ಬೆಂಗಳೂರಿನಲ್ಲಿರುವ ಎನ್ಡಿಆರ್ಎಫ್ನ ರೀಜನಲ್ ರೆಸ್ಪಾನ್ಸ್ ಸೆಂಟರ್ನ 10ನೇ ಬೆಟಾಲಿಯನ್ನಲ್ಲಿರುವ 25 ಮಂದಿ ಯೋಧರು ಇನ್ಸ್ಪೆಕ್ಟರ್ ಅಜಯ್ ಅವರ ನೇತೃತ್ವದಲ್ಲಿ ಇಲ್ಲಿನ ಕುಶಾಲನಗರಕ್ಕೆ ತಮ್ಮದೇ ಬಸ್ನಲ್ಲಿ ಬಂದರು. ಅವರನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಅನನ್ಯ ವಾಸುದೇವ್ ಸ್ವಾಗತಿಸಿದರು.
ಮುಂಗಾರು ಮುಗಿಯುವವರೆಗೂ ಈ ತಂಡವು ಜಿಲ್ಲೆಯಲ್ಲೇ ಇರಲಿದ್ದು, ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಧಾವಿಸಲಿದೆ.