<p><strong>ಬಂಗಾರಪೇಟೆ</strong>: ಬೆಳಕಿನ ಹಬ್ಬ ದೀಪಾವಳಿ ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಣೆ ಮಾಡಲು ತಾಲ್ಲೂಕಿನ ಜನರು ಭರ್ಜರಿಯಾಗಿ ಸಿದ್ಧತೆ ನಡೆಸಿದ್ದಾರೆ. ವಸ್ತುಗಳ ಬೆಲೆ ಏರಿಕೆ ನಡುವೆಯೂ ಗೃಹಿಣಿಯರು ಮತ್ತು ಇತರ ನಾಗರಿಕರು ಹಸಿರು ಪಟಾಕಿ, ದೀಪಗಳು, ಹಣ್ಣು, ಸಿಹಿ ತಿನಿಸುಗಳನ್ನು ಖರೀದಿಸುತ್ತಿರುವುದು ಕಂಡುಬಂದಿತು.</p>.<p>ಹೂವು, ಹಣ್ಣಿನ ಬೆಲೆ ದುಬಾರಿ: ದಸರಾ ಹಬ್ಬದ ನಂತರ ಕೆಲವು ದಿನಗಳ ಕಾಲ ಹೂವಿನ ಬೆಲೆ ಇಳಿಮುಖವಾಗಿತ್ತು. ಆದರೆ, ದೀಪಾವಳಿ ಕಾರಣಕ್ಕೆ ಮತ್ತೆ ಹೂವುಗಳ ಬೆಲೆ ಏರಿಕೆಯಾಗಿದ್ದು, ಸೇವಂತಿ ಹೂವು ಕೆ.ಜಿಗೆ ₹200–₹250, ಗುಲಾಬಿ ₹200, ಮಲ್ಲಿಗೆ ₹600, ಸುಗಂಧರಾಜ ₹200, ಚೆಂಡುಹೂವು ₹50ಕ್ಕೆ ಮಾರಾಟವಾದವು. </p>.<p>ಒಂದು ಜೋಡಿ ಬಾಳೆ ದಿಂಡಿಗೆ ಕೆಲವೆಡೆ ₹20 ಇದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ₹50ಕ್ಕೆ ಮಾರಾಟವಾಗುತ್ತಿತ್ತು. ಹಣ್ಣುಗಳ ಬೆಲೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿತ್ತು. ಸೇಬು ಕೆ.ಜಿಗೆ ₹160–₹200ರವರೆಗೆ ಮಾರಾಟವಾಗುತ್ತಿತ್ತು. ಬಾಳೆಹಣ್ಣು ₹80–₹100, ಮೂಸಂಬಿ ₹80–90, ದಾಳಿಂಬೆ ದರವು ₹160–200ಕ್ಕೆ ತಲುಪಿತ್ತು.</p>.<p>ದೀಪಾವಳಿ ಹಬ್ಬಕ್ಕಾಗಿ ಮಣ್ಣಿನಿಂದ ಮಾಡಿದ ವಿಭಿನ್ನ ರೀತಿಯ ಅಲಂಕಾರಿಕ ದೀಪಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದಿದ್ದರು. ಸಣ್ಣ ಗಾತ್ರದ ಮಣ್ಣಿನ ದೀಪ ₹24 ಗಳಿದ್ದರೆ, ಗಾತ್ರಕ್ಕೆ ಅನುಗುಣವಾಗಿ ಒಂದು ಮಣ್ಣಿನ ದೀಪವು ಗರಿಷ್ಠ ₹50ವರೆಗೆ ಮಾರಾಟವಾಗುತ್ತಿದ್ದವು. ಅಷ್ಟೇ ಅಲ್ಲದೆ, ಬಟ್ಟೆ ಅಂಗಡಿಗಳಲ್ಲೂ ಜನಜಂಗುಳಿ ಕಂಡುಬಂದಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ</strong>: ಬೆಳಕಿನ ಹಬ್ಬ ದೀಪಾವಳಿ ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಣೆ ಮಾಡಲು ತಾಲ್ಲೂಕಿನ ಜನರು ಭರ್ಜರಿಯಾಗಿ ಸಿದ್ಧತೆ ನಡೆಸಿದ್ದಾರೆ. ವಸ್ತುಗಳ ಬೆಲೆ ಏರಿಕೆ ನಡುವೆಯೂ ಗೃಹಿಣಿಯರು ಮತ್ತು ಇತರ ನಾಗರಿಕರು ಹಸಿರು ಪಟಾಕಿ, ದೀಪಗಳು, ಹಣ್ಣು, ಸಿಹಿ ತಿನಿಸುಗಳನ್ನು ಖರೀದಿಸುತ್ತಿರುವುದು ಕಂಡುಬಂದಿತು.</p>.<p>ಹೂವು, ಹಣ್ಣಿನ ಬೆಲೆ ದುಬಾರಿ: ದಸರಾ ಹಬ್ಬದ ನಂತರ ಕೆಲವು ದಿನಗಳ ಕಾಲ ಹೂವಿನ ಬೆಲೆ ಇಳಿಮುಖವಾಗಿತ್ತು. ಆದರೆ, ದೀಪಾವಳಿ ಕಾರಣಕ್ಕೆ ಮತ್ತೆ ಹೂವುಗಳ ಬೆಲೆ ಏರಿಕೆಯಾಗಿದ್ದು, ಸೇವಂತಿ ಹೂವು ಕೆ.ಜಿಗೆ ₹200–₹250, ಗುಲಾಬಿ ₹200, ಮಲ್ಲಿಗೆ ₹600, ಸುಗಂಧರಾಜ ₹200, ಚೆಂಡುಹೂವು ₹50ಕ್ಕೆ ಮಾರಾಟವಾದವು. </p>.<p>ಒಂದು ಜೋಡಿ ಬಾಳೆ ದಿಂಡಿಗೆ ಕೆಲವೆಡೆ ₹20 ಇದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ₹50ಕ್ಕೆ ಮಾರಾಟವಾಗುತ್ತಿತ್ತು. ಹಣ್ಣುಗಳ ಬೆಲೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿತ್ತು. ಸೇಬು ಕೆ.ಜಿಗೆ ₹160–₹200ರವರೆಗೆ ಮಾರಾಟವಾಗುತ್ತಿತ್ತು. ಬಾಳೆಹಣ್ಣು ₹80–₹100, ಮೂಸಂಬಿ ₹80–90, ದಾಳಿಂಬೆ ದರವು ₹160–200ಕ್ಕೆ ತಲುಪಿತ್ತು.</p>.<p>ದೀಪಾವಳಿ ಹಬ್ಬಕ್ಕಾಗಿ ಮಣ್ಣಿನಿಂದ ಮಾಡಿದ ವಿಭಿನ್ನ ರೀತಿಯ ಅಲಂಕಾರಿಕ ದೀಪಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದಿದ್ದರು. ಸಣ್ಣ ಗಾತ್ರದ ಮಣ್ಣಿನ ದೀಪ ₹24 ಗಳಿದ್ದರೆ, ಗಾತ್ರಕ್ಕೆ ಅನುಗುಣವಾಗಿ ಒಂದು ಮಣ್ಣಿನ ದೀಪವು ಗರಿಷ್ಠ ₹50ವರೆಗೆ ಮಾರಾಟವಾಗುತ್ತಿದ್ದವು. ಅಷ್ಟೇ ಅಲ್ಲದೆ, ಬಟ್ಟೆ ಅಂಗಡಿಗಳಲ್ಲೂ ಜನಜಂಗುಳಿ ಕಂಡುಬಂದಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>