<p><strong>ಮಡಿಕೇರಿ</strong>: ದಸರಾ ದಶಮಂಟಪಗಳಿಗೆ ಹಾಗೂ ಕರಗ ಸಮಿತಿಗಳಿಗೆ ಸರ್ಕಾರ ನೀಡುವ ಅನುದಾನವನ್ನು ಹೆಚ್ಚಿಸಬೇಕು ಎಂಬ ಒತ್ತಾಯ ಇಲ್ಲಿ ಶನಿವಾರ ನಡೆದ ದಸರಾ ದಶಮಂಟಪ ಸಮಿತಿ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.</p>.<p>ಇಲ್ಲಿನ ಕೋಟೆಮಾರಿಯಮ್ಮ ದೇವಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 2025-26ನೇ ಸಾಲಿಗೆ ದಸರಾ ದಶಮಂಟಪ ಸಮಿತಿಯ ಅಧಿಕಾರವನ್ನು ಸ್ವೀಕರಿಸಿದ ಕೋಟೆ ಮಹಾಗಣಪತಿ ದೇವಾಲಯ ಸಮಿತಿಯ ಹರೀಶ್ ಅಣ್ವೇಕರ್ ಈ ಮನವಿ ಮಾಡಿದರು.</p>.<p>‘ಒಂದು ಮಂಟಪ ನಿರ್ಮಾಣಕ್ಕೆ ಕನಿಷ್ಠ ಎಂದರೂ ₹ 30 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗುತ್ತದೆ. ಸರ್ಕಾರದಿಂದ ಬರುವ ಅನುದಾನದಲ್ಲಿ ನಮಗೆ ದಸರಾ ನಡೆಸುವುದು ತುಂಬಾ ಕಷ್ಟ. ಹೀಗಾಗಿ, ಸರ್ಕಾರ ಮಂಟಪಗಳಿಗೆ ಕನಿಷ್ಠ ಎಂದರೂ ₹ 5 ಲಕ್ಷ ಹಾಗೂ ಕರಗ ಸಮಿತಿಗಳಿಗೆ ₹ 3 ಲಕ್ಷ ಅನುದಾನ ನೀಡಬೇಕು. ಈ ಅನುದಾನ ತರುವ ಪಯತ್ನದಲ್ಲಿ ಇತರೆ ಎಲ್ಲಾ ಸಮಿತಿಗಳು ಸಹಕಾರ ನೀಡಬೇಕು’ ಎಂದು ಕೋರಿದರು.</p>.<p>‘ಹಿಂದೆ ಇದ್ದ ಹಲವು ಅಧ್ಯಕ್ಷರು ಹಾಗೂ ಸಮಿತಿಗಳು ದಸರಾವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ. ಈ ಬಾರಿ ನಮ್ಮ ಮೇಲೆ ನಂಬಿಕೆ ಇಟ್ಟು ದೊಡ್ಡ ಸ್ಥಾನವನ್ನು ನೀಡಿದ್ದಾರೆ. ಅದನ್ನು ಜವಾಬ್ದಾರಿಯುತವಾಗಿ ಮಾಡುವುದು ನಮ್ಮ ಕರ್ತವ್ಯ’ ಎಂದರು.</p>.<p>ಕೋಟೆಮಾರಿಯಮ್ಮ ದೇವಾಲಯದ ಯುವಕ ಮಿತ್ರ ಮಂಡಳಿ ನೂತನ ಅಧ್ಯಕ್ಷ ಬಿ.ಕೆ.ಜಗದೀಶ್ ಅವರೂ ಈ ಬೇಡಿಕೆಗೆ ದನಿಗೂಡಿಸಿದರು.</p>.<p>‘ಈ ಬಾರಿ ಮಡಿಕೇರಿ ದಸರೆಗೆ ₹ 2 ಕೋಟಿಗೂ ಹೆಚ್ಚು ಅನುದಾನ ತರುವ ಪ್ರಯತ್ನ ಮಾಡಲೇಬೇಕು. ಅದರಲ್ಲಿ ದಶಮಂಟಪ ಸಮಿತಿಗಳಿಗೆ ₹ 5 ಲಕ್ಷ ಹಾಗೂ ಕರಗ ಸಮಿತಿಗಳಿಗೆ ₹ 3 ಲಕ್ಷ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.