<p><strong>ಸೋಮವಾರಪೇಟೆ: </strong>ಇಲ್ಲಿನ ಮಲ್ಲಳ್ಳಿ ಜಲಪಾತದಲ್ಲಿ ಭಾನುವಾರ ಮುಳುಗುತ್ತಿದ್ದ ಮೂವರನ್ನು ಸ್ನೇಹಿತರನ್ನು ರಕ್ಷಿಸಿದ ಸಾಫ್ಟ್ವೇರ್ ಎಂಜಿನಿಯರ್ ನೀರಿನಿಂದ ಮೇಲೆ ಬರಲು ಸಾಧ್ಯವಾಗದೇ ತಾನೇ ಪ್ರಾಣ ಬಿಟ್ಟಿದ್ದಾರೆ.</p>.<p>ಬೆಂಗಳೂರಿನ ಆ್ಯಕ್ಸೆಂಚರ್ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದ ಸ್ಕಂದ (25) ಮೃತಪಟ್ಟವರು. ಮೈಸೂರಿನ ವಿವೇಕಾನಂದ ನಗರದ ನಿವಾಸಿ.</p>.<p>ಬೆಂಗಳೂರಿನಿಂದ 11 ಮಂದಿ ಸ್ನೇಹಿತರು ಜಲಪಾತ ವೀಕ್ಷಣೆಗೆ ಭಾನುವಾರ ಬಂದಿದ್ದರು. ಜಲಪಾತದ ತಳಭಾಗದಲ್ಲಿರುವ ‘ಮರಣಬಾವಿ’ ಎಂದೇ ಕರೆಸಿಕೊಳ್ಳುವ ಹೊಂಡದ ಸಮೀಪಕ್ಕೆ ಎಲ್ಲರೂ ತೆರಳಿದ್ದಾರೆ. ಅಲ್ಲಿ ಮೂವರು ಸೂಚನಾ ಫಲಕವನ್ನು ಲೆಕ್ಕಿಸದೇ ಹೊಂಡದಲ್ಲಿ ಸ್ನಾನಕ್ಕೆ ಇಳಿದು ಮುಳುಗುತ್ತಿದ್ದರು. ಸಹಾಯಕ್ಕಾಗಿ ಅಂಗಲಾಚುತ್ತಿದ್ದರು.</p>.<p>ಸ್ನೇಹಿತರು ಅಪಾಯದಲ್ಲಿ ಸಿಲುಕಿರುವುದನ್ನು ಗಮನಿಸಿ ಸ್ಕಂದ ಅವರು ನೀರಿಗೆ ಇಳಿದು ಮೂವರನ್ನೂ ರಕ್ಷಿಸಿದ್ದಾರೆ. ಕೊನೆಗೆ ಅವರಿಗೇ ಮೇಲೆ ಬರಲು ಆಗದೇ ಸ್ನೇಹಿತರೆದುರೇ ಪ್ರಾಣ ಕಳೆದುಕೊಂಡಿದ್ದಾರೆ.</p>.<p>ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋಮವಾರಪೇಟೆ: </strong>ಇಲ್ಲಿನ ಮಲ್ಲಳ್ಳಿ ಜಲಪಾತದಲ್ಲಿ ಭಾನುವಾರ ಮುಳುಗುತ್ತಿದ್ದ ಮೂವರನ್ನು ಸ್ನೇಹಿತರನ್ನು ರಕ್ಷಿಸಿದ ಸಾಫ್ಟ್ವೇರ್ ಎಂಜಿನಿಯರ್ ನೀರಿನಿಂದ ಮೇಲೆ ಬರಲು ಸಾಧ್ಯವಾಗದೇ ತಾನೇ ಪ್ರಾಣ ಬಿಟ್ಟಿದ್ದಾರೆ.</p>.<p>ಬೆಂಗಳೂರಿನ ಆ್ಯಕ್ಸೆಂಚರ್ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದ ಸ್ಕಂದ (25) ಮೃತಪಟ್ಟವರು. ಮೈಸೂರಿನ ವಿವೇಕಾನಂದ ನಗರದ ನಿವಾಸಿ.</p>.<p>ಬೆಂಗಳೂರಿನಿಂದ 11 ಮಂದಿ ಸ್ನೇಹಿತರು ಜಲಪಾತ ವೀಕ್ಷಣೆಗೆ ಭಾನುವಾರ ಬಂದಿದ್ದರು. ಜಲಪಾತದ ತಳಭಾಗದಲ್ಲಿರುವ ‘ಮರಣಬಾವಿ’ ಎಂದೇ ಕರೆಸಿಕೊಳ್ಳುವ ಹೊಂಡದ ಸಮೀಪಕ್ಕೆ ಎಲ್ಲರೂ ತೆರಳಿದ್ದಾರೆ. ಅಲ್ಲಿ ಮೂವರು ಸೂಚನಾ ಫಲಕವನ್ನು ಲೆಕ್ಕಿಸದೇ ಹೊಂಡದಲ್ಲಿ ಸ್ನಾನಕ್ಕೆ ಇಳಿದು ಮುಳುಗುತ್ತಿದ್ದರು. ಸಹಾಯಕ್ಕಾಗಿ ಅಂಗಲಾಚುತ್ತಿದ್ದರು.</p>.<p>ಸ್ನೇಹಿತರು ಅಪಾಯದಲ್ಲಿ ಸಿಲುಕಿರುವುದನ್ನು ಗಮನಿಸಿ ಸ್ಕಂದ ಅವರು ನೀರಿಗೆ ಇಳಿದು ಮೂವರನ್ನೂ ರಕ್ಷಿಸಿದ್ದಾರೆ. ಕೊನೆಗೆ ಅವರಿಗೇ ಮೇಲೆ ಬರಲು ಆಗದೇ ಸ್ನೇಹಿತರೆದುರೇ ಪ್ರಾಣ ಕಳೆದುಕೊಂಡಿದ್ದಾರೆ.</p>.<p>ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>