ಕಾಡಾನೆ ದಾಳಿಯಿಂದಾಗಿ ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಪದೇ ಪದೇ ಈ ರೀತಿಯ ಅವಘಡ ಸಂಭವಿಸುತ್ತಿವೆ. ಕಷ್ಟಪಟ್ಟು ಬೆಳೆ ಬೆಳೆದ ರೈತನ ಬಾಳು ಅಸಹನೀಯವಾಗಿದೆ. ಈ ಸಂಬಂಧ ಕಾಡಾನೆಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿತ್ತು. ಅದರಂತೆ ಸೋಲಾರ್ ಬೇಲಿಯನ್ನು ಕಾಮ ಸಮುದ್ರ ಸಮೀಪದ ಕಾಡಿನಲ್ಲಿ ಅಳವ ಡಿಸುತ್ತಿದ್ದು, ಸದ್ಯದಲ್ಲಿಯೇ ಕೆಜಿಎಫ್ ತಾಲ್ಲೂಕಿನ ಗ್ರಾಮಗಳಲ್ಲಿ ಕೂಡ ಅಳವಡಿಸಲಾಗುವುದು ಎಂದರು.