<p><strong>ಮಡಿಕೇರಿ: </strong>‘ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್ ವಿರುದ್ಧ ಕೆಲವು ಸಂಘಟನೆಗಳು ಹಣ ವಸೂಲಾತಿಯ ಆಪಾದನೆ ಮಾಡಿದ್ದು, ಅದು ಸತ್ಯಕ್ಕೆ ದೂರವಾದ್ದದ್ದು’ ಎಂದು ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಮಹದೇವ್ ಹೇಳಿದರು.</p>.<p>ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ‘ಸಂಘಟನೆಯ ಹೆಸರು ಹೇಳಿಕೊಂಡು ಕೆಲವರು ಹಣದ ಬೇಡಿಕೆ ಸಲ್ಲಿಸುತ್ತಿದ್ದಾರೆ ಎಂಬ ಸುಳ್ಳು ವದಂತಿಗಳು ಹರಿದಾಡುತ್ತಿವೆ. ಇಂತಹ ಕೃತ್ಯದಲ್ಲಿ ಸಂಘಟನೆ ಎಂದೂ ಭಾಗಿಯಾಗಿಲ್ಲ. ಬದಲಾಗಿ ರೈತರು ಹಾಗೂ ಕಾರ್ಮಿಕರ ಪರವಾಗಿಯೇ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.</p>.<p>ಸಂಘಟನೆ ನೋಂದಣಿಯಾಗಿದೆ. ಆದರೆ, ಕೆಲವು ವ್ಯಕ್ತಿಗಳು ಸಂಘಟನೆ ಶಕ್ತಿಯನ್ನು ಸಹಿಸದೇ ಇಲ್ಲದ ವದಂತಿ ಹಬ್ಬಿಸುತ್ತಿದ್ದಾರೆ ಎಂದು ದೂರಿದರು.</p>.<p>12 ಎಕರೆ 20 ಗುಂಟೆಗೆ ಮೇಲ್ಪಟ್ಟ ತೋಟದ ಮಾಲೀಕರು, ಪ್ಲಾಂಟೇಶನ್ ಲೇಬರ್ ಕಾಯ್ದೆಗೆ ಒಳಪಟ್ಟಿರುತ್ತಾರೆ. ಈ ತೋಟಗಳ ಮಾಲೀಕರು ಕಾರ್ಮಿಕರಿಗೆ ಕನಿಷ್ಠ ವೇತನ ₹321 ನೀಡಬೇಕು. ಜತೆಗೆ, ಲೈನ್ಮನೆಯಲ್ಲಿರುವವರಿಗೆ ಕುಡಿಯುವ ನೀರು, ಆಸ್ಪತ್ರೆ ಸೌಲಭ್ಯ, ಬೋನಸ್, ಪಿಎಫ್ಗಳನ್ನು ಸಕಾಲದಲ್ಲಿ ನೀಡಬೇಕು. ಅನೇಕ ವರ್ಷಗಳಿಂದ ಸಂಘಟನೆ ಹೋರಾಟ ಮಾಡುತ್ತಿದೆ. ಅದನ್ನು ಬಿಟ್ಟರೆ ರೈತರ ವಿರುದ್ಧ ಯಾವುದೇ ಹೋರಾಟಕ್ಕೆ ನಿಂತಿಲ್ಲ ಎಂದು ಹೇಳಿದರು.</p>.<p>ತೋಟದ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ವೇತನ, 6 ತಿಂಗಳ ಹೆರಿಗೆ ಭತ್ಯೆ ಸೇರಿದಂತೆ ಸಾರಿಗೆ ವಾಹನ ಸೌಲಭ್ಯ ವೆಚ್ಚವನ್ನು ಆಯಾ ತೋಟದ ಮಾಲೀಕರು ಕಾರ್ಮಿಕರಿಗೆ ನೀಡಬೇಕೆಂಬ ಕಾನೂನು ಇದೆ. ಆದರೆ, ಈ ಸವಲತ್ತುಗಳನ್ನು ಮಾಲೀಕರು ನೀಡುತ್ತಿಲ್ಲಎಂದು ದೂರಿದರು.</p>.<p>ಯೂನಿಯನ್ ಅಧ್ಯಕ್ಷ ಈ.ರಾ. ದುರ್ಗಾಪ್ರಸಾದ್ ಮಾತನಾಡಿ, ‘ಕಾರ್ಮಿಕರಿಗೆ ಕಾನೂನಿನಡಿಸಿಗುವ ಸೌಲಭ್ಯವನ್ನು ತೋಟದ ಮಾಲೀಕರು ನೀಡಬೇಕು. ಈ ಬಗ್ಗೆ ಹೋರಾಟವನ್ನು ಸಂಘಟನೆ ಮಾಡುತ್ತಿದೆ. ಉಳಿದಂತೆ, ಮಾಲೀಕರು ಅಥವಾ ಕೃಷಿಕರ ವಿರುದ್ಧ ಸಂಘಟನೆ ಕೆಲಸ ಮಾಡುತ್ತಿಲ್ಲ. ಜಿಲ್ಲೆಯ ಕೃಷಿಕರು, ಕಾರ್ಮಿಕರು ಒಗ್ಗಟ್ಟಾಗಿ ನಡೆಯಬೇಕಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ: </strong>‘ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್ ವಿರುದ್ಧ ಕೆಲವು ಸಂಘಟನೆಗಳು ಹಣ ವಸೂಲಾತಿಯ ಆಪಾದನೆ ಮಾಡಿದ್ದು, ಅದು ಸತ್ಯಕ್ಕೆ ದೂರವಾದ್ದದ್ದು’ ಎಂದು ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಮಹದೇವ್ ಹೇಳಿದರು.</p>.<p>ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ‘ಸಂಘಟನೆಯ ಹೆಸರು ಹೇಳಿಕೊಂಡು ಕೆಲವರು ಹಣದ ಬೇಡಿಕೆ ಸಲ್ಲಿಸುತ್ತಿದ್ದಾರೆ ಎಂಬ ಸುಳ್ಳು ವದಂತಿಗಳು ಹರಿದಾಡುತ್ತಿವೆ. ಇಂತಹ ಕೃತ್ಯದಲ್ಲಿ ಸಂಘಟನೆ ಎಂದೂ ಭಾಗಿಯಾಗಿಲ್ಲ. ಬದಲಾಗಿ ರೈತರು ಹಾಗೂ ಕಾರ್ಮಿಕರ ಪರವಾಗಿಯೇ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.</p>.<p>ಸಂಘಟನೆ ನೋಂದಣಿಯಾಗಿದೆ. ಆದರೆ, ಕೆಲವು ವ್ಯಕ್ತಿಗಳು ಸಂಘಟನೆ ಶಕ್ತಿಯನ್ನು ಸಹಿಸದೇ ಇಲ್ಲದ ವದಂತಿ ಹಬ್ಬಿಸುತ್ತಿದ್ದಾರೆ ಎಂದು ದೂರಿದರು.</p>.<p>12 ಎಕರೆ 20 ಗುಂಟೆಗೆ ಮೇಲ್ಪಟ್ಟ ತೋಟದ ಮಾಲೀಕರು, ಪ್ಲಾಂಟೇಶನ್ ಲೇಬರ್ ಕಾಯ್ದೆಗೆ ಒಳಪಟ್ಟಿರುತ್ತಾರೆ. ಈ ತೋಟಗಳ ಮಾಲೀಕರು ಕಾರ್ಮಿಕರಿಗೆ ಕನಿಷ್ಠ ವೇತನ ₹321 ನೀಡಬೇಕು. ಜತೆಗೆ, ಲೈನ್ಮನೆಯಲ್ಲಿರುವವರಿಗೆ ಕುಡಿಯುವ ನೀರು, ಆಸ್ಪತ್ರೆ ಸೌಲಭ್ಯ, ಬೋನಸ್, ಪಿಎಫ್ಗಳನ್ನು ಸಕಾಲದಲ್ಲಿ ನೀಡಬೇಕು. ಅನೇಕ ವರ್ಷಗಳಿಂದ ಸಂಘಟನೆ ಹೋರಾಟ ಮಾಡುತ್ತಿದೆ. ಅದನ್ನು ಬಿಟ್ಟರೆ ರೈತರ ವಿರುದ್ಧ ಯಾವುದೇ ಹೋರಾಟಕ್ಕೆ ನಿಂತಿಲ್ಲ ಎಂದು ಹೇಳಿದರು.</p>.<p>ತೋಟದ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ವೇತನ, 6 ತಿಂಗಳ ಹೆರಿಗೆ ಭತ್ಯೆ ಸೇರಿದಂತೆ ಸಾರಿಗೆ ವಾಹನ ಸೌಲಭ್ಯ ವೆಚ್ಚವನ್ನು ಆಯಾ ತೋಟದ ಮಾಲೀಕರು ಕಾರ್ಮಿಕರಿಗೆ ನೀಡಬೇಕೆಂಬ ಕಾನೂನು ಇದೆ. ಆದರೆ, ಈ ಸವಲತ್ತುಗಳನ್ನು ಮಾಲೀಕರು ನೀಡುತ್ತಿಲ್ಲಎಂದು ದೂರಿದರು.</p>.<p>ಯೂನಿಯನ್ ಅಧ್ಯಕ್ಷ ಈ.ರಾ. ದುರ್ಗಾಪ್ರಸಾದ್ ಮಾತನಾಡಿ, ‘ಕಾರ್ಮಿಕರಿಗೆ ಕಾನೂನಿನಡಿಸಿಗುವ ಸೌಲಭ್ಯವನ್ನು ತೋಟದ ಮಾಲೀಕರು ನೀಡಬೇಕು. ಈ ಬಗ್ಗೆ ಹೋರಾಟವನ್ನು ಸಂಘಟನೆ ಮಾಡುತ್ತಿದೆ. ಉಳಿದಂತೆ, ಮಾಲೀಕರು ಅಥವಾ ಕೃಷಿಕರ ವಿರುದ್ಧ ಸಂಘಟನೆ ಕೆಲಸ ಮಾಡುತ್ತಿಲ್ಲ. ಜಿಲ್ಲೆಯ ಕೃಷಿಕರು, ಕಾರ್ಮಿಕರು ಒಗ್ಗಟ್ಟಾಗಿ ನಡೆಯಬೇಕಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>