ಹೆಬ್ಬಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ಕೋಡಿಹಳ್ಳಿಯಲ್ಲಿ ಸುಮಾರು 1505ರಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗುವ ಕಲ್ಯಾಣಿ ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚಿ ಹೋಗಿ ಗುರುತೇ ಸಿಗದಂತಾಗಿತ್ತು. ಇದನ್ನರಿತ ಗ್ರಾಮ ಪಂಚಾಯಿತಿ ಸದಸ್ಯ ಕೆ. ವಿ.ನಾಗಾರ್ಜುನ, ನರೇಗಾ ಕಾಮಗಾರಿಯಲ್ಲಿ ಹಾಗೂ ಗ್ರಾಮಸ್ಥರ ಸಹಾಯ ಮತ್ತು ಸಹಕಾರದಿಂದ ಖರ್ಚು ವೆಚ್ಚಗಳನ್ನು ಭರಿಸಿ ವಿನಾಶದ ಅಂಚಿಗೆ ಸಿಲುಕಿದ್ದ ಕಲ್ಯಾಣಿಗೆ ಮತ್ತೆ ಮರು ಜೀವ ನೀಡಿದ್ದಾರೆ.