<p><strong>ಕೋಲಾರ:</strong> ಹೈಕಮಾಂಡ್ ಮಾತನಾಡಿಸಲು ಕೆಲ ಶಾಸಕರು ದೆಹಲಿಗೆ ಹೋಗಿರಬಹುದು. ನಮ್ಮ ಪಕ್ಷದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದು ಹೈಕಮಾಂಡ್ ಮಾತ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.</p><p>ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿಯಾಗಿ ಯಾರಿರಬೇಕು, ಯಾರನ್ನು ಇಳಿಸಬೇಕು ಎಂಬುದನ್ನು ನಿರ್ಧಾರ ಮಾಡುವವರು ದೊಡ್ಡವರು. ನಾನು, ಕೊತ್ತೂರು ಮಂಜುನಾಥ್, ರೂಪಕಲಾ ಶಶಿಧರ್ ಹೇಳಲು ಆಗುತ್ತದೆಯೇ?’ ಎಂದರು.</p><p>‘ದೆಹಲಿಗೆ ಹೋಗಿರುವವರನ್ನು ನೀವು (ಮಾಧ್ಯಮದವರು) ಪ್ರಶ್ನಿಸಬೇಕು. ನಾವು ಕೂಡ ಅವರ ರೀತಿ ಶಾಸಕರು ಅಷ್ಟೆ. ಕೆಲಸವಿದ್ದಾಗಲೆಲ್ಲಾ ನಾನೂ ದೆಹಲಿಗೆ ಹೋಗುತ್ತಿರುತ್ತೇನೆ. ಅಲ್ಲದೇ, ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಳಿಯೂ ಹೋಗುತ್ತಿರುತ್ತೇನೆ. ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.</p><p>ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿ.ಕೆ.ಶಿವಕುಮಾರ್ ಭೇಟಿ ಮಾಡುತ್ತಿರುವ ಕುರಿತ ಪ್ರಶ್ನೆಗೆ, ‘ಖರ್ಗೆ ಅವರ ಭೇಟಿ ವಿಚಾರ ನನಗೆ ಆ ವಿಚಾರ ಗೊತ್ತಿಲ್ಲ. ಸಮಯ ಸಿಕ್ಕಿದರೆ ನಾನು ಕೂಡ ಭೇಟಿ ಮಾಡುತ್ತೇನೆ’ ಎಂದರು.</p><p>ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆಯವರು ಹೋಟೆಲೊಂದರಲ್ಲಿ 100 ಕೊಠಡಿ ಕಾಯ್ದಿರಿಸಿರುವ ಮಾಹಿತಿ ಇದೆಯಲ್ಲಾ ಎಂಬ ಪ್ರಶ್ನೆಗೆ, ‘ಅದಕ್ಕೆ ಸಾಕ್ಷಿ ಏನಿದೆ? ನೂರು ಕೊಠಡಿಗಳು ಆ ಹೋಟೆಲ್ನಲ್ಲಿ ಇವೆಯೇ? ಇಡೀ ಹೋಟೆಲ್ ಅನ್ನೇ ಕಾಯ್ದಿರಿಸಬೇಕಾಗುತ್ತದೆ’ ಎಂದು ಹೇಳಿದರು.</p><p>ಸಚಿವ ಸತೀಶ ಜಾರಕಿಹೊಳಿ ನಿವಾಸದಲ್ಲಿ ನಡೆದಿರುವ ಸಭೆ ಕುರಿತು ಪ್ರತಿಕ್ರಿಯಿಸಿ, ‘ಯಾವಾಗ ಸಭೆ ನಡೆಸಿದರು? ನನಗೆ ಆ ವಿಚಾರ ಗೊತ್ತಿಲ್ಲ. ಪರಮೇಶ್ವರ, ಜಾರಕಿಹೊಳಿ ಹಿರಿಯ ಸಚಿವರು. ದೊಡ್ಡವರು ಆಗಾಗ್ಗೆ ಊಟಕ್ಕೆ ಸೇರುತ್ತಿರುತ್ತಾರೆ’ ಎಂದರು.</p><p>ನಮ್ಮಲ್ಲಿ ಯಾವುದೇ ಗುಟ್ಟು ಇಲ್ಲ. ನಾನು ಸುಮಾರು ನಾಲ್ಕು ಗಂಟೆಯಿಂದ ಇಲ್ಲಿಯೇ ಕೆಡಿಪಿ ಸಭೆಯಲ್ಲಿಯೇ ಇದ್ದೇನೆ. ಪತ್ನಿ ಹೊರತುಪಡಿಸಿ ಬೇರೆ ಯಾರ ಜೊತೆ ಮೊಬೈಲ್ನಲ್ಲಿ ನಾನು ಮಾತನಾಡಿಲ್ಲ. ಊಟ ಮಾಡಿದ್ದೀರಾ ಎಂದು ಕೇಳಲು ಪತ್ನಿ ಕರೆ ಮಾಡಿದ್ದರು ಅಷ್ಟೆ ಎಂದು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ಹೈಕಮಾಂಡ್ ಮಾತನಾಡಿಸಲು ಕೆಲ ಶಾಸಕರು ದೆಹಲಿಗೆ ಹೋಗಿರಬಹುದು. ನಮ್ಮ ಪಕ್ಷದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದು ಹೈಕಮಾಂಡ್ ಮಾತ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.