<p><strong>ಮಡಿಕೇರಿ:</strong> ನಕ್ಸಲರು ಇತರರಂತೆ ಬದುಕು ಕಟ್ಟಿಕೊಳ್ಳಲು ಬಯಸಿ ಶರಣಾದರೆ, ಸರ್ಕಾರದ ಜತೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದರು.<br /> <br /> ನಕ್ಸಲರು ಭೇಟಿ ನೀಡಿದ್ದ ಕಾಲೂರಿಗೆ ಬುಧವಾರ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಅವರು ತೆರಳಿ ಕನ್ನಿಕಂಡ ಪಳಂಗಪ್ಪ ಮತ್ತು ಕಾವೇರಿ ಅವರ ಮನೆಯವರಿಗೆ ಧೈರ್ಯ ತುಂಬಿದರು. <br /> <br /> ಯಾವುದೇ ಕಾರಣಕ್ಕೂ ನಕ್ಸಲರಿಗೆ ಹೆದರುವ ಅಗತ್ಯವಿಲ್ಲ. ನಕ್ಸಲರೆಂದು ಖಚಿತವಾದರೆ ಆತ್ಮ ರಕ್ಷಣೆಗಾಗಿ ತಮ್ಮಲ್ಲಿರುವ ಬಂದೂಕನ್ನು ಬಳಸಿ ಎಂದು ಸಲಹೆ ನೀಡಿದರು.<br /> <br /> ಯಾವುದೇ ತೊಂದರೆ ಉಂಟಾದಲ್ಲಿ ದೂರವಾಣಿ ಮೂಲಕ ಪೊಲೀಸರಿಗೆ ಸುದ್ದಿ ತಿಳಿಸಬೇಕು. ನಕ್ಸಲ್ ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಕೊಡಗಿನಲ್ಲಿ ಅವಕಾಶವಿಲ್ಲ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಪೊಲೀಸರು ತಮ್ಮ ಕಾರ್ಯಾಚರಣೆ ಮುಂದುವರಿಸಿ ನಕ್ಸಲರನ್ನು ಸೆದೆಬಡಿಯುವುದಾಗಿ ಎಚ್ಚರಿಕೆ ನೀಡಿದರು. <br /> <br /> ನಕ್ಸಲರು ಭೇಟಿ ನೀಡಿದ ಮನೆಯ ಮಾಲೀಕರಾದ ಕಾವೇರಿ ಮತ್ತು ಪೂವಮ್ಮ ಕುಟುಂಬದವರಿಂದ ಸಚಿವರು ಮಾಹಿತಿ ಪಡೆದರು. <br /> <br /> ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಶಿವಪ್ಪ, ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ನಗರಸಭೆ ಸದಸ್ಯ ಪಿ.ಡಿ.ಪೊನ್ನಪ್ಪ, ಸುಭಾಷ್, ಪೊಲೀಸ್ ಇನ್ಸ್ಪೆಕ್ಟರ್ ಶ್ರಿಕಾಂತ್ ಇತರರು ಇದ್ದರು.</p>.<p><strong>`ಬಂದೂಕು ನೋಡಿ ಭಯವಾಯಿತು~</strong><br /> ಸೋಮವಾರ ಸಂಜೆ ಸುಮಾರು 5 ರಿಂದ 6 ಗಂಟೆ ಸಮಯದಲ್ಲಿ ಮೂವರು ಯುವಕರು ಮತ್ತು ಒಬ್ಬ ಯುವತಿ ಮನೆಯ ಬಳಿ ಬಂದಿದ್ದರು. ಹಸಿರು ಮತ್ತು ಕಪ್ಪು ಬಣ್ಣ ಮಿಶ್ರಿತ ಉಡುಪು ಧರಿಸಿದ್ದರು.