</p>.<p>ಮೈಸೂರು ದಸರಾ ಹೊರತುಪಡಿಸಿದರೆ ಕೊಡಗಿನ ದಸರೆಯೇ ದೇಶದಲ್ಲಿ ಪ್ರಾಮುಖ್ಯತೆ ಪಡೆದಿದೆ. ಮಡಿಕೇರಿ ದಸರೆಗೆ ದೇಶ, ವಿದೇಶ, ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಜನರು ಬಂದು ಐತಿಹಾಸಿಕ ದಸರೆಯನ್ನು ವೀಕ್ಷಿಸುತ್ತಾರೆ. ಇಂತಹ ಮಹತ್ವದ ದಸರೆಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಪ್ರತಿಪಾದಿಸಿದರು.</p>.<p>ಕೋಟೆಮಾರಿಯಮ್ಮ ದಶಮಂಟಪ ಸಮಿತಿ ಮಾಜಿ ಅಧ್ಯಕ್ಷ ಜಿ.ಸಿ.ಜಗದೀಶ್ ಮಾತನಾಡಿ, ‘ಈ ಬಾರಿ ಕೋಟೆ ಮಾರಿಯಮ್ಮ ದೇವಾಲಯದ ಮಂಟಪ ಸಮಿತಿಯು 50 ವರ್ಷದ ಸಂಭ್ರಮದಲ್ಲಿ ಇದ್ದು, ಈ ಬಾರಿಯೂ ಬಹಳ ವಿಜೃಂಭಣೆಯಿಂದ ದಸರಾ ನಡೆಸಲು ತಿರ್ಮಾನಿಸಿದ್ದೇವೆ’ ಎಂದರು.</p>.<p>‘ನಮ್ಮ ಅಧಿಕಾರದ ಸಮಯದಲ್ಲಿ ಎದುರಾಗಿದ್ದ ಸಾಕಷ್ಟು ಗೊಂದಲಗಳು, ಸವಾಲುಗಳನ್ನು ಬಗೆಹರಿಸಿ ದಸರಾ ನಡೆಸಿದ್ದೇವೆ. ಮಡಿಕೇರಿ ದಸರೆ ಕಳೆಗುಂದದಂತೆ ನೋಡಿಕೊಂಡು, ಗತಕಾಲದ ವೈಭವ ಮತ್ತೆ ಮರುಕಳಿಸುವಂತೆ ಮಾಡಬೇಕು. ಕಳೆದ ಬಾರಿ ನಮಗೆ ಇದರ ಜವಾಬ್ದಾರಿ ಇದ್ದು ಸುಸೂತ್ರವಾಗಿ ನಡೆಸಿದ್ದೇವೆ. ಈ ಬಾರಿ ಕೋಟೆ ಮಹಾಗಣಪತಿ ದೇವಾಲಯ ಸಮಿತಿಗೆ ಜವಾಬ್ದಾರಿ ಸಿಕ್ಕಿದೆ’ ಎಂದು ಹೇಳಿದರು.</p>.<p>‘ಕಳೆದ ಬಾರಿ ಶಾಸಕ ಡಾ.ಮಂತರ್ಗೌಡ ಅವರ ಸಹಕಾರದಿಂದ ಉತ್ತಮ ಅನುದಾನ ತರಲು ಸಾಧ್ಯವಾಯಿತು. ದಸರೆಯ ಯಶಸ್ಸಿಗೆ ಎಲ್ಲರೂ ಶ್ರಮ ಹಾಕೋಣ’ ಎಂದು ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಹೇಳಿದರು.</p>.