<p><strong>ಕೆಜಿಎಫ್: </strong>‘ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟುವ ಮಾನವ ಬೆಳೆಯುತ್ತ ಸ್ವಾರ್ಥಿಯಾಗಿ ಬೆಳೆಯದೆ ವಿಶ್ವಮಾನವನಾಗಿ ಬೆಳೆಯಬೇಕು’ ಎಂದು ಕನ್ನಡ ಶಿಕ್ಷಕ ಎಚ್. ನಾಗರಾಜ್ ಹೇಳಿದರು.</p>.<p>ಬೆಮಲ್ ನಗರದಲ್ಲಿ ಬುಧವಾರ ನಡೆದ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಮನುಷ್ಯ ದೊಡ್ಡವನಾಗಿ ಬೆಳೆಯುತ್ತ ಸಮಾಜದಲ್ಲಿ ಸ್ವಾರ್ಥಿಯಾಗಿ, ಅಲ್ಪಬುದ್ಧಿಯವನಾಗುತ್ತಾನೆ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯದ ಪೂರ್ಣ ದೃಷ್ಟಿ ಎಂಬ ಪಂಚಸೂತ್ರಗಳನ್ನು ಅಳವಡಿಸಿಕೊಂಡರೆ ವಿಶ್ವ ಮಾನವನಾಗಿ ರೂಪಿತವಾಗಬಹುದು ಎಂದು ಹೇಳಿದರು.</p>.<p>ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ಅಚ್ಯುತ ಮಾತನಾಡಿ, ಕುವೆಂಪು ಜನ್ಮ ದಿನಾಚರಣೆ ಸಂದರ್ಭದಲ್ಲಿ ಅವರ ವಿಚಾರಗಳನ್ನು ತಿಳಿಯಬೇಕು. ಅವರ ವಿಚಾರವನ್ನು ಮೈಗೂಡಿಸಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣ ಮಾಡುವುದಕ್ಕೆ ಕಂಕಣ ತೊಡಬೇಕು ಎಂದರು.</p>.<p>ವಿದ್ಯಾರ್ಥಿಗಳು ಕುವೆಂಪು, ಶಿವರಾಮ ಕಾರಂತ ಅವರ ಕೃತಿಗಳನ್ನು ಓದಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.</p>.<p>ಶಿವಪ್ರಸಾದ್ ರೈ, ನೀತಾರೈ ಕುಟುಂಬದವರಿಗೆ ಅಭಿನಂದಿಸಲಾಯಿತು. ಅಲಿಕ್, ರವೀಂದ್ರ, ವಿಶಾಲಾಕ್ಷಿ ಇದ್ದರು. ಜನಾರ್ದನ್ ಮತ್ತು ಶರಣಪ್ಪ ಕುವೆಂಪು ಅವರ ಕವನಗಳನ್ನು ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಜಿಎಫ್: </strong>‘ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟುವ ಮಾನವ ಬೆಳೆಯುತ್ತ ಸ್ವಾರ್ಥಿಯಾಗಿ ಬೆಳೆಯದೆ ವಿಶ್ವಮಾನವನಾಗಿ ಬೆಳೆಯಬೇಕು’ ಎಂದು ಕನ್ನಡ ಶಿಕ್ಷಕ ಎಚ್. ನಾಗರಾಜ್ ಹೇಳಿದರು.</p>.<p>ಬೆಮಲ್ ನಗರದಲ್ಲಿ ಬುಧವಾರ ನಡೆದ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಮನುಷ್ಯ ದೊಡ್ಡವನಾಗಿ ಬೆಳೆಯುತ್ತ ಸಮಾಜದಲ್ಲಿ ಸ್ವಾರ್ಥಿಯಾಗಿ, ಅಲ್ಪಬುದ್ಧಿಯವನಾಗುತ್ತಾನೆ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯದ ಪೂರ್ಣ ದೃಷ್ಟಿ ಎಂಬ ಪಂಚಸೂತ್ರಗಳನ್ನು ಅಳವಡಿಸಿಕೊಂಡರೆ ವಿಶ್ವ ಮಾನವನಾಗಿ ರೂಪಿತವಾಗಬಹುದು ಎಂದು ಹೇಳಿದರು.</p>.<p>ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ಅಚ್ಯುತ ಮಾತನಾಡಿ, ಕುವೆಂಪು ಜನ್ಮ ದಿನಾಚರಣೆ ಸಂದರ್ಭದಲ್ಲಿ ಅವರ ವಿಚಾರಗಳನ್ನು ತಿಳಿಯಬೇಕು. ಅವರ ವಿಚಾರವನ್ನು ಮೈಗೂಡಿಸಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣ ಮಾಡುವುದಕ್ಕೆ ಕಂಕಣ ತೊಡಬೇಕು ಎಂದರು.</p>.<p>ವಿದ್ಯಾರ್ಥಿಗಳು ಕುವೆಂಪು, ಶಿವರಾಮ ಕಾರಂತ ಅವರ ಕೃತಿಗಳನ್ನು ಓದಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.</p>.<p>ಶಿವಪ್ರಸಾದ್ ರೈ, ನೀತಾರೈ ಕುಟುಂಬದವರಿಗೆ ಅಭಿನಂದಿಸಲಾಯಿತು. ಅಲಿಕ್, ರವೀಂದ್ರ, ವಿಶಾಲಾಕ್ಷಿ ಇದ್ದರು. ಜನಾರ್ದನ್ ಮತ್ತು ಶರಣಪ್ಪ ಕುವೆಂಪು ಅವರ ಕವನಗಳನ್ನು ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>