<p><strong>ಕೋಲಾರ:</strong> ಅಭಿವೃದ್ಧಿ ಕಾಮಗಾರಿಗಳ ಬಿಲ್ ಬಾಕಿ ಉಳಿಸಿಕೊಂಡಿರುವ ಸಂಬಂಧ ಜಿಲ್ಲಾಧಿಕಾರಿ ಜೆ.ಮಂಜುನಾಥ್ ನಗರಸಭೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.</p>.<p>ನಗರಸಭೆಯ ಖರ್ಚು ವೆಚ್ಚ ಸಂಬಂಧ ಇಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಈಗಾಗಲೇ ಪೂರ್ಣಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಿಲ್ನ ಹಣವನ್ನು ಆಯಾ ವರ್ಷದಲ್ಲೇ ಪಾವತಿಸಲು ಏನು ಸಮಸ್ಯೆ?’ ಎಂದು ಪ್ರಶ್ನಿಸಿದರು.</p>.<p>‘ಖರ್ಚು ವೆಚ್ಚದ ಬಗ್ಗೆ ಪ್ರತಿ ತಿಂಗಳು ಸಭೆ ನಡೆಸಿದ್ದರೆ ಸಮಸ್ಯೆ ಎದುರಾಗುತ್ತಿರಲಿಲ್ಲ. ಈಗ ಹಳೆ ಕಾಮಗಾರಿಗಳ ಬಿಲ್ಗೆ ಎಲ್ಲಿಂದ ದುಡ್ಡು ತರಬೇಕು ಹೇಳಿ. ಸಮರ್ಪಕವಾಗಿ ತೆರಿಗೆ ವಸೂಲಿ ಮಾಡಿಲ್ಲ. ನಿಮಗೆ ಸಮಯಕ್ಕೆ ಸರಿಯಾಗಿ ಸಂಬಳ ಮಾತ್ರ ಬೇಕು’ ಎಂದು ಗುಡುಗಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಟಿ.ಆರ್. ಸತ್ಯನಾರಾಯಣ, ‘ಈ ಹಿಂದೆ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಆಗಿನ ಆಯುಕ್ತರು ಬಿಲ್ ಪಾವತಿ ಮಾಡಿಲ್ಲ. ಗುತ್ತಿಗೆದಾರರು ಈಗ ಬಂದು ಬಿಲ್ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಸುಮಾರು ₹ 2 ಕೋಟಿ ಬಿಲ್ ಬಾಕಿಯಿದೆ’ ಎಂದು ತಿಳಿಸಿದರು.</p>.<p>‘ವಾಹನಗಳ ಡೀಸೆಲ್ಗೆ ಹಾಗೂ ಸಿಬ್ಬಂದಿಯ ವೇತನ ಪಾವತಿಗೆ ತಿಂಗಳಿಗೆ ₹ 30 ಲಕ್ಷಕ್ಕೂ ಹೆಚ್ಚು ಹಣ ಬೇಕು. ನಗರಸಭೆಯಲ್ಲಿ 9 ನೀರಿನ ಟ್ಯಾಂಕರ್ ಹಾಗೂ 18 ಕಸ ವಿಲೇವಾರಿ ವಾಹನಗಳಿದ್ದು, ಡೀಸೆಲ್ಗೆ ₹ 4 ಲಕ್ಷ ಬೇಕಾಗುತ್ತದೆ, ಬೀದಿ ದೀಪ ಹಾಗೂ ಕೊಳವೆ ಬಾವಿಗಳ ಪಂಪ್ ಮೋಟರ್ ದುರಸ್ತಿಗೂ ಹಣ ವೆಚ್ಚವಾಗುತ್ತಿದೆ. ಈ ಹಿಂದೆ ಮಾಡಿರುವ ಸಣ್ಣಪುಟ್ಟ ಕೆಲಸಗಳ ಬಿಲ್ ಬಾಕಿಯಿದೆ’ ಎಂದು ವಿವರಿಸಿದರು.</p>.<p><strong>ಜನಪರ ಕೆಲಸ ಮಾಡಿ:</strong> ‘ನಗರೋತ್ಥಾನ, ಅಮೃತ್ ಸಿಟಿ ಯೋಜನೆಯಡಿ ಅಗತ್ಯ ಇರುವ ಕಡೆ ಪೈಪ್ಲೈನ್ ಮಾಡಿಸಬಹುದಲ್ಲವೇ? ಕೆಲಸ ನಡೆಯದಿದ್ದರೂ ಬಿಲ್ ಪಾವತಿಸಲು ಸಾಧ್ಯವಾಗುತ್ತದೆಯೇ? ಈ ಹಿಂದೆ ಚುನಾಯಿತ ಮಂಡಳಿಯಿದ್ದ ಕಾರಣ ಕೆಲಸ ಮಾಡಲು ಒತ್ತಡ ಹೆಚ್ಚಿತ್ತು. ಈಗ ಆಡಳಿತಾಧಿಕಾರಿಯೇ ಅಧ್ಯಕ್ಷರಾಗಿದ್ದು, ಈಗಲಾದರೂ ಜನಪರ ಕೆಲಸ ಮಾಡಿ’ ಎಂದು ಜಿಲ್ಲಾಧಿಕಾರಿ ನಗರಸಭೆ ಸಿಬ್ಬಂದಿಗೆ ತಾಕೀತು ಮಾಡಿದರು.</p>.<p>‘ನಗರದಲ್ಲಿ 35 ವಾರ್ಡ್ಗಳಿದ್ದು, ರಾಜ್ಯ ಹಣಕಾಸು ನಿಧಿಯಲ್ಲಿ (ಎಸ್ಎಫ್ಸಿ) ₹ 70 ಸಾವಿರದಿಂದ ₹ 80 ಸಾವಿರವರೆಗೆ ವಿದ್ಯುತ್ ಬಿಲ್ ಪಾವತಿಯಾಗುತ್ತಿದೆ. ಕೊಳವೆ ಬಾವಿ ಸೇರಿದಂತೆ ಎಷ್ಟು ವಿದ್ಯುತ್ ಸಂಪರ್ಕಗಳಿವೆ?’ ಎಂದು ಕೇಳಿದರು.</p>.<p>ಇದಕ್ಕೆ ಉತ್ತರಿಸಿದ ನಗರಸಭೆ ಎಂಜಿನಿಯರ್ ಸುಧಾಕರ್ ಶೆಟ್ಟಿ, ‘35 ವಾರ್ಡ್ನಲ್ಲಿ 300 ಕೊಳವೆ ಬಾವಿಗಳಿವೆ. ಈ ಪೈಕಿ 120 ಕೊಳವೆ ಬಾವಿಗಳು ಕಾರ್ಯ ನಿರ್ವಹಿಸುತ್ತಿವೆ. ತಿಂಗಳಿಗೆ 2ರಿಂದ 3 ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿದೆ. 8 ಸಾವಿರ ಬೀದಿ ದೀಪಗಳಿವೆ’ ಎಂದು ಮಾಹಿತಿ ನೀಡಿದರು.</p>.<p><strong>ಜಿಪಿಎಸ್ ಕಡ್ಡಾಯ</strong>: ‘ಕೊಳವೆ ಬಾವಿಗಳಲ್ಲಿ ನೀರು ಬತ್ತಿದರೆ ವಿದ್ಯುತ್ ಬಳಕೆ ಪ್ರಮಾಣ ಕಡಿಮೆಯಾಗುತ್ತದೆಯಲ್ಲವೇ? ಹೊಸ ಕೊಳವೆ ಬಾವಿಗೆ ಬಿಲ್ ಪಾವತಿಸಲು ನಿಯಮಗಳಿವೆ. ಮೂರು ಹಂತದ ಫೋಟೊ ಹಾಗೂ ಜಿಪಿಎಸ್ ಕಡ್ಡಾಯವಾಗಿ ಇರಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.</p>.<p>‘ಕೊಳವೆ ಬಾವಿ ಕೊರೆಯುವ ಸಂದರ್ಭದಲ್ಲಿ ಎಂಜಿನಿಯರ್ಗಳು ಸ್ಥಳಕ್ಕೆ ಹೋಗುವುದಿಲ್ಲ ಎಂದು ದೂರು ಬಂದಿವೆ. ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದ್ದರೂ ಬಿಲ್ ಬಿಡುಗಡೆಗೆ ಶಿಫಾರಸ್ಸು ಮಾಡುತ್ತೀರಿ. ಸರಿಯಾಗಿ ಕೆಲಸ ಮಾಡಬೇಕೆಂಬ ಜವಾಬ್ದಾರಿ ಇಲ್ಲವೇ’ ಎಂದು ಕೆಂಡಾಮಂಡಲರಾದರು.</p>.<p>‘ನಗರದ ಕೆವಿಎಸ್ ಕಲ್ಯಾಣ ಮಂಟಪದ ಬಳಿ ರಾಜಕಾಲುವೆಯಲ್ಲಿ ಮ್ಯಾನ್ಹೋಲ್ ಪೈಪ್ಲೈನ್ಗೆ ಹಾನಿ ಮಾಡಿರುವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿ ಮತ್ತು ಪೈಪ್ಲೈನ್ ದುರಸ್ತಿ ಮಾಡಿಸಿ’ ಎಂದು ಆದೇಶಿಸಿದರು.</p>.<p>ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ಅಭಿವೃದ್ಧಿ ಕಾಮಗಾರಿಗಳ ಬಿಲ್ ಬಾಕಿ ಉಳಿಸಿಕೊಂಡಿರುವ ಸಂಬಂಧ ಜಿಲ್ಲಾಧಿಕಾರಿ ಜೆ.ಮಂಜುನಾಥ್ ನಗರಸಭೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.</p>.<p>ನಗರಸಭೆಯ ಖರ್ಚು ವೆಚ್ಚ ಸಂಬಂಧ ಇಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಈಗಾಗಲೇ ಪೂರ್ಣಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಿಲ್ನ ಹಣವನ್ನು ಆಯಾ ವರ್ಷದಲ್ಲೇ ಪಾವತಿಸಲು ಏನು ಸಮಸ್ಯೆ?’ ಎಂದು ಪ್ರಶ್ನಿಸಿದರು.</p>.<p>‘ಖರ್ಚು ವೆಚ್ಚದ ಬಗ್ಗೆ ಪ್ರತಿ ತಿಂಗಳು ಸಭೆ ನಡೆಸಿದ್ದರೆ ಸಮಸ್ಯೆ ಎದುರಾಗುತ್ತಿರಲಿಲ್ಲ. ಈಗ ಹಳೆ ಕಾಮಗಾರಿಗಳ ಬಿಲ್ಗೆ ಎಲ್ಲಿಂದ ದುಡ್ಡು ತರಬೇಕು ಹೇಳಿ. ಸಮರ್ಪಕವಾಗಿ ತೆರಿಗೆ ವಸೂಲಿ ಮಾಡಿಲ್ಲ. ನಿಮಗೆ ಸಮಯಕ್ಕೆ ಸರಿಯಾಗಿ ಸಂಬಳ ಮಾತ್ರ ಬೇಕು’ ಎಂದು ಗುಡುಗಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಟಿ.ಆರ್. ಸತ್ಯನಾರಾಯಣ, ‘ಈ ಹಿಂದೆ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಆಗಿನ ಆಯುಕ್ತರು ಬಿಲ್ ಪಾವತಿ ಮಾಡಿಲ್ಲ. ಗುತ್ತಿಗೆದಾರರು ಈಗ ಬಂದು ಬಿಲ್ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಸುಮಾರು ₹ 2 ಕೋಟಿ ಬಿಲ್ ಬಾಕಿಯಿದೆ’ ಎಂದು ತಿಳಿಸಿದರು.</p>.<p>‘ವಾಹನಗಳ ಡೀಸೆಲ್ಗೆ ಹಾಗೂ ಸಿಬ್ಬಂದಿಯ ವೇತನ ಪಾವತಿಗೆ ತಿಂಗಳಿಗೆ ₹ 30 ಲಕ್ಷಕ್ಕೂ ಹೆಚ್ಚು ಹಣ ಬೇಕು. ನಗರಸಭೆಯಲ್ಲಿ 9 ನೀರಿನ ಟ್ಯಾಂಕರ್ ಹಾಗೂ 18 ಕಸ ವಿಲೇವಾರಿ ವಾಹನಗಳಿದ್ದು, ಡೀಸೆಲ್ಗೆ ₹ 4 ಲಕ್ಷ ಬೇಕಾಗುತ್ತದೆ, ಬೀದಿ ದೀಪ ಹಾಗೂ ಕೊಳವೆ ಬಾವಿಗಳ ಪಂಪ್ ಮೋಟರ್ ದುರಸ್ತಿಗೂ ಹಣ ವೆಚ್ಚವಾಗುತ್ತಿದೆ. ಈ ಹಿಂದೆ ಮಾಡಿರುವ ಸಣ್ಣಪುಟ್ಟ ಕೆಲಸಗಳ ಬಿಲ್ ಬಾಕಿಯಿದೆ’ ಎಂದು ವಿವರಿಸಿದರು.</p>.<p><strong>ಜನಪರ ಕೆಲಸ ಮಾಡಿ:</strong> ‘ನಗರೋತ್ಥಾನ, ಅಮೃತ್ ಸಿಟಿ ಯೋಜನೆಯಡಿ ಅಗತ್ಯ ಇರುವ ಕಡೆ ಪೈಪ್ಲೈನ್ ಮಾಡಿಸಬಹುದಲ್ಲವೇ? ಕೆಲಸ ನಡೆಯದಿದ್ದರೂ ಬಿಲ್ ಪಾವತಿಸಲು ಸಾಧ್ಯವಾಗುತ್ತದೆಯೇ? ಈ ಹಿಂದೆ ಚುನಾಯಿತ ಮಂಡಳಿಯಿದ್ದ ಕಾರಣ ಕೆಲಸ ಮಾಡಲು ಒತ್ತಡ ಹೆಚ್ಚಿತ್ತು. ಈಗ ಆಡಳಿತಾಧಿಕಾರಿಯೇ ಅಧ್ಯಕ್ಷರಾಗಿದ್ದು, ಈಗಲಾದರೂ ಜನಪರ ಕೆಲಸ ಮಾಡಿ’ ಎಂದು ಜಿಲ್ಲಾಧಿಕಾರಿ ನಗರಸಭೆ ಸಿಬ್ಬಂದಿಗೆ ತಾಕೀತು ಮಾಡಿದರು.