<p>ಮುಖಂಡರಾದ ಸುಕುಮಾರ್, ಡಿಶು, ಸದಾಮುದ್ದಪ್ಪ, ಮಂಜುನಾಥ್, ಪ್ರಭು ರೈ ದಶಮಂಟಪ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಮಿತಿ ಪ್ರಮುಖರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ದಸರಾ ದಶಮಂಟಪಗಳಿಗೆ ಹಾಗೂ ಕರಗ ಸಮಿತಿಗಳಿಗೆ ಸರ್ಕಾರ ನೀಡುವ ಅನುದಾನವನ್ನು ಹೆಚ್ಚಿಸಬೇಕು ಎಂಬ ಒತ್ತಾಯ ಇಲ್ಲಿ ಶನಿವಾರ ನಡೆದ ದಸರಾ ದಶಮಂಟಪ ಸಮಿತಿ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.</p>.<p>ಇಲ್ಲಿನ ಕೋಟೆಮಾರಿಯಮ್ಮ ದೇವಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 2025-26ನೇ ಸಾಲಿಗೆ ದಸರಾ ದಶಮಂಟಪ ಸಮಿತಿಯ ಅಧಿಕಾರವನ್ನು ಸ್ವೀಕರಿಸಿದ ಕೋಟೆ ಮಹಾಗಣಪತಿ ದೇವಾಲಯ ಸಮಿತಿಯ ಹರೀಶ್ ಅಣ್ವೇಕರ್ ಈ ಮನವಿ ಮಾಡಿದರು.</p>.<p>‘ಒಂದು ಮಂಟಪ ನಿರ್ಮಾಣಕ್ಕೆ ಕನಿಷ್ಠ ಎಂದರೂ ₹ 30 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗುತ್ತದೆ. ಸರ್ಕಾರದಿಂದ ಬರುವ ಅನುದಾನದಲ್ಲಿ ನಮಗೆ ದಸರಾ ನಡೆಸುವುದು ತುಂಬಾ ಕಷ್ಟ. ಹೀಗಾಗಿ, ಸರ್ಕಾರ ಮಂಟಪಗಳಿಗೆ ಕನಿಷ್ಠ ಎಂದರೂ ₹ 5 ಲಕ್ಷ ಹಾಗೂ ಕರಗ ಸಮಿತಿಗಳಿಗೆ ₹ 3 ಲಕ್ಷ ಅನುದಾನ ನೀಡಬೇಕು. ಈ ಅನುದಾನ ತರುವ ಪಯತ್ನದಲ್ಲಿ ಇತರೆ ಎಲ್ಲಾ ಸಮಿತಿಗಳು ಸಹಕಾರ ನೀಡಬೇಕು’ ಎಂದು ಕೋರಿದರು.</p>.<p>‘ಹಿಂದೆ ಇದ್ದ ಹಲವು ಅಧ್ಯಕ್ಷರು ಹಾಗೂ ಸಮಿತಿಗಳು ದಸರಾವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ. ಈ ಬಾರಿ ನಮ್ಮ ಮೇಲೆ ನಂಬಿಕೆ ಇಟ್ಟು ದೊಡ್ಡ ಸ್ಥಾನವನ್ನು ನೀಡಿದ್ದಾರೆ. ಅದನ್ನು ಜವಾಬ್ದಾರಿಯುತವಾಗಿ ಮಾಡುವುದು ನಮ್ಮ ಕರ್ತವ್ಯ’ ಎಂದರು.</p>.<p>ಕೋಟೆಮಾರಿಯಮ್ಮ ದೇವಾಲಯದ ಯುವಕ ಮಿತ್ರ ಮಂಡಳಿ ನೂತನ ಅಧ್ಯಕ್ಷ ಬಿ.ಕೆ.ಜಗದೀಶ್ ಅವರೂ ಈ ಬೇಡಿಕೆಗೆ ದನಿಗೂಡಿಸಿದರು.</p>.<p>‘ಈ ಬಾರಿ ಮಡಿಕೇರಿ ದಸರೆಗೆ ₹ 2 ಕೋಟಿಗೂ ಹೆಚ್ಚು ಅನುದಾನ ತರುವ ಪ್ರಯತ್ನ ಮಾಡಲೇಬೇಕು. ಅದರಲ್ಲಿ ದಶಮಂಟಪ ಸಮಿತಿಗಳಿಗೆ ₹ 5 ಲಕ್ಷ ಹಾಗೂ ಕರಗ ಸಮಿತಿಗಳಿಗೆ ₹ 3 ಲಕ್ಷ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.