು ಬಂಧಿಸಲಾಗಿದೆ.</p>.<p>ಶಾಂತಳ್ಳಿ ಶಾಖೆಯ ಕಲ್ಕಂದೂರು ಗ್ರಾಮದ ಎಂ.ಎನ್.ಚಂದ್ರಶೇಖರ್ ಅವರಿಗೆ ಸೇರಿದ ಜಾಗದಲ್ಲಿ ಒಂದು ನಂದಿಮರ ಕಡಿದು ನಾಟಾವನ್ನಾಗಿ ಪರಿವರ್ತಿಸಿ ಸಂಗ್ರಹಿಸಿದ್ದ ಪ್ರಕರಣದಲ್ಲಿ ಮರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಮಾಟ್ನಳ್ಳಿ ಗ್ರಾಮದ ಚಂದ್ರಶೇಖರ್ ಎಂಬುವರನ್ನು ಬಂಧಿಸಲಾಗಿದೆ.</p>.<p>ಕೊವರ್ ಕೊಲ್ಲಿ ಜಂಕ್ಷನ್ನಲ್ಲಿ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ 30 ಬಿಲ್ವಾರ ಮರದ ತುಂಡುಗಳನ್ನು ಸಾಗಿಸುತ್ತಿದ್ದಾಗ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಅರೋಪಿಗಳಾದ ಕರ್ಕಳ್ಳಿ ಗ್ರಾಮದ ಕೆ.ಕೆ.ಇಬ್ರಾಹಿಂ, ಹಾನಗಲ್ಲು ಗ್ರಾಮದ ಎಚ್.ಜಿ.ಸುಜಿತ್ ಎಂಬುವರನ್ನು ಬಂಧಿಸಲಾಗಿದೆ.</p>.<p>ಕರ್ಕಳ್ಳಿ ಬಾಣೆಯ ಬಿ.ರವಿ ಅವರ ಪೀಠೋಪಕರಣ ಘಟಕದ ಹತ್ತಿರ ಪ್ಯಾಸೆಂಜರ್ ವಾಹನದಲ್ಲಿ 3 ಬೀಟೆ ಮರದ ನಾಟಗಳನ್ನು ಸಾಗಾಣೆ ಮಾಡುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಲಾಗಿದೆ. ಅರೋಪಿಗಳಾದ ಕರ್ಕಳ್ಳಿ ಗ್ರಾಮದ ಪಿ.ಮಣಿಕಂಠ, ಜನತಾ ಕಾಲೊನಿಯ ಎಲ್.ಅಣ್ಣಪ್ಪ, ಕರ್ಕಳ್ಳಿ ಬಾಣೆಯ ಬಿ.ರವಿ ಎಂಬುವವರನ್ನು ಬಂಧಿಸಲಾಗಿದೆ. ಅರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮತ್ತೊಬ್ಬ ಆರೋಪಿ ಹಾನಗಲ್ಲು ಬಾಣೆಯ ಎಚ್.ಈ.ಅರುಣ ತಲೆ ಮರೆಸಿಕೊಂಡಿದ್ದಾನೆ.</p>.<p>ಡಿ.ಸಿ.ಎಫ್. ವಿ.ಭಾಸ್ಕರ್, ಎಸಿಎಫ್ ಗೋಪಾಲ ಅವರ ಮಾರ್ಗದರ್ಶನದಲ್ಲಿ ಆರ್.ಎಫ್.ಓ ಶೈಲೆಂದ್ರ ಕುಮಾರ್, ಡಿ.ಆರ್.ಎಫ್.ಒ ನಾರಾಯಣ ಮೌಲ್ಯ, ಸತೀಶ್ ಕುಮಾರ್, ಸಿಬ್ಬಂದಿ ಚಂದ್ರಶೇಖರ್, ವಿಶ್ವ, ನಾರಾಯಣ, ವಿಜಯ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋಮವಾರಪೇಟೆ:</strong> ಮರಗಳ್ಳತನದ 4 ಪ್ರಕರಣಗಳನ್ನು ಪತ್ತೆ ಹಚ್ಚಿರುವ ಸೋಮವಾರಪೇಟೆ ಅರಣ್ಯ ವಲಯದ ಅಧಿಕಾರಿಗಳು ಒಟ್ಟು 8 ಮಂದಿ ಆರೋಪಿಗಳನ್ನು, ಒಂದು ಆಟೊ, ಒಂದು ಗೂಡ್ಸ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಒಬ್ಬ ಆರೋಪಿ ಪರಾರಿಯಾಗಿದ್ದಾನೆ.