<p><strong>ಮಡಿಕೇರಿ:</strong> ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಇಲ್ಲಿನ ಓಂಕಾರೇಶ್ವರ ದೇವಾಲಯದಲ್ಲಿ ಬುಧವಾರ ರಾತ್ರಿ ನಡೆದ ತೆಪ್ಪೋತ್ಸವವನ್ನು ಹಲವು ಭಕ್ತರು ಕಣ್ತುಂಬಿಕೊಂಡರು.</p>.<p>ದೇವಸ್ಥಾನ ವ್ಯವಸ್ಥಾಪನಾ ವತಿಯಿಂದ ಸಂಜೆ 6 ಗಂಟೆಗೆ ನಡೆದ ಮಹಾಪೂಜೆಯ ನಂತರ 6.30ಕ್ಕೆ ದೇವಾಲಯದ ವತಿಯಿಂದ ತೆಪ್ಪೋತ್ಸವ, ಪಲ್ಲಕ್ಕಿ ಉತ್ಸವ, ದಟ್ಟೋತ್ಸವಗಳು ಶ್ರದ್ಧಾಭಕ್ತಿಯಿಂದ ನಡೆದವು.</p>.<p>ಹಲವು ಮಂದಿ ಭಕ್ತರು ಈ ದೇವತಾ ಕಾರ್ಯದಲ್ಲಿ ಭಾಗಿಯಾದರು. ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಇದ್ದರು.</p>.<p><strong>ಶಾಂತಿಪೂಜೆ</strong></p><p>ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ 49ನೇ ವರ್ಷದ ದಸರಾ ಮಹೋತ್ಸವದ ಶೋಭಾಯಾತ್ರೆಯಲ್ಲಿದ್ದ ಮೂರ್ತಿಗಳ ಶಾಂತಿಪೂಜೆ ಶ್ರದ್ಧಾಭಕ್ತಿಯಿಂದ ದೇವಾಲಯದ ಆವರಣದಲ್ಲಿ ನೆರವೇರಿತು. ಶಾಂತಿಪೂಜೆಯ ಜೊತೆಗೆ, ರಂಗಪೂಜೆ ಮತ್ತು ದೀಪಾರಾಧನೆಗಳು ನಡೆದವು.</p>.<p>ಸಮಿತಿಯ 150 ಮಂದಿಗೆ, ಸಹಕಾರ ನೀಡಿದ ದಾನಿಗಳಿಗೆ, ಪೂಜಾ ಲೈಟಿಂಗ್ ನಜೀರ್ ಮತ್ತು ತಂಡ, ಫೋಕಸಿಂಗ್ ವಿಭಾಗದ ಲೋಕೇಶ್, ಟ್ರಾಕ್ಟರ್ ಸೆಟ್ಟಿಂಗ್ನ ನವೀನ್ ಅವರಿಗೆ ಸನ್ಮಾನ ಮಾಡಲಾಯಿತು.</p>.<p>ಕೋಟೆ ಗಣಪತಿ ದಸರಾ ಮಂಟಪ ಸಮಿತಿ ಅಧ್ಯಕ್ಷ ವಿಘ್ನೇಶ್, ದಸರಾ ದಶಮಂಟಪ ಸಮಿತಿ ಅಧ್ಯಕ್ಷ ಹರೀಶ್, ನಗರಸಭೆ ಸದಸ್ಯೆ ಸವಿತಾ ರಾಕೇಶ್, ಹಿರಿಯರಾದ ರಘುನಾಥರಾವ್, ಉದ್ಯಮಿ ಶರಣ್ ಪೂಣಚ್ಚ, ವೇಣು ಹಾಗೂ ಸಮಿತಿ ಸದಸ್ಯರು ಭಾಗವಹಿಸಿದ್ದರು.</p>.<p>ಕಾರ್ತೀಕ ಹುಣ್ಣಿಮೆಯ ಪ್ರಯುಕ್ತ ಕೋದಂಡರಾಮ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಸಂಜೆಯ ನಂತರ ಮಹಿಳೆಯರು ದೇವರ ಭಜನೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಇಲ್ಲಿನ ಓಂಕಾರೇಶ್ವರ ದೇವಾಲಯದಲ್ಲಿ ಬುಧವಾರ ರಾತ್ರಿ ನಡೆದ ತೆಪ್ಪೋತ್ಸವವನ್ನು ಹಲವು ಭಕ್ತರು ಕಣ್ತುಂಬಿಕೊಂಡರು.</p>.<p>ದೇವಸ್ಥಾನ ವ್ಯವಸ್ಥಾಪನಾ ವತಿಯಿಂದ ಸಂಜೆ 6 ಗಂಟೆಗೆ ನಡೆದ ಮಹಾಪೂಜೆಯ ನಂತರ 6.30ಕ್ಕೆ ದೇವಾಲಯದ ವತಿಯಿಂದ ತೆಪ್ಪೋತ್ಸವ, ಪಲ್ಲಕ್ಕಿ ಉತ್ಸವ, ದಟ್ಟೋತ್ಸವಗಳು ಶ್ರದ್ಧಾಭಕ್ತಿಯಿಂದ ನಡೆದವು.</p>.<p>ಹಲವು ಮಂದಿ ಭಕ್ತರು ಈ ದೇವತಾ ಕಾರ್ಯದಲ್ಲಿ ಭಾಗಿಯಾದರು. ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಇದ್ದರು.</p>.<p><strong>ಶಾಂತಿಪೂಜೆ</strong></p><p>ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ 49ನೇ ವರ್ಷದ ದಸರಾ ಮಹೋತ್ಸವದ ಶೋಭಾಯಾತ್ರೆಯಲ್ಲಿದ್ದ ಮೂರ್ತಿಗಳ ಶಾಂತಿಪೂಜೆ ಶ್ರದ್ಧಾಭಕ್ತಿಯಿಂದ ದೇವಾಲಯದ ಆವರಣದಲ್ಲಿ ನೆರವೇರಿತು. ಶಾಂತಿಪೂಜೆಯ ಜೊತೆಗೆ, ರಂಗಪೂಜೆ ಮತ್ತು ದೀಪಾರಾಧನೆಗಳು ನಡೆದವು.</p>.<p>ಸಮಿತಿಯ 150 ಮಂದಿಗೆ, ಸಹಕಾರ ನೀಡಿದ ದಾನಿಗಳಿಗೆ, ಪೂಜಾ ಲೈಟಿಂಗ್ ನಜೀರ್ ಮತ್ತು ತಂಡ, ಫೋಕಸಿಂಗ್ ವಿಭಾಗದ ಲೋಕೇಶ್, ಟ್ರಾಕ್ಟರ್ ಸೆಟ್ಟಿಂಗ್ನ ನವೀನ್ ಅವರಿಗೆ ಸನ್ಮಾನ ಮಾಡಲಾಯಿತು.</p>.<p>ಕೋಟೆ ಗಣಪತಿ ದಸರಾ ಮಂಟಪ ಸಮಿತಿ ಅಧ್ಯಕ್ಷ ವಿಘ್ನೇಶ್, ದಸರಾ ದಶಮಂಟಪ ಸಮಿತಿ ಅಧ್ಯಕ್ಷ ಹರೀಶ್, ನಗರಸಭೆ ಸದಸ್ಯೆ ಸವಿತಾ ರಾಕೇಶ್, ಹಿರಿಯರಾದ ರಘುನಾಥರಾವ್, ಉದ್ಯಮಿ ಶರಣ್ ಪೂಣಚ್ಚ, ವೇಣು ಹಾಗೂ ಸಮಿತಿ ಸದಸ್ಯರು ಭಾಗವಹಿಸಿದ್ದರು.</p>.<p>ಕಾರ್ತೀಕ ಹುಣ್ಣಿಮೆಯ ಪ್ರಯುಕ್ತ ಕೋದಂಡರಾಮ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಸಂಜೆಯ ನಂತರ ಮಹಿಳೆಯರು ದೇವರ ಭಜನೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>