<br /> <br /> ಮನೆಯ್ಲ್ಲಲಿ ಎಷ್ಟು ಜನ ವಾಸವಾಗಿದ್ದೀರಿ?ಎಂದು ಇತರ ಮಾಹಿತಿ ಪಡೆದು, ಹಸಿವಾಗುತ್ತಿದೆ ಊಟ ಕೊಡಿ ಎಂದರು. ಆದರೆ ಆ ನಾಲ್ಕು ನಕ್ಸಲರ ಬಳಿ ಬಂದೂಕು ಇತ್ತು. ಅದನ್ನು ಕಂಡು ನನಗೆ ಭಯವಾಗುತ್ತಿತ್ತು ಎಂದು ಮನೆಯ ಒಡತಿ ಪೂವಮ್ಮ ಅಳಲು ತೋಡಿಕೊಂಡರು.<br /> <strong><br /> `ನಮಗೆ ಸೂಕ್ತ ರಕ್ಷಣೆ ಕೊಡಿ~<br /> </strong>ಪಕ್ಕದ ಮನೆಯವರು ಊಟ ಹಾಕಲು ಹಿಂಜರಿದಾಗ, ನಮ್ಮ ಮನೆಯ ಬಳಿ ಬಂದು ಅಕ್ಕಿ, ಬೇಳೆ, ಉಪ್ಪು ಹಾಗೂ ಮತ್ತಿತರ ಪದಾರ್ಥಗಳನ್ನು ಪಡೆದುಕೊಂಡರು. <br /> <br /> ಗ್ರಾಮದ ಮಾಹಿತಿಯನ್ನು ಕಲೆ ಹಾಕುವ ನಿಟ್ಟಿನಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದರು. ಆ ಸಂದರ್ಭ ಮನೆಯಲ್ಲಿ ಯಾರು ಇಲ್ಲದ ಕಾರಣ ತುಂಬಾ ಭಯವಾಗುತ್ತಿತ್ತು. ನಮಗೆ ರಕ್ಷಣೆ ಬೇಕಾಗಿದೆ ಎಂದು ಮತ್ತೊಂದು ಮನೆಯವರಾದ ಕಾವೇರಿ ಅವರು ಕೋರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ನಕ್ಸಲರು ಇತರರಂತೆ ಬದುಕು ಕಟ್ಟಿಕೊಳ್ಳಲು ಬಯಸಿ ಶರಣಾದರೆ, ಸರ್ಕಾರದ ಜತೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದರು.<br /> <br /> ನಕ್ಸಲರು ಭೇಟಿ ನೀಡಿದ್ದ ಕಾಲೂರಿಗೆ ಬುಧವಾರ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಅವರು ತೆರಳಿ ಕನ್ನಿಕಂಡ ಪಳಂಗಪ್ಪ ಮತ್ತು ಕಾವೇರಿ ಅವರ ಮನೆಯವರಿಗೆ ಧೈರ್ಯ ತುಂಬಿದರು. <br /> <br /> ಯಾವುದೇ ಕಾರಣಕ್ಕೂ ನಕ್ಸಲರಿಗೆ ಹೆದರುವ ಅಗತ್ಯವಿಲ್ಲ. ನಕ್ಸಲರೆಂದು ಖಚಿತವಾದರೆ ಆತ್ಮ ರಕ್ಷಣೆಗಾಗಿ ತಮ್ಮಲ್ಲಿರುವ ಬಂದೂಕನ್ನು ಬಳಸಿ ಎಂದು ಸಲಹೆ ನೀಡಿದರು.<br /> <br /> ಯಾವುದೇ ತೊಂದರೆ ಉಂಟಾದಲ್ಲಿ ದೂರವಾಣಿ ಮೂಲಕ ಪೊಲೀಸರಿಗೆ ಸುದ್ದಿ ತಿಳಿಸಬೇಕು. ನಕ್ಸಲ್ ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಕೊಡಗಿನಲ್ಲಿ ಅವಕಾಶವಿಲ್ಲ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಪೊಲೀಸರು ತಮ್ಮ ಕಾರ್ಯಾಚರಣೆ ಮುಂದುವರಿಸಿ ನಕ್ಸಲರನ್ನು ಸೆದೆಬಡಿಯುವುದಾಗಿ ಎಚ್ಚರಿಕೆ ನೀಡಿದರು. <br /> <br /> ನಕ್ಸಲರು ಭೇಟಿ ನೀಡಿದ ಮನೆಯ ಮಾಲೀಕರಾದ ಕಾವೇರಿ ಮತ್ತು ಪೂವಮ್ಮ ಕುಟುಂಬದವರಿಂದ ಸಚಿವರು ಮಾಹಿತಿ ಪಡೆದರು. <br /> <br /> ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಶಿವಪ್ಪ, ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ನಗರಸಭೆ ಸದಸ್ಯ ಪಿ.ಡಿ.ಪೊನ್ನಪ್ಪ, ಸುಭಾಷ್, ಪೊಲೀಸ್ ಇನ್ಸ್ಪೆಕ್ಟರ್ ಶ್ರಿಕಾಂತ್ ಇತರರು ಇದ್ದರು.</p>.<p><strong>`ಬಂದೂಕು ನೋಡಿ ಭಯವಾಯಿತು~</strong><br /> ಸೋಮವಾರ ಸಂಜೆ ಸುಮಾರು 5 ರಿಂದ 6 ಗಂಟೆ ಸಮಯದಲ್ಲಿ ಮೂವರು ಯುವಕರು ಮತ್ತು ಒಬ್ಬ ಯುವತಿ ಮನೆಯ ಬಳಿ ಬಂದಿದ್ದರು. ಹಸಿರು ಮತ್ತು ಕಪ್ಪು ಬಣ್ಣ ಮಿಶ್ರಿತ ಉಡುಪು ಧರಿಸಿದ್ದರು.<br /> <br /> ಮನೆಯ್ಲ್ಲಲಿ ಎಷ್ಟು ಜನ ವಾಸವಾಗಿದ್ದೀರಿ?ಎಂದು ಇತರ ಮಾಹಿತಿ ಪಡೆದು, ಹಸಿವಾಗುತ್ತಿದೆ ಊಟ ಕೊಡಿ ಎಂದರು. ಆದರೆ ಆ ನಾಲ್ಕು ನಕ್ಸಲರ ಬಳಿ ಬಂದೂಕು ಇತ್ತು. ಅದನ್ನು ಕಂಡು ನನಗೆ ಭಯವಾಗುತ್ತಿತ್ತು ಎಂದು ಮನೆಯ ಒಡತಿ ಪೂವಮ್ಮ ಅಳಲು ತೋಡಿಕೊಂಡರು.<br /> <strong><br /> `ನಮಗೆ ಸೂಕ್ತ ರಕ್ಷಣೆ ಕೊಡಿ~<br /> </strong>ಪಕ್ಕದ ಮನೆಯವರು ಊಟ ಹಾಕಲು ಹಿಂಜರಿದಾಗ, ನಮ್ಮ ಮನೆಯ ಬಳಿ ಬಂದು ಅಕ್ಕಿ, ಬೇಳೆ, ಉಪ್ಪು ಹಾಗೂ ಮತ್ತಿತರ ಪದಾರ್ಥಗಳನ್ನು ಪಡೆದುಕೊಂಡರು. <br /> <br /> ಗ್ರಾಮದ ಮಾಹಿತಿಯನ್ನು ಕಲೆ ಹಾಕುವ ನಿಟ್ಟಿನಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದರು. ಆ ಸಂದರ್ಭ ಮನೆಯಲ್ಲಿ ಯಾರು ಇಲ್ಲದ ಕಾರಣ ತುಂಬಾ ಭಯವಾಗುತ್ತಿತ್ತು. ನಮಗೆ ರಕ್ಷಣೆ ಬೇಕಾಗಿದೆ ಎಂದು ಮತ್ತೊಂದು ಮನೆಯವರಾದ ಕಾವೇರಿ ಅವರು ಕೋರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>