</p>.<p>ಮಾದಾಪುರ ಶಾಖೆಯ ಯಡವಾರೆ ಗ್ರಾಮದ ತಿಮ್ಮಯ್ಯ ಎಂಬುವರಿಗೆ ಸೇರಿದ ಜಾಗದಲ್ಲಿದ್ದ 3 ಹಲಸಿನ ಮರಗಳನ್ನು ಕಡಿದು 17 ನಾಟಾಗಳನ್ನಾಗಿ ಪರಿವರ್ತಿಸಿದ್ದನ್ನು ವಶಪಡಿಸಿಕೊಂಡಿದ್ದಾರೆ. ಅರೋಪಿಗಳಾದ ಯಡವಾರೆ ಸಿ.ಎಂ.ತಿಮ್ಮಯ್ಯ, ಯಡವಾರೆ ಅಶೋಕ್ ಪೂಜಾರಿ ಅವರನ್ನು ಬಂಧಿಸಲಾಗಿದೆ.</p>.<p>ಶಾಂತಳ್ಳಿ ಶಾಖೆಯ ಕಲ್ಕಂದೂರು ಗ್ರಾಮದ ಎಂ.ಎನ್.ಚಂದ್ರಶೇಖರ್ ಅವರಿಗೆ ಸೇರಿದ ಜಾಗದಲ್ಲಿ ಒಂದು ನಂದಿಮರ ಕಡಿದು ನಾಟಾವನ್ನಾಗಿ ಪರಿವರ್ತಿಸಿ ಸಂಗ್ರಹಿಸಿದ್ದ ಪ್ರಕರಣದಲ್ಲಿ ಮರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಮಾಟ್ನಳ್ಳಿ ಗ್ರಾಮದ ಚಂದ್ರಶೇಖರ್ ಎಂಬುವರನ್ನು ಬಂಧಿಸಲಾಗಿದೆ.</p>.<p>ಕೊವರ್ ಕೊಲ್ಲಿ ಜಂಕ್ಷನ್ನಲ್ಲಿ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ 30 ಬಿಲ್ವಾರ ಮರದ ತುಂಡುಗಳನ್ನು ಸಾಗಿಸುತ್ತಿದ್ದಾಗ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಅರೋಪಿಗಳಾದ ಕರ್ಕಳ್ಳಿ ಗ್ರಾಮದ ಕೆ.ಕೆ.ಇಬ್ರಾಹಿಂ, ಹಾನಗಲ್ಲು ಗ್ರಾಮದ ಎಚ್.ಜಿ.ಸುಜಿತ್ ಎಂಬುವರನ್ನು ಬಂಧಿಸಲಾಗಿದೆ.</p>.<p>ಕರ್ಕಳ್ಳಿ ಬಾಣೆಯ ಬಿ.ರವಿ ಅವರ ಪೀಠೋಪಕರಣ ಘಟಕದ ಹತ್ತಿರ ಪ್ಯಾಸೆಂಜರ್ ವಾಹನದಲ್ಲಿ 3 ಬೀಟೆ ಮರದ ನಾಟಗಳನ್ನು ಸಾಗಾಣೆ ಮಾಡುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಲಾಗಿದೆ. ಅರೋಪಿಗಳಾದ ಕರ್ಕಳ್ಳಿ ಗ್ರಾಮದ ಪಿ.ಮಣಿಕಂಠ, ಜನತಾ ಕಾಲೊನಿಯ ಎಲ್.ಅಣ್ಣಪ್ಪ, ಕರ್ಕಳ್ಳಿ ಬಾಣೆಯ ಬಿ.ರವಿ ಎಂಬುವವರನ್ನು ಬಂಧಿಸಲಾಗಿದೆ. ಅರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮತ್ತೊಬ್ಬ ಆರೋಪಿ ಹಾನಗಲ್ಲು ಬಾಣೆಯ ಎಚ್.ಈ.ಅರುಣ ತಲೆ ಮರೆಸಿಕೊಂಡಿದ್ದಾನೆ.</p>.<p>ಡಿ.ಸಿ.ಎಫ್. ವಿ.ಭಾಸ್ಕರ್, ಎಸಿಎಫ್ ಗೋಪಾಲ ಅವರ ಮಾರ್ಗದರ್ಶನದಲ್ಲಿ ಆರ್.ಎಫ್.ಓ ಶೈಲೆಂದ್ರ ಕುಮಾರ್, ಡಿ.ಆರ್.ಎಫ್.ಒ ನಾರಾಯಣ ಮೌಲ್ಯ, ಸತೀಶ್ ಕುಮಾರ್, ಸಿಬ್ಬಂದಿ ಚಂದ್ರಶೇಖರ್, ವಿಶ್ವ, ನಾರಾಯಣ, ವಿಜಯ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>