<p><strong>ಮಡಿಕೇರಿ</strong>: ‘ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಕೇವಲ ನನಗಲ್ಲ. ನನ್ನಿಂದ ಉಮ್ಮತ್ತಾಟ್ ಕಲೆಯನ್ನು ಕಲಿತ 10 ಸಾವಿರ ವಿದ್ಯಾರ್ಥಿಗಳಿಗೆ ಹಾಗೂ ಅವರನ್ನು ನನ್ನ ಬಳಿ ಈ ಕಲೆ ಕಲಿಸಲು ಕಳುಹಿಸಿದ ಪೋಷಕರಿಗೆ. ಅವರೆಲ್ಲರೂ ನನ್ನ ಬಳಿ ಬಂದು ಕಲಿತಿದ್ದರಿಂದಲೇ ಇಂದು ನನ್ನನ್ನು ಗುರುತಿಸಲಾಯಿತು’ ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಹೇಳಿದರು.</p>.<p>ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.</p>.<p>‘ನಾನು ಮಾತನಾಡುವುದಿಲ್ಲ, ಮಾತನಾಡಲು ನನಗೆ ಬರುವುದೂ ಇಲ್ಲ. ಕೇವಲ ಕೆಲಸ ಮಾಡುತ್ತೇನೆ’ ಎನ್ನುತ್ತಲೇ ಮಾತಿಗಿಳಿದ ಅವರು, ತಮ್ಮ ಮಾತುಗಳ ಮೂಲಕ ಕೇಳುಗರನ್ನು ತಮ್ಮ ನೆನಪಿನಂಗಳಕ್ಕೆ ಕರೆದೋಯ್ದರು.</p>.<p>‘ಕಲೆಗೆ ಯಾವುದೇ ಜಾತಿ ಭೇದ ಇಲ್ಲ’ ಎಂದ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ನೀಡಿದ ಪ್ರದರ್ಶನದಲ್ಲಿ ನಾಲ್ವರು ಮುಸ್ಲಿಮರು, ಕ್ರೈಸ್ತರು ಪಾಲ್ಗೊಂಡು ಉಮ್ಮತ್ತಾಟ್ ಕಲೆ ಪ್ರದರ್ಶಿಸಿದ್ದು, ರಾಜ್ಯಪಾಲರೊಬ್ಬರು ಎದ್ದು ನಿಂತು ಚಪ್ಪಾಳೆ ತಟ್ಟಿದ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.</p>.<p>‘ಉಮ್ಮತ್ತಾಟ್ ಕಲೆ ಉಳಿಯಬೇಕು. ನನ್ನ ನಂತರ ಈ ಕಲೆಯನ್ನು ಉಳಿಸಿ, ಬೆಳೆಸಿ’ ಎಂದೂ ಮನವಿ ಮಾಡುವ ಮೂಲಕ ಗಮನ ಸೆಳೆದರು.</p>.<p>‘1982ರಿಂದಲೇ ಉಮ್ಮತ್ತಾಟ್ ಕಲಿಸಲು ಆರಂಭಿಸಿದೆ. ಗೋವಾದಿಂದ ಆರಂಭಿಸಿ ದೇಶದ ಉದ್ದಗಲಕ್ಕೂ ಸಂಚರಿಸಿದೆ. ಹೋದ ಕಡೆಯಲ್ಲೆಲ್ಲ ಒಳ್ಳೆಯ ಹೆಸರು ಸಿಕ್ಕಿತು. ಹೊರಗಡೆ ನಮ್ಮನ್ನು ಚೆನ್ನಾಗಿಯೇ ನೋಡಿಕೊಂಡರು’ ಎಂದು ಹೇಳಿದರು.</p>.<p>‘ಕಲಿಯಬೇಕು ಎಂದು ಆಸೆ ಉಳ್ಳವರಿಗೆ ನಾನೇ ನನ್ನ ಮನೆಯಲ್ಲಿರಿಸಿಕೊಂಡು ಕಲಿಸಿದೆ. ಬಡವರು, ಓದುವುದಕ್ಕೆ ಆರ್ಥಿಕ ಶಕ್ತಿ ಇಲ್ಲದವರನ್ನೇ ಆಯ್ಕೆ ಮಾಡಿಕೊಂಡೆ. ಬಸ್ ಇಲ್ಲದ ಊರಿನವರನ್ನೂ<br />ನಮ್ಮ ಮನೆಯಲ್ಲಿ ಇರಿಸಿಕೊಂಡು ಕಲಿಸಿದೆ. ಅವರೆಲ್ಲರೂ ತಮ್ಮ ಕಾಲ ಮೇಲೆ ನಿಲ್ಲುವುದಕ್ಕೆ ಸಾಧ್ಯವಾಯಿತು’ ಎಂದರು.</p>.<p>‘ಇದಕ್ಕೆಲ್ಲ ನನ್ನ ಪತಿ ಸಂಪೂರ್ಣ ಸಹಕಾರ ನೀಡಿದರು. ನಮ್ಮ ಮಕ್ಕಳಂತೆ ಬೇರೆ ಮಕ್ಕಳನ್ನೂ ನೋಡಿಕೊಂಡರು. ನಮ್ಮ ಕುಟುಂಬವರ ನೆರವು ಇಲ್ಲದಿದ್ದರೆ ಇಷ್ಟೆಲ್ಲ ಸಾಧನೆ ಮಾಡಲು ಆಗುತ್ತಿರಲಿಲ್ಲ’ ಎಂದು ತಿಳಿಸಿದರು.</p>.<p>‘ನಾನು ಪ್ರಶಸ್ತಿಗಾಗಿ ಅರ್ಜಿ ಹಾಕಿಲ್ಲ. ಪ್ರಶಸ್ತಿಗಾಗಿ ಈ ಕಲೆಯನ್ನು ಕಲಿಸಿಲ್ಲ. ಇಷ್ಟೆಲ್ಲ ಮಾಡಿದ್ದು ಕಲೆಗಾಗಿ. ಮುಂದೆಯೂ ಯಾರಾದರೂ ಈ ಬಗೆಯಲ್ಲಿ ಕೆಲಸ ಮಾಡಿದರೆ ಈ ಕಲೆ ಉಳಿಯುತ್ತದೆ, ಬೆಳೆಯುತ್ತದೆ’ ಎಂದರು.</p>.<p>ಸಂಘದ ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ, ಅಧ್ಯಕ್ಷೆ ಸವಿತಾ ರೈ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ‘ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಕೇವಲ ನನಗಲ್ಲ. ನನ್ನಿಂದ ಉಮ್ಮತ್ತಾಟ್ ಕಲೆಯನ್ನು ಕಲಿತ 10 ಸಾವಿರ ವಿದ್ಯಾರ್ಥಿಗಳಿಗೆ ಹಾಗೂ ಅವರನ್ನು ನನ್ನ ಬಳಿ ಈ ಕಲೆ ಕಲಿಸಲು ಕಳುಹಿಸಿದ ಪೋಷಕರಿಗೆ. ಅವರೆಲ್ಲರೂ ನನ್ನ ಬಳಿ ಬಂದು ಕಲಿತಿದ್ದರಿಂದಲೇ ಇಂದು ನನ್ನನ್ನು ಗುರುತಿಸಲಾಯಿತು’ ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಹೇಳಿದರು.</p>.<p>ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.</p>.<p>‘ನಾನು ಮಾತನಾಡುವುದಿಲ್ಲ, ಮಾತನಾಡಲು ನನಗೆ ಬರುವುದೂ ಇಲ್ಲ. ಕೇವಲ ಕೆಲಸ ಮಾಡುತ್ತೇನೆ’ ಎನ್ನುತ್ತಲೇ ಮಾತಿಗಿಳಿದ ಅವರು, ತಮ್ಮ ಮಾತುಗಳ ಮೂಲಕ ಕೇಳುಗರನ್ನು ತಮ್ಮ ನೆನಪಿನಂಗಳಕ್ಕೆ ಕರೆದೋಯ್ದರು.</p>.<p>‘ಕಲೆಗೆ ಯಾವುದೇ ಜಾತಿ ಭೇದ ಇಲ್ಲ’ ಎಂದ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ನೀಡಿದ ಪ್ರದರ್ಶನದಲ್ಲಿ ನಾಲ್ವರು ಮುಸ್ಲಿಮರು, ಕ್ರೈಸ್ತರು ಪಾಲ್ಗೊಂಡು ಉಮ್ಮತ್ತಾಟ್ ಕಲೆ ಪ್ರದರ್ಶಿಸಿದ್ದು, ರಾಜ್ಯಪಾಲರೊಬ್ಬರು ಎದ್ದು ನಿಂತು ಚಪ್ಪಾಳೆ ತಟ್ಟಿದ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.</p>.<p>‘ಉಮ್ಮತ್ತಾಟ್ ಕಲೆ ಉಳಿಯಬೇಕು. ನನ್ನ ನಂತರ ಈ ಕಲೆಯನ್ನು ಉಳಿಸಿ, ಬೆಳೆಸಿ’ ಎಂದೂ ಮನವಿ ಮಾಡುವ ಮೂಲಕ ಗಮನ ಸೆಳೆದರು.</p>.<p>‘1982ರಿಂದಲೇ ಉಮ್ಮತ್ತಾಟ್ ಕಲಿಸಲು ಆರಂಭಿಸಿದೆ. ಗೋವಾದಿಂದ ಆರಂಭಿಸಿ ದೇಶದ ಉದ್ದಗಲಕ್ಕೂ ಸಂಚರಿಸಿದೆ. ಹೋದ ಕಡೆಯಲ್ಲೆಲ್ಲ ಒಳ್ಳೆಯ ಹೆಸರು ಸಿಕ್ಕಿತು. ಹೊರಗಡೆ ನಮ್ಮನ್ನು ಚೆನ್ನಾಗಿಯೇ ನೋಡಿಕೊಂಡರು’ ಎಂದು ಹೇಳಿದರು.</p>.<p>‘ಕಲಿಯಬೇಕು ಎಂದು ಆಸೆ ಉಳ್ಳವರಿಗೆ ನಾನೇ ನನ್ನ ಮನೆಯಲ್ಲಿರಿಸಿಕೊಂಡು ಕಲಿಸಿದೆ. ಬಡವರು, ಓದುವುದಕ್ಕೆ ಆರ್ಥಿಕ ಶಕ್ತಿ ಇಲ್ಲದವರನ್ನೇ ಆಯ್ಕೆ ಮಾಡಿಕೊಂಡೆ. ಬಸ್ ಇಲ್ಲದ ಊರಿನವರನ್ನೂ<br />ನಮ್ಮ ಮನೆಯಲ್ಲಿ ಇರಿಸಿಕೊಂಡು ಕಲಿಸಿದೆ. ಅವರೆಲ್ಲರೂ ತಮ್ಮ ಕಾಲ ಮೇಲೆ ನಿಲ್ಲುವುದಕ್ಕೆ ಸಾಧ್ಯವಾಯಿತು’ ಎಂದರು.</p>.<p>‘ಇದಕ್ಕೆಲ್ಲ ನನ್ನ ಪತಿ ಸಂಪೂರ್ಣ ಸಹಕಾರ ನೀಡಿದರು. ನಮ್ಮ ಮಕ್ಕಳಂತೆ ಬೇರೆ ಮಕ್ಕಳನ್ನೂ ನೋಡಿಕೊಂಡರು. ನಮ್ಮ ಕುಟುಂಬವರ ನೆರವು ಇಲ್ಲದಿದ್ದರೆ ಇಷ್ಟೆಲ್ಲ ಸಾಧನೆ ಮಾಡಲು ಆಗುತ್ತಿರಲಿಲ್ಲ’ ಎಂದು ತಿಳಿಸಿದರು.</p>.<p>‘ನಾನು ಪ್ರಶಸ್ತಿಗಾಗಿ ಅರ್ಜಿ ಹಾಕಿಲ್ಲ. ಪ್ರಶಸ್ತಿಗಾಗಿ ಈ ಕಲೆಯನ್ನು ಕಲಿಸಿಲ್ಲ. ಇಷ್ಟೆಲ್ಲ ಮಾಡಿದ್ದು ಕಲೆಗಾಗಿ. ಮುಂದೆಯೂ ಯಾರಾದರೂ ಈ ಬಗೆಯಲ್ಲಿ ಕೆಲಸ ಮಾಡಿದರೆ ಈ ಕಲೆ ಉಳಿಯುತ್ತದೆ, ಬೆಳೆಯುತ್ತದೆ’ ಎಂದರು.</p>.<p>ಸಂಘದ ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ, ಅಧ್ಯಕ್ಷೆ ಸವಿತಾ ರೈ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>