</p><p>ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿಯಾಗಿ ಯಾರಿರಬೇಕು, ಯಾರನ್ನು ಇಳಿಸಬೇಕು ಎಂಬುದನ್ನು ನಿರ್ಧಾರ ಮಾಡುವವರು ದೊಡ್ಡವರು. ನಾನು, ಕೊತ್ತೂರು ಮಂಜುನಾಥ್, ರೂಪಕಲಾ ಶಶಿಧರ್ ಹೇಳಲು ಆಗುತ್ತದೆಯೇ?’ ಎಂದರು.</p><p>‘ದೆಹಲಿಗೆ ಹೋಗಿರುವವರನ್ನು ನೀವು (ಮಾಧ್ಯಮದವರು) ಪ್ರಶ್ನಿಸಬೇಕು. ನಾವು ಕೂಡ ಅವರ ರೀತಿ ಶಾಸಕರು ಅಷ್ಟೆ. ಕೆಲಸವಿದ್ದಾಗಲೆಲ್ಲಾ ನಾನೂ ದೆಹಲಿಗೆ ಹೋಗುತ್ತಿರುತ್ತೇನೆ. ಅಲ್ಲದೇ, ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಳಿಯೂ ಹೋಗುತ್ತಿರುತ್ತೇನೆ. ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.</p><p>ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿ.ಕೆ.ಶಿವಕುಮಾರ್ ಭೇಟಿ ಮಾಡುತ್ತಿರುವ ಕುರಿತ ಪ್ರಶ್ನೆಗೆ, ‘ಖರ್ಗೆ ಅವರ ಭೇಟಿ ವಿಚಾರ ನನಗೆ ಆ ವಿಚಾರ ಗೊತ್ತಿಲ್ಲ. ಸಮಯ ಸಿಕ್ಕಿದರೆ ನಾನು ಕೂಡ ಭೇಟಿ ಮಾಡುತ್ತೇನೆ’ ಎಂದರು.</p><p>ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆಯವರು ಹೋಟೆಲೊಂದರಲ್ಲಿ 100 ಕೊಠಡಿ ಕಾಯ್ದಿರಿಸಿರುವ ಮಾಹಿತಿ ಇದೆಯಲ್ಲಾ ಎಂಬ ಪ್ರಶ್ನೆಗೆ, ‘ಅದಕ್ಕೆ ಸಾಕ್ಷಿ ಏನಿದೆ? ನೂರು ಕೊಠಡಿಗಳು ಆ ಹೋಟೆಲ್ನಲ್ಲಿ ಇವೆಯೇ? ಇಡೀ ಹೋಟೆಲ್ ಅನ್ನೇ ಕಾಯ್ದಿರಿಸಬೇಕಾಗುತ್ತದೆ’ ಎಂದು ಹೇಳಿದರು.</p><p>ಸಚಿವ ಸತೀಶ ಜಾರಕಿಹೊಳಿ ನಿವಾಸದಲ್ಲಿ ನಡೆದಿರುವ ಸಭೆ ಕುರಿತು ಪ್ರತಿಕ್ರಿಯಿಸಿ, ‘ಯಾವಾಗ ಸಭೆ ನಡೆಸಿದರು? ನನಗೆ ಆ ವಿಚಾರ ಗೊತ್ತಿಲ್ಲ. ಪರಮೇಶ್ವರ, ಜಾರಕಿಹೊಳಿ ಹಿರಿಯ ಸಚಿವರು. ದೊಡ್ಡವರು ಆಗಾಗ್ಗೆ ಊಟಕ್ಕೆ ಸೇರುತ್ತಿರುತ್ತಾರೆ’ ಎಂದರು.</p><p>ನಮ್ಮಲ್ಲಿ ಯಾವುದೇ ಗುಟ್ಟು ಇಲ್ಲ. ನಾನು ಸುಮಾರು ನಾಲ್ಕು ಗಂಟೆಯಿಂದ ಇಲ್ಲಿಯೇ ಕೆಡಿಪಿ ಸಭೆಯಲ್ಲಿಯೇ ಇದ್ದೇನೆ. ಪತ್ನಿ ಹೊರತುಪಡಿಸಿ ಬೇರೆ ಯಾರ ಜೊತೆ ಮೊಬೈಲ್ನಲ್ಲಿ ನಾನು ಮಾತನಾಡಿಲ್ಲ. ಊಟ ಮಾಡಿದ್ದೀರಾ ಎಂದು ಕೇಳಲು ಪತ್ನಿ ಕರೆ ಮಾಡಿದ್ದರು ಅಷ್ಟೆ ಎಂದು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>