ಶನಿವಾರಸಂತೆ: ಕೊಡಗು ಜಿಲ್ಲೆಯ ಹಿರಿಯ ಪತ್ರಕರ್ತ ಎಸ್.ಜಿ.ನರೇಶ್ಚಂದ್ರ (72) ಮಂಗಳವಾರ ನಿಧನರಾದರು.
ಎರಡು ತಿಂಗಳಿನಿಂದ ಅನಾರೋಗ್ಯ ಕ್ಕೀಡಾಗಿದ್ದ ಇವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಪತ್ನಿ, ಒಬ್ಬ ಸೋದರ ಹಾಗೂ ಸೋದರಿ ಸಾಹಿತಿ ಶ.ಗ.ನಯನತಾರಾ ಇದ್ದಾರೆ. ಅಂತ್ಯಕ್ರಿಯೆ ಬುಧವಾರ ಇಲ್ಲಿನ ಹಿಂದೂ ರುದ್ರಭೂಮಿಯಲ್ಲಿ ನಡೆಯಿತು.
ಇವರು ಕಳೆದ 32 ವರ್ಷಗಳಿಂದ ಪತ್ರಕರ್ತರಾಗಿ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು.