‘ಒಂದು ಧರ್ಮದವರನ್ನು ತುಷ್ಟೀಕರಣ ಮಾಡುವ ಸರ್ಕಾರದ ಪ್ರವೃತ್ತಿ ಅತಿಯಾಯಿತು. ಪಾಕ್ ಪರ ಘೋಷಣೆಯ ಪ್ರಕರಣ ದಾಖಲಿಸುವಲ್ಲಿ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಪಡೆಯುವಲ್ಲಿ ಸರ್ಕಾರ ವಿಳಂಬ ಮಾಡಿತು. ಈಗ ಪ್ರಕರಣ ದಾಖಲಿಸಿದ್ದರೂ ಮುಂದೆ ವಾಪಸ್ ಪಡೆಯಬಹುದೆಂಬ ಧೈರ್ಯ ಆರೋಪಿಗಳಲ್ಲಿದೆ’ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.