ಆನೆಕಾಡು ಅಭಯಾರಣ್ಯದಿಂದ ಬಂದ ಈ ಕಾಡಾನೆಗೆ ಚಿಕ್ಲಿಹೊಳೆಯ ಸಮೀಪ ಕಂದಕವನ್ನು ತೋಡಿದ್ದು, ಇದರಿಂದಾಗಿ ಇತ್ತ ಕಡೆ ಬರುವುದಕ್ಕೆ ಸಾಧ್ಯವಾಗದೆ ಗೀಳಿಡುತ್ತಾ ಆಕ್ರೋಶ ವ್ಯಕ್ತಪಡಿಸಿತು. ಈ ಮಧ್ಯೆ ಜನರ ಕೂಗಾಟಕ್ಕೆ ಇನ್ನಷ್ಟು ಆಕ್ರೋಶಗೊಂಡ ಆನೆ, ಸೊಂಡಿಲಿನಿಂದ ಮಣ್ಣು ಎಸೆದು ಭಯ ಹುಟ್ಟಿಸಿತು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿದ್ದ ಜನರ ಸದ್ದುಗದ್ದಲದಿಂದ ಹೆದರಿ ಕಾಡಿನೊಳಗೆ ಪಲಾಯನ ಮಾಡಿತು. ನಂತರ ಜನರು ನಿಟ್ಟುಸಿರು ಬಿಡುವಂತಾಯಿತು.