</p>.<p>ಮೈಸೂರು ದಸರಾ ಹೊರತುಪಡಿಸಿದರೆ ಕೊಡಗಿನ ದಸರೆಯೇ ದೇಶದಲ್ಲಿ ಪ್ರಾಮುಖ್ಯತೆ ಪಡೆದಿದೆ. ಮಡಿಕೇರಿ ದಸರೆಗೆ ದೇಶ, ವಿದೇಶ, ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಜನರು ಬಂದು ಐತಿಹಾಸಿಕ ದಸರೆಯನ್ನು ವೀಕ್ಷಿಸುತ್ತಾರೆ. ಇಂತಹ ಮಹತ್ವದ ದಸರೆಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಪ್ರತಿಪಾದಿಸಿದರು.</p>.<p>ಕೋಟೆಮಾರಿಯಮ್ಮ ದಶಮಂಟಪ ಸಮಿತಿ ಮಾಜಿ ಅಧ್ಯಕ್ಷ ಜಿ.ಸಿ.ಜಗದೀಶ್ ಮಾತನಾಡಿ, ‘ಈ ಬಾರಿ ಕೋಟೆ ಮಾರಿಯಮ್ಮ ದೇವಾಲಯದ ಮಂಟಪ ಸಮಿತಿಯು 50 ವರ್ಷದ ಸಂಭ್ರಮದಲ್ಲಿ ಇದ್ದು, ಈ ಬಾರಿಯೂ ಬಹಳ ವಿಜೃಂಭಣೆಯಿಂದ ದಸರಾ ನಡೆಸಲು ತಿರ್ಮಾನಿಸಿದ್ದೇವೆ’ ಎಂದರು.</p>.<p>‘ನಮ್ಮ ಅಧಿಕಾರದ ಸಮಯದಲ್ಲಿ ಎದುರಾಗಿದ್ದ ಸಾಕಷ್ಟು ಗೊಂದಲಗಳು, ಸವಾಲುಗಳನ್ನು ಬಗೆಹರಿಸಿ ದಸರಾ ನಡೆಸಿದ್ದೇವೆ. ಮಡಿಕೇರಿ ದಸರೆ ಕಳೆಗುಂದದಂತೆ ನೋಡಿಕೊಂಡು, ಗತಕಾಲದ ವೈಭವ ಮತ್ತೆ ಮರುಕಳಿಸುವಂತೆ ಮಾಡಬೇಕು. ಕಳೆದ ಬಾರಿ ನಮಗೆ ಇದರ ಜವಾಬ್ದಾರಿ ಇದ್ದು ಸುಸೂತ್ರವಾಗಿ ನಡೆಸಿದ್ದೇವೆ. ಈ ಬಾರಿ ಕೋಟೆ ಮಹಾಗಣಪತಿ ದೇವಾಲಯ ಸಮಿತಿಗೆ ಜವಾಬ್ದಾರಿ ಸಿಕ್ಕಿದೆ’ ಎಂದು ಹೇಳಿದರು.</p>.<p>‘ಕಳೆದ ಬಾರಿ ಶಾಸಕ ಡಾ.ಮಂತರ್ಗೌಡ ಅವರ ಸಹಕಾರದಿಂದ ಉತ್ತಮ ಅನುದಾನ ತರಲು ಸಾಧ್ಯವಾಯಿತು. ದಸರೆಯ ಯಶಸ್ಸಿಗೆ ಎಲ್ಲರೂ ಶ್ರಮ ಹಾಕೋಣ’ ಎಂದು ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಹೇಳಿದರು.</p>.<p>ಮುಖಂಡರಾದ ಸುಕುಮಾರ್, ಡಿಶು, ಸದಾಮುದ್ದಪ್ಪ, ಮಂಜುನಾಥ್, ಪ್ರಭು ರೈ ದಶಮಂಟಪ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಮಿತಿ ಪ್ರಮುಖರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>