ಮರದಲ್ಲಿ ಹೆಚ್ಚಿನ ಜೇನುಗೂಡುಗಳು ಇದ್ದ ಕಾರಣ ಜೇನ್ನೋಣಗಳ ಕಾಟವೂ ಅತಿಯಾಗಿತ್ತು. ಇದರಿಂದ ಎರಡೂ ಬದಿಯಲ್ಲಿದ್ದ ವಾಹನ ಸವಾರರು ಪರದಾಡಿದರು. ಸ್ಥಳಕ್ಕೆ ಬಂದ ರಕ್ಷಣಾ ತಂಡ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತಂಡ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಮರವನ್ನು ತೆರವುಗೊಳಿಸಿದರು. ಇದರಲ್ಲಿ ಕೇರಳ ರಾಜ್ಯದ ರಕ್ಷಣಾ ತಂಡವೂ ಭಾಗಿಯಾಗಿತ್ತು. ಒಟ್ಟು 20ಕ್ಕೂ ಅಧಿಕ ಮಂದಿ ಕಾರ್ಯಾಚರಣೆಯಲ್ಲಿದ್ದರು.