</p>.<p>‘ನಗರದಲ್ಲಿ 35 ವಾರ್ಡ್ಗಳಿದ್ದು, ರಾಜ್ಯ ಹಣಕಾಸು ನಿಧಿಯಲ್ಲಿ (ಎಸ್ಎಫ್ಸಿ) ₹ 70 ಸಾವಿರದಿಂದ ₹ 80 ಸಾವಿರವರೆಗೆ ವಿದ್ಯುತ್ ಬಿಲ್ ಪಾವತಿಯಾಗುತ್ತಿದೆ. ಕೊಳವೆ ಬಾವಿ ಸೇರಿದಂತೆ ಎಷ್ಟು ವಿದ್ಯುತ್ ಸಂಪರ್ಕಗಳಿವೆ?’ ಎಂದು ಕೇಳಿದರು.</p>.<p>ಇದಕ್ಕೆ ಉತ್ತರಿಸಿದ ನಗರಸಭೆ ಎಂಜಿನಿಯರ್ ಸುಧಾಕರ್ ಶೆಟ್ಟಿ, ‘35 ವಾರ್ಡ್ನಲ್ಲಿ 300 ಕೊಳವೆ ಬಾವಿಗಳಿವೆ. ಈ ಪೈಕಿ 120 ಕೊಳವೆ ಬಾವಿಗಳು ಕಾರ್ಯ ನಿರ್ವಹಿಸುತ್ತಿವೆ. ತಿಂಗಳಿಗೆ 2ರಿಂದ 3 ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿದೆ. 8 ಸಾವಿರ ಬೀದಿ ದೀಪಗಳಿವೆ’ ಎಂದು ಮಾಹಿತಿ ನೀಡಿದರು.</p>.<p><strong>ಜಿಪಿಎಸ್ ಕಡ್ಡಾಯ</strong>: ‘ಕೊಳವೆ ಬಾವಿಗಳಲ್ಲಿ ನೀರು ಬತ್ತಿದರೆ ವಿದ್ಯುತ್ ಬಳಕೆ ಪ್ರಮಾಣ ಕಡಿಮೆಯಾಗುತ್ತದೆಯಲ್ಲವೇ? ಹೊಸ ಕೊಳವೆ ಬಾವಿಗೆ ಬಿಲ್ ಪಾವತಿಸಲು ನಿಯಮಗಳಿವೆ. ಮೂರು ಹಂತದ ಫೋಟೊ ಹಾಗೂ ಜಿಪಿಎಸ್ ಕಡ್ಡಾಯವಾಗಿ ಇರಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.</p>.<p>‘ಕೊಳವೆ ಬಾವಿ ಕೊರೆಯುವ ಸಂದರ್ಭದಲ್ಲಿ ಎಂಜಿನಿಯರ್ಗಳು ಸ್ಥಳಕ್ಕೆ ಹೋಗುವುದಿಲ್ಲ ಎಂದು ದೂರು ಬಂದಿವೆ. ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದ್ದರೂ ಬಿಲ್ ಬಿಡುಗಡೆಗೆ ಶಿಫಾರಸ್ಸು ಮಾಡುತ್ತೀರಿ. ಸರಿಯಾಗಿ ಕೆಲಸ ಮಾಡಬೇಕೆಂಬ ಜವಾಬ್ದಾರಿ ಇಲ್ಲವೇ’ ಎಂದು ಕೆಂಡಾಮಂಡಲರಾದರು.</p>.<p>‘ನಗರದ ಕೆವಿಎಸ್ ಕಲ್ಯಾಣ ಮಂಟಪದ ಬಳಿ ರಾಜಕಾಲುವೆಯಲ್ಲಿ ಮ್ಯಾನ್ಹೋಲ್ ಪೈಪ್ಲೈನ್ಗೆ ಹಾನಿ ಮಾಡಿರುವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿ ಮತ್ತು ಪೈಪ್ಲೈನ್ ದುರಸ್ತಿ ಮಾಡಿಸಿ’ ಎಂದು ಆದೇಶಿಸಿದರು.</p>.<p>ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>