<p><strong>ಬಂಗಾರಪೇಟೆ:</strong> ‘ಕೆರೆಕೋಡಿ ಬಡಾವಣೆಗೆ ಸ್ವಂತ ಖರ್ಚಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗುವುದು’ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಭರವಸೆ ನೀಡಿದರು.</p>.<p>ಪಟ್ಟಣದ ಕೆರೆಕೋಡಿ ಬಡಾವಣೆಯಲ್ಲಿ ಭಾನುವಾರ ₹ 12 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.</p>.<p>ನೀರು ಶುದ್ಧೀಕರಣ ಘಟಕಕ್ಕೆ ಜಾಗ ಇಲ್ಲದ ಕಾರಣ ಇಲ್ಲಿಯತನಕ ಘಟಕ ಅಳವಡಿಸಲಾಗಿಲ್ಲ. ಈಗ ಮುಖಂಡ ಜಯರಾಮಣ್ಣ ಅವರು ತಮ್ಮ ಸ್ವಂತ ಜಾಗ ನೀಡಲು ಒಪ್ಪಿದ್ದಾರೆ. ತಿಂಗಳ ಒಳಗೆ ಘಟಕ ಅಳವಡಿಸಲಾಗುವುದು ಎಂದರು.</p>.<p>ಘಟಕ ಅಳವಡಿಸುವ ತನಕ ಎ ಎನ್ ಟ್ರಸ್ಟ್ನಿಂದ 20 ಲೀಟರ್ ನೀರಿನ ಕ್ಯಾನ್ ಮತ್ತು ಬಿಸ್ಲೆರಿ ನೀರು ಪೂರೈಕೆ ಮಾಡಲಾಗುವುದು. ಬಡಾವಣೆಯಲ್ಲಿ ಕುಡಿಯುವ ನೀರಿಗೆ ಬಹಳಷ್ಟು ಸಮಸ್ಯೆಯಿತ್ತು. ಹಾಗಾಗಿಯೇ 7 ಕೊಳವೆಬಾವಿ ಕೊರೆಯಿಸಲಾಗಿದೆ. ಜತೆಗೆ ಮುಖಂಡರ ಕೋರಿಕೆ ಮೇರೆಗೆ ಬಡಾವಣೆಗೆ ಹೈಮಾಸ್ಟ್ ದ್ವೀಪ ಅಳವಡಿಸಲಾಗುವುದು ಎಂದರು.</p>.<p>ಇದುವರೆಗೂ ಪುರಸಭೆ ಮತ್ತು ಶಾಸಕರ ಅನುದಾನದಿಂದ ಇಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗಿದೆಯೇ ಹೊರತು ಇಲ್ಲಿನ ಪುರಸಭೆ ಸದಸ್ಯರ ಕೊಡುಗೆ ಶೂನ್ಯ. ಮಾಡಿರುವ ಕಾಮಗಾರಿ ಮುಂದೆ ಪೋಸ್ ಕೊಟ್ಟು ಫೇಸ್ಬುಕ್ನಲ್ಲಿ ಹಾಕಿಕೊಳ್ಳುವುದಕ್ಕೆ ಸೀಮಿತವಾಗಿದ್ದಾರೆ ಎಂದು ಟೀಕಿಸಿದರು.</p>.<p>ಕಾಂಗ್ರೆಸ್ ಬಡವರ ಪರ ಕೆಲಸ ಮಾಡುತ್ತಿದೆ. ಎಸ್.ಸಿ, ಎಸ್.ಟಿ ಸಮುದಾಯದವರಿಗೆ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಲು ಪುರಸಭೆ ₹2.75 ಲಕ್ಷ ನೀಡಲಿದೆ. ಸೂರು ಇಲ್ಲದಿರುವ ಇತರೇ ಸಮುದಾಯದವರು ಕೂಡ ಪುರಸಭೆಗೆ ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.</p>.<p>ಮನೆ ಕೊಡಿಸುವುದಾಗಿ ಹಣ ತೆಗೆದುಕೊಳ್ಳುವವರನ್ನು ನಂಬಿ ಮೋಸ ಹೋಗಬೇಡಿ ಎಂದು ಕಿವಿಮಾತು ಹೇಳಿದರು.</p>.<p>ಪುರಸಭೆ ಅಧ್ಯಕ್ಷ ಫರ್ಜಾನಾ ಸುಹೇಲ್, ಸ್ಥಾಯಿಸಮಿತಿ ಅಧ್ಯಕ್ಷ ಪ್ರಭಾಕರ್, ಸದಸ್ಯರಾದ ಆರೋಗ್ಯರಾಜನ್, ಶೆಫಿ, ಗೋವಿಂದ, ವೆಂಕಟೇಶ್, ಮುಖಂಡರಾದ ಮುನಿಯಪ್ಪ, ಕೃಷ್ಣಮೂರ್ತಿ, ಬ್ಯಾಂಕ್ ನಾರಾಯಣಪ್ಪ, ಶ್ರೀನಿವಾಸ್, ಕಣ್ಣಾ ಜಯರಾಮಪ್ಪ, ಮೋಹನ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ:</strong> ‘ಕೆರೆಕೋಡಿ ಬಡಾವಣೆಗೆ ಸ್ವಂತ ಖರ್ಚಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗುವುದು’ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಭರವಸೆ ನೀಡಿದರು.</p>.<p>ಪಟ್ಟಣದ ಕೆರೆಕೋಡಿ ಬಡಾವಣೆಯಲ್ಲಿ ಭಾನುವಾರ ₹ 12 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.</p>.<p>ನೀರು ಶುದ್ಧೀಕರಣ ಘಟಕಕ್ಕೆ ಜಾಗ ಇಲ್ಲದ ಕಾರಣ ಇಲ್ಲಿಯತನಕ ಘಟಕ ಅಳವಡಿಸಲಾಗಿಲ್ಲ. ಈಗ ಮುಖಂಡ ಜಯರಾಮಣ್ಣ ಅವರು ತಮ್ಮ ಸ್ವಂತ ಜಾಗ ನೀಡಲು ಒಪ್ಪಿದ್ದಾರೆ. ತಿಂಗಳ ಒಳಗೆ ಘಟಕ ಅಳವಡಿಸಲಾಗುವುದು ಎಂದರು.</p>.<p>ಘಟಕ ಅಳವಡಿಸುವ ತನಕ ಎ ಎನ್ ಟ್ರಸ್ಟ್ನಿಂದ 20 ಲೀಟರ್ ನೀರಿನ ಕ್ಯಾನ್ ಮತ್ತು ಬಿಸ್ಲೆರಿ ನೀರು ಪೂರೈಕೆ ಮಾಡಲಾಗುವುದು. ಬಡಾವಣೆಯಲ್ಲಿ ಕುಡಿಯುವ ನೀರಿಗೆ ಬಹಳಷ್ಟು ಸಮಸ್ಯೆಯಿತ್ತು. ಹಾಗಾಗಿಯೇ 7 ಕೊಳವೆಬಾವಿ ಕೊರೆಯಿಸಲಾಗಿದೆ. ಜತೆಗೆ ಮುಖಂಡರ ಕೋರಿಕೆ ಮೇರೆಗೆ ಬಡಾವಣೆಗೆ ಹೈಮಾಸ್ಟ್ ದ್ವೀಪ ಅಳವಡಿಸಲಾಗುವುದು ಎಂದರು.</p>.<p>ಇದುವರೆಗೂ ಪುರಸಭೆ ಮತ್ತು ಶಾಸಕರ ಅನುದಾನದಿಂದ ಇಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗಿದೆಯೇ ಹೊರತು ಇಲ್ಲಿನ ಪುರಸಭೆ ಸದಸ್ಯರ ಕೊಡುಗೆ ಶೂನ್ಯ. ಮಾಡಿರುವ ಕಾಮಗಾರಿ ಮುಂದೆ ಪೋಸ್ ಕೊಟ್ಟು ಫೇಸ್ಬುಕ್ನಲ್ಲಿ ಹಾಕಿಕೊಳ್ಳುವುದಕ್ಕೆ ಸೀಮಿತವಾಗಿದ್ದಾರೆ ಎಂದು ಟೀಕಿಸಿದರು.</p>.<p>ಕಾಂಗ್ರೆಸ್ ಬಡವರ ಪರ ಕೆಲಸ ಮಾಡುತ್ತಿದೆ. ಎಸ್.ಸಿ, ಎಸ್.ಟಿ ಸಮುದಾಯದವರಿಗೆ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಲು ಪುರಸಭೆ ₹2.75 ಲಕ್ಷ ನೀಡಲಿದೆ. ಸೂರು ಇಲ್ಲದಿರುವ ಇತರೇ ಸಮುದಾಯದವರು ಕೂಡ ಪುರಸಭೆಗೆ ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.</p>.<p>ಮನೆ ಕೊಡಿಸುವುದಾಗಿ ಹಣ ತೆಗೆದುಕೊಳ್ಳುವವರನ್ನು ನಂಬಿ ಮೋಸ ಹೋಗಬೇಡಿ ಎಂದು ಕಿವಿಮಾತು ಹೇಳಿದರು.</p>.<p>ಪುರಸಭೆ ಅಧ್ಯಕ್ಷ ಫರ್ಜಾನಾ ಸುಹೇಲ್, ಸ್ಥಾಯಿಸಮಿತಿ ಅಧ್ಯಕ್ಷ ಪ್ರಭಾಕರ್, ಸದಸ್ಯರಾದ ಆರೋಗ್ಯರಾಜನ್, ಶೆಫಿ, ಗೋವಿಂದ, ವೆಂಕಟೇಶ್, ಮುಖಂಡರಾದ ಮುನಿಯಪ್ಪ, ಕೃಷ್ಣಮೂರ್ತಿ, ಬ್ಯಾಂಕ್ ನಾರಾಯಣಪ್ಪ, ಶ್ರೀನಿವಾಸ್, ಕಣ್ಣಾ ಜಯರಾಮಪ್ಪ, ಮೋಹನ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>