ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಟಿ ಸಲಗ ಸಂಚಾರ: ಆತಂಕ

Last Updated 3 ಮೇ 2021, 3:35 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಸಮೀಪದ ಕಂಬಿಬಾಣೆ ವ್ಯಾಪ್ತಿಯ ಚಿಕ್ಲಿಹೊಳೆ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಒಂಟಿ ಸಲಗವೊಂದು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿತು.

ಒಂದು ವಾರದಿಂದ ಸುಂಟಿಕೊಪ್ಪ ವ್ಯಾಪ್ತಿಯ ಗ್ರಾಮಗಳಲ್ಲಿ ಒಂಟಿ ಸಲಗ ಸಂಚರಿಸುತ್ತಿದ್ದು, ಭಾನುವಾರವೂ ಅದೇ ಆನೆ ಬಂದಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

ಆನೆಕಾಡು ಅಭಯಾರಣ್ಯದಿಂದ ಬಂದ ಈ ಕಾಡಾನೆಗೆ ಚಿಕ್ಲಿಹೊಳೆಯ ಸಮೀಪ ಕಂದಕವನ್ನು ತೋಡಿದ್ದು, ಇದರಿಂದಾಗಿ ಇತ್ತ ಕಡೆ ಬರುವುದಕ್ಕೆ ಸಾಧ್ಯವಾಗದೆ ಗೀಳಿಡುತ್ತಾ ಆಕ್ರೋಶ ವ್ಯಕ್ತಪಡಿಸಿತು. ಈ ಮಧ್ಯೆ ಜನರ ಕೂಗಾಟಕ್ಕೆ ಇನ್ನಷ್ಟು ಆಕ್ರೋಶಗೊಂಡ ಆನೆ, ಸೊಂಡಿಲಿನಿಂದ ಮಣ್ಣು ಎಸೆದು ಭಯ ಹುಟ್ಟಿಸಿತು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿದ್ದ ಜನರ ಸದ್ದುಗದ್ದಲದಿಂದ ಹೆದರಿ ಕಾಡಿನೊಳಗೆ ಪಲಾಯನ ಮಾಡಿತು. ನಂತರ ಜನರು ನಿಟ್ಟುಸಿರು ಬಿಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT