ಸರ್ಕಾರ ಜನಪರ, ಕಾರ್ಮಿಕರ ಪರವಾಗಿಲ್ಲ. ಹತ್ತು ವರ್ಷದ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇದ್ದುದಕ್ಕಿಂತ ಇಂದು ಎರಡು ಪಟ್ಟು ಬೆಲೆ ಏರಿಕೆಯಾಗಿದೆ. ಅಡುಗೆ ಅನಿಲ ಸಿಲಿಂಡರ್ ದರ ₹ 900 ದಾಟಿದೆ. ದಿನಬಳಕೆಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಎಲ್ಲಾ ಪದಾರ್ಥಗಳು ಏರುತ್ತಿದ್ದರೂ ಸುಮ್ಮನೆ ಇರುವ ಈ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಜನರಿಗೆ ಅನ್ಯಾಯ ಮಾಡಲು ಹೊರಟಿದೆ. ನ್ಯಾಯ, ಧರ್ಮಪಾಲನೆ ಮಾಡದವರು ರಾಷ್ಟ್ರವನ್ನು ಆಳುತ್ತಿದ್ದಾರೆ ಎಂದು ದೂರಿದರು.